Home ಜಿಲ್ಲೆ ಸಮಾಜದ ಉನ್ನತಿಗೆ ಅವಧೂತರ ಶ್ರಮ

ಸಮಾಜದ ಉನ್ನತಿಗೆ ಅವಧೂತರ ಶ್ರಮ

ಬೀದರ್: ಡಾ. ಬಸವಲಿಂಗ ಅವಧೂತರು ಸಮಾಜದ ಉನ್ನತಿಗೆ ಅವಿರತ ಶ್ರಮಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.
ನೆರೆಯ ತೆಲಂಗಾಣದ ಜಹೀರಾಬಾದ್ ಸಮೀಪದ ಮಲಯ್ಯಗಿರಿ ಆಶ್ರಮದಲ್ಲಿ ಬುಧವಾರ ನಡೆದ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರ ೫೦ನೇ ಜನ್ಮದಿನಾಚರಣೆ ಹಾಗೂ ಅವಧೂತ ವೈಭವ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನಿಷ್ಠ ಪದ್ಧತಿ, ಭಕ್ತರ ಸಂಕಷ್ಟ ನಿವಾರಣೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಸರಳತೆಗೆ ಇನ್ನೊಂದು ಹೆಸರಾಗಿದ್ದಾರೆ. ಮಠದಿಂದ ಸ್ವಾಮೀಜಿ ಅಲ್ಲ, ಸ್ವಾಮೀಜಿಯಿಂದ ಮಠ ಎಂಬುದ್ದನ್ನು ತೋರಿಸಿದ್ದಾರೆ ಎಂದು ತಿಳಿಸಿದರು.
ಮಲ್ಲಯ್ಯಗಿರಿ ಹಾಗೂ ಕಲಬುರಗಿ ಜಿಲ್ಲೆಯ ದೇಗಲಮಡಿಯಲ್ಲಿ ಬಹಳ ಪರಿಶ್ರಮ ಪಟ್ಟು ಆಶ್ರಮ ಕಟ್ಟಿ ಬೆಳೆಸಿದ್ದಾರೆ. ಜನರಿಗೆ ಸನ್ಮಾರ್ನವನ್ನು ತೋರುತ್ತಿದ್ದಾರೆ ಎಂದು ತಿಳಿಸಿದರು.
ಮಲ್ಲಯ್ಯಗಿರಿ ಆಶ್ರಮ ಬೃಹತ್ ಆಗಿ ಬೆಳೆಯಲು ಭಕ್ತರೇ ಕಾರಣ. ಸಮಾಜದ ಒಳಿತು ಹಾಗೂ ಭಕ್ತರ ಕಲ್ಯಾಣವೇ ನನ್ನ ಧ್ಯೇಯ ಎಂದು ಸಾನಿಧ್ಯ ವಹಿಸಿದ್ದ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಹೇಳಿದರು.
ತಮ್ಮ ೫೦ನೇ ಜನ್ಮದಿನದ ಸಂದರ್ಭದಲ್ಲಿ ಸಾಹಿತಿಗಳು ಹಾಗೂ ಲೇಖಕರು ಕನ್ನಡದಲ್ಲಿ ಅಭಿನಂದನಾ ಗ್ರಂಥ ಹೊರ ತಂದಿರುವುದು ಸಂತಸ ಉಂಟು ಮಾಡಿದೆ. ಬರುವ ದಿನಗಳಲ್ಲಿ ಗ್ರಂಥವನ್ನು ತೆಲುಗು, ಮರಾಠಿ ಹಾಗೂ ಇಂಗ್ಲಿ???ಗೆ ತರ್ಜುಮೆ ಮಾಡಲಾಗುವುದು ಎಂದು ತಿಳಿಸಿದರು.
ಅವಧೂತ ವೈಭವ ಅದ್ಭುತ ಕೃತಿಯಾಗಿದೆ. ೩೦೪ ಪುಟಗಳ ಕೃತಿ ೬೨ ಲೇಖನ, ಕವನಗಳನ್ನು ಒಳಗೊಂಡಿದೆ. ಸಾಹಿತಿಗಳು, ಲೇಖಕರು ಹಾಗೂ ಬರಹಗಾರರು ಡಾ. ಬಸವಲಿಂಗ ಅವಧೂತರ ಜೀವನ ಹಾಗೂ ಸಾಧನೆಯನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಎಲ್ಲರೂ ಓದಲೇಬೇಕಾದ ಕೃತಿ ಇದು ಎಂದು ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ
ಮಲ್ಲೇಪುರಂ ಜಿ. ವೆಂಕಟೇಶ್ ಹೇಳಿದರು.
ಬಸವಲಿಂಗ ಅವಧೂತರ ಸಮಾಜೋ ಧಾರ್ಮಿಕ ಕಾರ್ಯಗಳು ಮಾದರಿಯಾಗಿವೆ ಎಂದು ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.
ಕರ್ನಾಟಕ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ಆಶಯ ನುಡಿ ಆಡಿದರು.
ಇದೇ ವೇಳೆ ಡಾ. ಬಸವಲಿಂಗ ಅವಧೂತರು ರಚಿಸಿದ ‘ಒಲಿದು ಹಾಡಿದ ಗೀತೆಗಳು’ ಕೃತಿ ಹಾಗೂ ಬೀದ???ನ ಶಿಕ್ಷಕಿ, ಸಾಹಿತಿ ಮಾಣಿಕಾದೇವಿ ಪಾಟೀಲ ಅವರ ‘ಬಾಳ್ವೆಗೆ ಬದುಕು’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಡಾ. ಎಸ್.ಜಿ. ಸುಶೀಲಮ್ಮ ಸಾನಿಧ್ಯ ವಹಿಸಿದ್ದರು. ಮಾಜಿ ಸಂಸದ ಬಿ.ಬಿ. ಪಾಟೀಲ, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷೆ ಸುನಿತಾ ಪಾಟೀಲ, ಮುಖಂಡ ಹಣಮಂತರಾವ್ ಪಾಟೀಲ, ಅಭಿನಂದನಾ ಗ್ರಂಥದ ಸಂಪಾದಕ ದೇವೇಂದ್ರ ಕರಂಜೆ, ನಿವೃತ್ತ ಮುಖ್ಯಶಿಕ್ಷಕ ಸಿದ್ದಾರೆಡ್ಡಿ ನಾಗೋರಾ, ಕನ್ನಡ ಸಾಹಿತ್ಯ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎಂ. ಮಚ್ಚೆ, ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕ ಈಶ್ವರಯ್ಯ ಕೊಡಂಬಲ್, ಡಾ. ರಾಮಚಂದ್ರ ಗಣಾಪುರ, ಮಲ್ಲಿಕಾರ್ಜುನ ಪಾಟೀಲ ಮುಗನೂರ, ಶಿವಕುಮಾರ ಮೂಲಗೆ, ಶಿವಕುಮಾರ ಪಟಪಳ್ಳಿ ಮತ್ತಿತರರು ಇದ್ದರು. ಪತ್ರಕರ್ತ ನಾಗೇಶ ಪ್ರಭಾ ನಿರೂಪಿಸಿದರು.
ಗುರು ಪೂರ್ಣಿಮೆ ಅಂಗವಾಗಿ ಭಕ್ತರು ರುದ್ರಾಕ್ಷಿ ಹಾಗೂ ವಿಭೂತಿಗಳಿಂದ ಡಾ. ಬಸವಲಿಂಗ ಅವಧೂತರ ತುಲಾಭಾರ ಮಾಡಿದರು. ವಿವಿಧೆಡೆಯ ಅಪಾರ ಭಕ್ತರು ಪಾಲ್ಗೊಂಡಿದ್ದರು.


