
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.06. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಲಿಂಗಸೂಗೂರಿನಿಂದ ಆರಂಭಿಸಿರುವ ಪಾದಯಾತ್ರೆ ಇಂದು6 ನೇ ದಿನಕ್ಕೆ ತಲುಪಿದೆ.
ಪಾದಯಾತ್ರೆ ಗೆ ಮುನ್ನ ಇಂದು ಬೆಳ್ಳಂ ಬೆಳಗ್ಗೆ ಗಂಗಾವತಿ ಬಳಿಯ ಮರಳಿ ಗ್ರಾಮದಲ್ಲಿ ಕುರಿಗಾಯಿಗಳ ಜೊತೆ ಸಂವಾದ ನಡೆಸಿದರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ.ಅವರ ಸುಖ ದುಖಃ ವಿಚಾರಿಸಿ. ಅವರ ಬದುಕಿನ ಬಗ್ಗೆ ವಿಚಾರಿಸಿದರು. ನಂತರ ಪಾದಯಾತ್ರೆ ಕಂಪ್ಲಿ ಕಡೆ ಸಾಗಿ ಬಂತು.


































