Home Uncategorized ಆಲೂರ ವೆಂಕಟರಾವ ಅವರ ೧೪೬ನೇ ಜನ್ಮದಿನಾಚರಣೆ ಕರ‍್ಯಕ್ರಮ

ಆಲೂರ ವೆಂಕಟರಾವ ಅವರ ೧೪೬ನೇ ಜನ್ಮದಿನಾಚರಣೆ ಕರ‍್ಯಕ್ರಮ


ಧಾರವಾಡ,ಜು.೧೬:ರ‍್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಅವರ ೧೪೬ ನೇ ಜನ್ಮದಿನಾಚರಣೆ ಹಾಗೂ ವಿಶೇಷ ಉಪನ್ಯಾಸ ಮತ್ತು ರ‍್ನಾಟಕ ಏಕೀಕರಣ ಹೋರಾಟಗಾರರ ವ್ಯಕ್ತಿಚಿತ್ರ ಮಾಲೆ ಪುಸ್ತಕಗಳ ಬಿಡುಗಡೆ ಕರ‍್ಯಕ್ರಮು ನಗರದ ರ‍್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ರ‍್ಪಡಿಸಲಾಗಿತ್ತು.


ಪುಸ್ತಕ ಲೋಕರ‍್ಪಣೆಗೊಳಿಸಿದ ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಮಾತನಾಡಿ, ರ‍್ನಾಟಕ ಏಕೀಕರಣ ಚಳುವಳಿಯಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ತೊರೆದು ಕನ್ನಡ ಅಸ್ಮಿತೆಗಾಗಿ ಹೋರಾಡಿದ ಪ್ರಮುಖ ವ್ಯಕ್ತಿಗಳಲ್ಲಿ ಆಲೂರ ವೆಂಕಟರಾವ ಅವರು ಅಗ್ರಗಣ್ಯರಾಗಿದ್ದಾರೆ. ಅವರು ವಕೀಲ ವೃತ್ತಿಯನ್ನು ಬದಿಗೊತ್ತಿ ಕನ್ನಡ ಭಾಷೆಯ ಉಳಿವಿಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದರು. ಇಂತಹ ಮಹನಿಯರ ವ್ಯಕಿತ್ವವನ್ನು ಇಂದಿನ ಯುವ ಪೀಳಿಗೆ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.


ರ‍್ನಾಟಕ ಏಕೀಕರಣ ಹೋರಾಟಗಾರರ ವ್ಯಕ್ತಿಚಿತ್ರ ಮಾಲೆ ಪುಸ್ತಕಗಳ ಬಿಡುಗಡೆ ಮಾಡಿ ಅಗಾಧವಾದ ಹೋರಾಟದ ಹಾದಿಯನ್ನು ಸಂಕ್ಷಿಪ್ತಗೊಳಿಸಿ ಸರಳವಾಗಿ ಎಲ್ಲರೂ ಓದಿ ಅದರ ಮೂಲವನ್ನು ತಿಳಿದುಕೊಳ್ಳಲು ವಿದ್ಯರ‍್ಥಿಗಳು, ಸಾಹಿತ್ಯಾಸಕ್ತರು ಆಸಕ್ತಿ ವಹಿಸಬೇಕೆಂದು ತಿಳಿಸಿದರು.