ಅವಧೂತ ರತ್ನ: ಮಲ್ಲೇಪುರಂ ಬಣ್ಣನೆ

ಬೀದರ್: ಡಾ. ಬಸವಲಿಂಗ ಅವಧೂತರು ‘ಅವಧೂತ ರತ್ನ’ರಾಗಿದ್ದಾರೆ ಎಂದು ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಬಣ್ಣಿಸಿದರು.
ಮಲ್ಲಯ್ಯಗಿರಿ ಆಶ್ರಮದಲ್ಲಿ ನಡೆದ ಡಾ. ಬಸವಲಿಂಗ ಅವಧೂತರ ೫೦ನೇ ಜನ್ಮದಿನದ ಸುವರ್ಣ ಮಹೋತ್ಸವ ಹಾಗೂ ಅವಧೂತ ವೈಭವ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅವಧೂತರು ಎಲ್ಲ ತ್ಯಾಗ ಮಾಡಿದವರು. ಅಂಥವರಲ್ಲಿ ಬಸವಲಿಂಗ ಅವಧೂತರು ಒಬ್ಬರು ಎಂದು ಹೇಳಿದರು.
ಅವಧೂತರಲ್ಲಿ ತೇಜಸ್ಸು, ಹೃದಯ ವೈಶಾಲ್ಯತೆ, ಸೇವಾ ತುಡಿತ ಇದೆ. ಅಂತೆಯೇ ಅವರು ಅಸಂಖ್ಯಾತ ಭಕ್ತರ ಹೃದಯದಲ್ಲಿ ನೆಲೆ ನಿಂತಿದ್ದಾರೆ ಎಂದು ಹೇಳಿದರು.