Home ಜಿಲ್ಲೆ ಬೆಂಗಳೂರು ರಾಜಕೀಯ ಪ್ರಮುಖರಿಗೆ ಎಸ್‌ಐಆರ್ ಆರ್ಜಿ ವಿತರಣೆ

ರಾಜಕೀಯ ಪ್ರಮುಖರಿಗೆ ಎಸ್‌ಐಆರ್ ಆರ್ಜಿ ವಿತರಣೆ

filter: 0; fileterIntensity: 0.0; filterMask: 0; captureOrientation: 0; runfunc: 0; algolist: 0; multi-frame: 0; brp_mask:0; brp_del_th:null; brp_del_sen:null; motionR: null; delta:null; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 250.0;aec_lux_index: 0;albedo: ;confidence: ;motionLevel: 0;weatherinfo: null;temperature: 43;zeissColor: bright;

ಕೋಲಾರ: ಬಿಜೆಪಿ ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ ಹಾಗೂ ನಗರಸಭೆ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್ ರವರಗಳ ಮನೆಗೆ ಮಂಗಳವಾರ ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್ ಜಂಬಗಿ, ತಹಶೀಲ್ದಾರ್ ಶ್ರೀನಿವಾಸ್, ಹಾಗೂ ನಗರಸಭೆ ಪೌರಾಯುಕ್ತ ವೆಂಕಟೇಶ್ ನಾಗನೂರ್ ಭೇಟಿ ನೀಡಿ ಎಸ್‌ಐಆರ್ ಆರ್ಜಿ ವಿತರಿಸಿದರು.


ದೇಶಾದ್ಯಂತ ಎಸ್‌ಐಆರ್ ಬಹಳ ಮಹತ್ವ ವಾಗಿದ್ದು ಈ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಹೊರಗೂಳಿಯಬಾರದು ಸುಮಾರು ೧೧ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಪರಿಗಣಿಸಬಹುದಾಗಿದೆ ರಾಜಕೀಯ ಪಕ್ಷಗಳ ನಾಯಕರು ಬಿಎಲ್‌ಎ ಗಳು ಬಿಎಲ್‌ಒಗಳಿಗೆ ಸಂಪೂರ್ಣ ಸಹಕಾರ ನೀಡಬೇಕು ಬಿಎಲ್‌ಒಗಳ ನೇಮಕ ರಾಜಕೀಯ ಪಕ್ಷಗಳ ಜವಾಬ್ದಾರಿ ಎಂದು ಇದೇ ಸಂದರ್ಭದಲ್ಲಿ ಎಸಿ ತಿಳಿಸಿದರು.


ಓಂಶಕ್ತಿ ಚಲಪತಿ ಮಾತನಾಡಿ ನಮ್ಮ ಪಕ್ಷದ ವತಿಯಿಂದ ಎರಡು ಮೂರು ಬಾರಿ ಕಾರ್ಯಾಗಾರವನ್ನು ಮಾಡಲಾಗಿದೆ ಯಾರ ಒತ್ತಡಕ್ಕೂ ಮಣಿಯದೆ ಕೆಲಸ ನಿರ್ವಹಿಸಬೇಕು ಜೊತೆಗೆ ಅಲ್ಪಸಂಖ್ಯಾತ ವಾರ್ಡ್ ಗಳಲ್ಲಿ ನಿಷ್ಪಕ್ಷಪಾತವಾಗಿ ಅರ್ಜಿ ಭರ್ತಿ ಮಾಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ರಾಜೇಂದ್ರ ಪ್ರಸಾದ್, ಕಾಂಗ್ರೆಸ್ ಮುಖಂಡ ಕುರಿಗಳ ರಮೇಶ್, ಬಿಜೆಪಿ ನಗರ ಅಧ್ಯಕ್ಷ ಸಾಮ ಬಾಬು, ಕಚೇರಿ ಕಾರ್ಯದರ್ಶಿ ರಾಜೇಶ್ ಸಿಂಗ್, ಮುಖಂಡರಾದ ಶಿವಕುಮಾರ್, ಶ್ರೀನಿವಾಸ್, ನಾಮಾಲ್ ಮಂಜು, ಶ್ರೀನಾಥ್ ಉಪಸ್ಥಿತರಿದ್ದರು.