
ಹುಬ್ಬಳ್ಳಿ, ಮಾ2: ನಗರದ ಕನಕದಾಸ ಶಿಕ್ಷಣ ಸಮಿತಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೇಯಾಜನ ಸೇವಾ ಫೌಂಡೇಶನ್ನ 6ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡಸಲಾಯಿತು.
ವಿವಿಧ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಸಮಾಜ ಮುಖಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇದೆ ಸಂದರ್ಭದಲ್ಲಿಭಾರತ ಭೂಷಣ ಸೇವಾ ರತ್ನ ಪ್ರಶಸ್ತಿ ಸಮಾಜ ಸೇವಕ ನಜೀರಅಹ್ಮದ ಕೋಲಕಾರ ಹಾಗೂ ಇತರರಿಗೆ ನೀಡಿ ಗೌರವಿಸಲಾಯಿತು.
ಸಾನಿಧ್ಯ: ಶ್ರೀಮಾತಾ ಮಾಣಿಕೇಶ್ವರಿ ಆಶ್ರಮದ ಶ್ರೀ ನಂದೀಶ್ವರಿ ಅಮ್ಮನವರು, ಡಾ. ಕಲ್ಲಯ್ಯಜ್ಜನವರು ಶ್ರೀ ವಿರೇಶ್ವರ ಪೂಣ್ಯಾಶ್ರಮ ಗದಗ, ಫಾ ಸತೀಶ ಫೆರ್ನಾಂಡಿಸ್ ವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಶಾಂತಣ್ಣ ಕಡಿವಾಲ. ಉಪಾಧ್ಯಕ್ಷರು, ಕನಕದಾಸ ಶಿಕ್ಷಣ ಸಮಿತಿ ವಹಿಸಿದ್ದರು. ವೆಂಕನಗೌಡ ಜಿ ಪಾಟೀಲ, ಡಾ.ಶೆರಣಪ್ಪ ಎಂ ಕೊಟಗಿ, ಸಂತೋಷ ವರ್ಣೇಕರ, ರಮೇಶ ಮಾದೇಪ್ಪನವರ, ಸಂಭಾಜಿ ಎಸ್ ಕಲಾಲ, ಸಿ ಎಸ್.ಮೆಹಬೂಬಬಾಷಾ, ಡಾ. ಎಚ್. ವಿ. ಬೆಳಗಲಿ, ಬಿರೇಶ ತಿರಕಪ್ಪನವರ, ಮುಂತಾದವರು ಪಾಲ್ಗೊಂಡಿದ್ದರು.





















