Home ಮುಖಪುಟ ಸುದ್ದಿ ಬಾವಿಗೆ ಬಿದ್ದು ಬಾಲಕಿಯರಿಬ್ಬರ ಸಾವು:ರಕ್ಷಣೆಗೆ ತೆರಳಿದ ತಂದೆ ನಾಪತ್ತೆ

ಬಾವಿಗೆ ಬಿದ್ದು ಬಾಲಕಿಯರಿಬ್ಬರ ಸಾವು:ರಕ್ಷಣೆಗೆ ತೆರಳಿದ ತಂದೆ ನಾಪತ್ತೆ

ವಿಜಯಪುರ,ಆ.೨೨-ಕಾಲು ಜಾರಿ ತೆರದ ಬಾವಿಗೆ ಬಿದ್ದು ಇಬ್ಬರು ಬಾಲಕಿಯರು ಸಾವನ್ನಪ್ಪಿದ ಘಟನೆ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ.


ಬಳಬಟ್ಟಿ ಗ್ರಾಮದ ಸಾಕ್ಷಿ ( ೧೫ ), ರಕ್ಷಿತಾ ( ೧೦ ) ಮೃತ ಬಾಲಕಿಯರು. ಇವರನ್ನು ರಕ್ಷಿಸಲು ತಂದೆ ಸಾಬಣ್ಣ ( ೪೦ ) ಕೂಡ ಬಾವಿಗೆ ಜಿಗದಿದ್ದು, ನಾಪತ್ತೆಯಾಗಿದ್ದಾರೆ. ಸಾಬಣ್ಣ ಅವರಿಗೆ ಈಜು ಬರುತ್ತಿರಲಿಲ್ಲ ಎಂದು ತಿಳಿದುಬಂದಿದೆ.


ತೆಪ್ಪದ ಮೂಖಾಂತರ ಗ್ರಾಮಸ್ಥರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿದ್ದು, ಸಾಬಣ್ಣ ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.


ಸುದ್ದಿ ತಿಳಿದ ತಕ್ಷಣವೇ ನಿಡಗುಂದಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.