Home ಜಿಲ್ಲೆ ಶಾಲಾ ಪ್ರಾರಂಭೋತ್ಸವ

ಶಾಲಾ ಪ್ರಾರಂಭೋತ್ಸವ

ಧಾರವಾಡ,ಜೂ೨: ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಅತೀ ವಿಜೃಂಭಣೆಯಿAದ ಪ್ರಾರಂಭಿಸಲಾಯಿತು. ಸಂಸ್ಥೆಯ ಮುಖ್ಯ ದ್ವಾರದಿಂದ ಶಾಲೆಯವರೆಗೆ ಮಕ್ಕಳು ಬ್ಯಾಂಡ್ ಬಾರಿಸುತ್ತಾ ಉತ್ತಮ ಕಲಿಕೆ ಉಜ್ವಲ ಭವಿಷ್ಯ ಎಂಬ ಘೋಷ ವಾಕ್ಯವನ್ನು ಕೂಗುತ್ತಾ ಶಾಲೆಯ ಆವರಣವನು ್ನಪ್ರವೇಶಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಚಂದ್ರಕಾAತ ಮಟ್ಟಿ ಮತ್ತು ಆಡಳಿತ ಮಂಡಳಿಯ ಸದಸ್ಯರಾದ ಎಂ.ಆರ್.ಇAಡಿ, ಶಾಲೆಯ ಮುಖ್ಯ ಗುರುಗಳಾದ ದೇವೆಂದ್ರಪ್ಪ ಹೊಂಬಳ ಎಲ್ಲ ಮಕ್ಕಳಿಗೆ ಗುಲಾಬಿ ಹೂಗಳೊಂದಿಗೆ ಸಿಹಿ ಮತ್ತು ಹಾಲನ್ನು ನೀಡಿ ಶಾಲೆಗೆ ಬರಮಾಡಿಕೊಂಡರು.


ಶಾಲೆಯ ಎಲ್ಲ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿ ಗೌರವ ಕಾರ್ಯದರ್ಶಿಗಳು ಮಕ್ಕಳು ಅಭ್ಯಾಸದ ಕಡೆಗೆ ಹೆಚ್ಚಿನ ಗಮನ ನೀಡಬೇಕು, ಪಾಲಕರು ಮಕ್ಕಳ ಪ್ರತಿದಿನದ ಶಾಲಾ ಚಟುವಟಿಕೆಯನ್ನು ಪರಿಶೀಲಿಸಿ ಅವರಿಗೆ ಸೂಕ್ತ ಸಲಹೆಗಳನ್ನು ನೀಡಬೇಕೆಂದರು.

ಮುಖ್ಯ ಗುರುಗಳಾದ ದೇವೆಂದ್ರಪ್ಪ ಹೊಂಬಳ ಮಾತನಾಡಿ ಸರಕಾರವು ಪ್ರತಿದಿನ ಮಕ್ಕಳಿಗೆ ನೀಡುತ್ತಿರುವ ಪೌಷ್ಠಿಕ ಆಹಾರದ ಸದುಪಯೋಗ ಪಡೆದುಕೊಳ್ಳಬೇಕೆಂದರು. ವಿದ್ಯಾರ್ಥಿಗಳನ್ನು ಆರೋಗ್ಯವಂತರಾಗಿ ಇಡಲು ಪಠ್ಯದೊಂದಿಗೆ ಆಟಗಳ ಬಗ್ಗೆಯು ತರಬೇತಿ ನೀಡಲಾಗುವುದು ಎಂದು ತಿಳಿಸಿದರು. ಎಸ್.ಎಂ.ಹೂಗಾರ ಕಾರ್ಯಕ್ರಮ ನಿರ್ವಹಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀಮತಿ ಅರ್ಚನಾ ಹಿರೇಮಠ, ಶ್ರೀಮತಿ. ರೇಣುಕಾ ವಾಕೋಡೆ, ಶ್ರೀಮತಿ. ಸಾವಿತ್ರಿ ಪಾಟೀಲ, ಗೌರಮ್ಮ ಅಮರಗೋಳ, ಶ್ರೀಮತಿ. ನಂದಿನಿ ಗಡಾದ, ಶ್ರೀಮತಿ. ಚೈತ್ರಾ ಸಂಗೋಳ್ಳಿ, ಶ್ರೀಮತಿ. ಲತಾ, ಎಂ.ಆರ್.ಪಾಗೋಜಿ, ಸೋಮಶೇಖರ ಕರಡಿಗುಡ್ಡ, ಶ್ರೀಮತಿ. ದಾನೇಶ್ವರಿ ಕಮ್ಮಾರ, ಶ್ರೀಮತಿ. ಮಂಜುಳಾ ಕರೆಣ್ಣವರ, ಶ್ರೀಮತಿ. ರೇಖಾ ಹೊಳಸೆ, ಶ್ರೀಮತಿ. ನಾಗರತ್ನಾ ಕಮ್ಮಾರ ಹಾಗೂ ಪಾಲಕರು ಉಪಸ್ಥಿತರಿದ್ದರು.