Home ಜಿಲ್ಲೆ ಬೆಂಗಳೂರು ಸಂಸ್ಥಾಪಕರ ದಿನಾಚರಣೆ, ಗುರು ವಂದನಾ ಕಾರ್ಯಕ್ರಮ

ಸಂಸ್ಥಾಪಕರ ದಿನಾಚರಣೆ, ಗುರು ವಂದನಾ ಕಾರ್ಯಕ್ರಮ

ಬೆಂಗಳೂರು, ಜು4:- ಬೆಂಗಳೂರಿನ ಯಲಹಂಕದಲ್ಲಿರುವ ಆದಿತ್ಯ ಶಿಕ್ಷಣ ಸಂಸ್ಥೆಗಳ ಸಮೂಹದಿಂದ ಸಂಸ್ಥಾಪಕರ ದಿನವನ್ನು ವಿಜ್ರಂಬಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥಾಪಕ ಡಾ ವಿಶ್ವನಾಥ್ ಬಿ ಎ ಅವರು ತಮ್ಮ ಶಾಲಾದಿನಗಳ ಗುರುಗಳಾದ ಬಿ ವಿ ನಾಗರಾಜ್, ಡಾ ಎನ್ ಎಸ್ ಸತ್ಯನಾರಾಯಣ, ಮಂಜುನಾಥ್ ಅವರುಗಳನ್ನು ಸತ್ಕರಿಸಿ ಕೃತಜ್ಞತೆ ಸಲ್ಲಿಸಿದ್ದರು. ರಾಷ್ಟ್ರಪತಿಗಳ ಪ್ರಶಸ್ತಿ ಪುರಸ್ಕೃತರಾದ ಶ್ರೀ ಬಿ ವಿ ನಾಗರಾಜ್ ಮಾತನಾಡಿ ಒಬ್ಬ ಉತ್ತಮ ಶಿಕ್ಷಕನಿಂದ ಮಾತ್ರವೇ ಸಮಾಜದ ಸುಧಾರಣೆ ಸಾಧ್ಯ ಎಂದು ತಿಳಿಸಿ ವಿಶ್ವನಾಥ್ ಅವರಿಗೆ ಶುಭ ಕೋರಿದ್ದರು.


ಗೌರವ ಅತಿಥಿಗಳು ಹಾಗೂ ಚೇರ್ಮನ್ ಆಡಿ. ವಿಶ್ವನಾಥ್ ರವರ ಗುರುಗಳಾದ ಪೆÇ್ರ. ಡಾ. ಟಿ. ರಾಜಗೋಪಾಲನ್, ಡಾ. ಶ್ರೀನಿವಾಸನ್ ಹಾಗೂ ಡಾ. ಎಂ. ಡಿ. ಕಾರ್ವೇಕರ್ ಅವರು ಶಿಕ್ಷಣದಲ್ಲಿ ಮೌಲ್ಯಗಳು, ನೈತಿಕತೆ ಮತ್ತು ಮಾನವೀಯತೆಯ ಮಹತ್ವವನ್ನು ಒತ್ತಿ ಹೇಳಿ, ವಿದ್ಯಾರ್ಥಿಗಳು ಜ್ಞಾನ, ಸಂಸ್ಕಾರ ಮತ್ತು ಸೇವಾ ಮನೋಭಾವದೊಂದಿಗೆ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.


ಈ ಸಂದರ್ಭದಲ್ಲಿ ಸಂಸ್ಥಾಪಕರಿಗೆ ಗೌರವ ಸಲ್ಲಿಸಲಾಯಿತು. ಶಿಕ್ಷಕರನ್ನು ಸನ್ಮಾನಿಸಿ ಅವರ ಶಿಕ್ಷಣ ಸೇವೆಯನ್ನು ಕೊಂಡಾಡಲಾಯಿತು. ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪೆÇೀಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.