ಮುಖ್ಯ ಅತಿಥಿಗಳಾಗಿ ಹಾಗೂ ವಿಶೇಷ ಉಪನ್ಯಾಸ ಮಾಡಿದ ಶಿವಪುತ್ರಪ್ಪ ಆರ್.ಆಶಿ ಅವರು ಮಾತನಾಡಿ, ಕನ್ನಡ ನಾಡಿನ ಉಳಿವಿಗಾಗಿ ಹೋರಾಡಿದ ಚೇತನರ ಪೈಕಿ ಎರಡು ಗಣ್ಯರ ಪುಸ್ತಕ ಮಾಲಿಕೆ ಪರಿಚಯಿಸಿ ಅದರ ಸದ್ಭಳಕೆಯನ್ನು ಕನ್ನಡ ಪ್ರೇಮಿಗಳು ಸದುಪಯೋಗಪಡಿಸಿಕೊಳ್ಳಬೇಕು. ರ‍್ನಾಟಕ ವಿದ್ಯಾರ‍್ಧಕ ಸಂಘ, ಸಾಹಿತ್ಯ ಪರಿಷತ್ ಸ್ಥಾಪಿಸಿ ಕನ್ನಡ ಭಾಷಿಕರನ್ನು ಒಟ್ಟುಗೂಡಿಸಲು, ಭಾಷಾವಾರು ಪ್ರಾಂತ್ಯ ರಚನೆ ಮಾಡಲು ಅನೇಕ ಮಹನೀಯರು ಒಟ್ಟಾಗಿ ಕೆಲಸ ಮಾಡಿದ್ದರು. ಅಂತಹ ಸಂಸ್ಥೆಗಳ ಮುಂದಾಳತ್ವ ವಹಿಸಿ, ಮುಂಚೂಣಿ ನಾಯಕರಲ್ಲಿ ಆಲೂರ ವೆಂಕಟರಾವ, ಡೆಪ್ಯೂಟಿ ಚನ್ನಬಸಪ್ಪನವರು, ಮುದವೀಡು ಕೃಷ್ಣರಾಯರು, ಬಿಂದೂರಾವ್ ಮುತಾಲಿಕ್ ದೇಸಾಯಿ, ಕಡಪಾ ರಾಘವೇಂದ್ರ ರಾವ್ ಹಾಗೂ ಬಳ್ಳಾರಿ ಸಿದ್ದಮ್ಮ, ಜಯದೇವಿತಾಯಿ ಲಿಗಾಡೆ ಇನ್ನೂ ಮುಂತಾದ ಮಹಿಳೆಯರು ಕನ್ನಡ ನಾಡು ಕಟ್ಟಿದ ಮಹನೀಯರಲ್ಲಿ ಪ್ರಮುಖರಾದವರು ಎಂದು ಹೇಳಿದರು.


ಟ್ರಸ್ಟ್ನ ಅಧ್ಯಕ್ಷರಾದ ರಂಜಾನ ರ‍್ಗಾ ಅವರು ಮಾತನಾಡಿ, ರ‍್ನಾಟಕ ಏಕೀಕರಣಕ್ಕಾಗಿ ಆಲೂರ ವೆಂಕಟರಾವ್ ಅವರು ಮಾಡಿದ ತ್ಯಾಗ ಅವಿಸ್ಮರಣೀಯವಾದದ್ದು. ೨೨ ಸಂಸ್ಥಾನಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಂದೆಡೆ ಸೇರಿಸಲು ಹಲವಾರು ರೀತಿಯ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಕನ್ನಡ ಭಾಷೆ ಆತ್ಮದ ಭಾಷೆಯಾಗಿದ್ದು, ಉಳಿದೆಲ್ಲ ಭಾಷೆಗಳನ್ನು ರ‍್ಥೈಸಿಕೊಳ್ಳುವ ಶಕ್ತಿ ಕನ್ನಡ ಭಾಷೆಯಾಗಿದೆ. ಇದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ರ‍್ತವ್ಯವಾಗಿರುತ್ತದೆ ಎಂದು ಹೇಳಿದರು.


ಕರ‍್ಯಕ್ರಮದಲ್ಲಿ ಟ್ರಸ್ಟ್ ಸದಸ್ಯರಾದ ಸಿ.ಯು ಬೆಳ್ಳಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಕರ‍್ಯರ‍್ಶಿ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ಪಾಟೀಲ ಮತ್ತು ಕಲ್ಪತರು ಮಹಿಳಾ ಸಂಘದವರು ಸಂಗೀತ ಕರ‍್ಯಕ್ರಮ ನಡೆಸಿಕೊಟ್ಟರು. ಟ್ರಸ್ಟ್ ಸದಸ್ಯರಾದ ದ್ರೌಪದಿ ವಿಜಾಪೂರ ವಂದಿಸಿದರು. ಮಾಡಿದರು. ವಿಶ್ವನಾಥ ಕುಲರ‍್ಣಿ, ಗೀತಾ ಆಲೂರ, ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.