
ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ವಿಜ್ಞಾನ ಎಷ್ಟೇ ಮುಂದುವರಿದರೂ ಪ್ರಾಕೃತಿಕ ಸತ್ಯ ಬದಲಾಯಿಸಲು ಸಾಧ್ಯವಿಲ್ಲ.ಎಲ್ಲದಕ್ಕೂ ಇತಿ ಮಿತಿ ಇದೆ. ಶರಣರು ಪ್ರಾಕೃತಿಕ ಧರ್ಮ ಬೋಧಿಸಿದರು.ಇದನ್ನೇ ಚಾಮರಸ ತನ್ನ ಪ್ರಭುಲಿಂಗಲೀಲೆಯಲ್ಲಿ ತಿಳಿಸಿದ್ದಾರೆ.ಮೂರು ತಿಂಗಳಿಗೆ ಛಾಯಾತ್ಮ, ಆರು ತಿಂಗಳಿಗೆ ದೇಹಾತ್ಮ, ಒಂಭತ್ತು ತಿಂಗಳಿಗೆ ಜೀವಾತ್ಮ ಎನ್ನುವಂತೆ ಗರ್ಭಧರಿಸಿದ ಸುಮತಿಗೆಎಂಟನೆ ತಿಂಗಳಿಗೆ ಗರ್ಭಕ್ಕೆ ಲಿಂಗಧಾರಣೆ ಮಾಡಲಾಗುತ್ತದೆ.
ಚರಿತ್ರೆಯ ನಾಯಕಿ ಜಗತ್ತಿಗೆ ಬರುವ ಸಂಗತಿಯನ್ನು ನವಮಾಸ, ನವದಿನ ಕಳೆದ ಮೇಲೆ ಸುಮತಿಗೆ ಹೆಣ್ಣು ಮಗುವಿನಜನನವಾಗುತ್ತದೆ. ಆಕೆ ಹುಟ್ಟಿದಾಗ ಸೃಷ್ಟಿಯೇ ಹೂ ಮಳೆ ಸುರಿಸಿತು, ಬೆಳಕು ತಾನೆ ಮೂಡಿತು, ಅಜ್ಞಾನವು ವಿವೇಕವಾಗಿ ಪರಿವರ್ತನೆಆಯಿತು. ಆ ಮಗು ಅಸಾಮಾನ್ಯವಾಗಿತ್ತು.ಹೆತ್ತುಗೆಗೆ ಶಿವಯೋಗ
ರಾಜ್ಯದ ಪಟ್ಟಗಟ್ಟುವರಂತೆನೊಸಲಿನೋಳ್ ಅಮಳ ವಿಭೂತಿಯಭವ ಭಯದ ಸೋಂಕುಗಳು ಹುಟ್ಟದಂತಿರೆ
ರಕ್ಷೆಯಂದದಿ ಕಟ್ಟಿದರು ಕಂಠದಲಿ ಲಿಂಗವಎಂದು ಚಾಮರಸನು ಬಹಳ ಅದ್ಭುತವಾಗಿ ಹೇಳುತ್ತಾನೆ. ತೊಟ್ಟಿಲಲ್ಲಿ ಮಲಗಿದ ಮಗು ತೊಳೆದ ಮುತ್ತನು ಕಂಡಳು, ಹೊಟ್ಟೆಮೇಲಾಗಿ ಮಲಗ್ಯಾಳ ದೃಷ್ಟಿಯ ಬೊಟ್ಟು ಇಟ್ಟೇನ ಎನ್ನುವಂತೆ ಸುಮತಿ ಮಗುವನ್ನು ಮುದ್ದಾಡುತ್ತ ಎದೆ ಹಾಲುಣಿಸುತ್ತಬೆಳೆಸಿದಳು.
ನಂತರದಲ್ಲಿ ಆರಾಧನೆಯ ಜೊತೆಗೆ ತೊಟ್ಟಿಲೋತ್ಸವ ಕೂಡ ನಡೆಯಿತು. ಮಹಾದೇವಿ ಎಂದು ಹೆಸರಿಟ್ಟರು ಎಂಬುದನ್ನುಚಾಮರಸ ಹೃದಯಂಗಮವಾಗಿ ವರ್ಣಿಸುತ್ತಾನೆ. ಮುಂದೆ ಅಕ್ಕನಿಗೆ ಧರ್ಮ ಸಂಸ್ಕಾರದ ಅರಿವನ್ನು ಗುರುಲಿಂಗ ದೇವರುನೀಡುತ್ತಾರೆ. ಹೀಗೆ ಪರಮ ಪ್ರೀತಿಯಿಂದ ಮಹಾದೇವಿ ಬೆಳೆಯುತ್ತಾಳೆ. ಕೊನೆಗೆ ಯೌವನಾವಸ್ಥೆಗೆ ಕಾಲಿಡುತ್ತಾಳೆ.
-ಪೂಜ್ಯ ಮಹಾಂತ ಸ್ವಾಮಿಗಳು,ಮುದಗಲ್































