Home ಜಿಲ್ಲೆ ಶಾಂತಿ, ಸದ್ಭಾವನೆಯ ಪುನಸ್ರ್ಥಾಪನೆಯಲ್ಲಿ ಮಾಧ್ಯಮದ ಪಾತ್ರ : ಪತ್ರಕರ್ತರಿಂದ ಮಂಥನ

ಶಾಂತಿ, ಸದ್ಭಾವನೆಯ ಪುನಸ್ರ್ಥಾಪನೆಯಲ್ಲಿ ಮಾಧ್ಯಮದ ಪಾತ್ರ : ಪತ್ರಕರ್ತರಿಂದ ಮಂಥನ

ಬೀದರ್,ಮೇ.25-ದೇವಭೂಮಿ ಹಿಮಾಚಲ ಪ್ರದೇಶದ ಧೌಲಾಧರ್ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಕುಳಿತು ಇಂದು ಮಾಧ್ಯಮ ತಜ್ಞರು ವಿಶ್ವದಲ್ಲಿ ಶಾಂತಿ ಮತ್ತು ಸದ್ಭಾವನೆಯ ಸ್ಥಾಪನೆಯ ಕುರಿತು ಚಿಂತನೆ
ನಡೆಸಿದರು.
ವಿಶ್ವದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಪುನಸ್ರ್ಥಾಪಿಸಲು ಎಲ್ಲರೂ ಒಕ್ಕೊರಲಿನಿಂದ ಸಂಕಲ್ಪ ಮಾಡಿದರು. ಈ ಸಂದರ್ಭವು ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಮೀಡಿಯಾ ವಿಂಗ್ ಆಯೋಜಿಸಿದ್ದ ಮಾಧ್ಯಮ ಸೆಮಿನಾರ್ ಆಗಿತ್ತು. ಇದರಲ್ಲಿ ದೇಶದಾದ್ಯಂತ ಬಂದಿದ್ದ ಬ್ರಹ್ಮಾಕುಮಾರೀಸ್ ಮೀಡಿಯಾ ವಿಂಗ್ ಸದಸ್ಯರೊಂದಿಗೆ ಕಾಂಗ್ರಾದ ಪತ್ರಕರ್ತರು ಭಾಗವಹಿಸಿದ್ದರು.
ಮೌಂಟ್ ಅಬು ರಾಜಸ್ಥಾನದಿಂದ ಬಂದಿದ್ದ ಬ್ರಹ್ಮಾಕುಮಾರೀಸ್ ಮೀಡಿಯಾ ವಿಂಗ್‍ನ ರಾಷ್ಟ್ರೀಯ ಸಂಯೋಜಕ ಬ್ರಹ್ಮಾಕುಮಾರ್ ಡಾ.ಶಂತನು ಭಾಯಿ ಅವರು ಮಾಧ್ಯಮ ಸೆಮಿನಾರ್‍ನ ಪೀಠಿಕೆಯನ್ನು ಮಂಡಿಸಿದರು. ಅವರು ಮಾತನಾಡಿ, “ಬ್ರಹ್ಮಾಕುಮಾರೀಸ್ ಮಹಿಳೆಯರ ನೇತೃತ್ವದಲ್ಲಿ ನಡೆಯುತ್ತಿರುವ ವಿಶ್ವದ ಏಕೈಕ ಸಂಸ್ಥೆಯಾಗಿದೆ. ಜಗತ್ತಿನಲ್ಲಿ ದುಃಖ ಮತ್ತು ಅಶಾಂತಿ ಹೆಚ್ಚಾಗಲು ಮಾನವೀಯ ಮೌಲ್ಯಗಳ ಕುಸಿತವೇ ಏಕೈಕ ಕಾರಣವಾಗಿದೆ. ಇಂತಹ ಸಮಯದಲ್ಲಿ ಈ ಮಾಧ್ಯಮ ಸೆಮಿನಾರ್ ಅತ್ಯಂತ ಸಾರ್ಥಕವಾಗಿದೆ. ದೇಶ ಮತ್ತು ಸಮಾಜವನ್ನು ಜೊತೆಗೂಡಿಸಿ ಮುನ್ನಡೆಸುವ ಶಕ್ತಿ ಮಾಧ್ಯಮಕ್ಕಿದೆ. ಮಾಧ್ಯಮವು ಪ್ರಜಾಪ್ರಭುತ್ವದ
ನಾಲ್ಕನೇ ಸ್ತಂಭವಾಗಿದೆ” ಎಂದರು.
ಇಂದೋರ್‍ನಿಂದ ಆಗಮಿಸಿದ್ದ ಕುಶಾಭೌ ಠಾಕ್ರೆ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಶ್ವವಿದ್ಯಾಲಯದ (ರಾಯ್‍ಪುರ) ಮಾಜಿ ಕುಲಪತಿ ಡಾ. ಪೆÇ್ರ. ಮಾನ್‍ಸಿಂಗ್ ಪರ್ಮಾರ್ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿ, “ಮಾಧ್ಯಮವು ಕೇವಲ ಮಾಹಿತಿಯನ್ನು ನೀಡುವ ಕೆಲಸ ಮಾಡುವುದಿಲ್ಲ, ಬದಲಿಗೆ ಒಂದು ದೃಷ್ಟಿಕೋನವನ್ನು ನೀಡುತ್ತದೆ. ಶಾಂತಿ ಸ್ಥಾಪನೆಯಲ್ಲಿ ಮಾಧ್ಯಮವು ಪ್ರಮುಖ ಪಾತ್ರ ವಹಿಸಬಲ್ಲದು” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ದಾರೋಹ್‍ನ ಪೆÇಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲರು ಹಾಗೂ ಡಿಐಜಿ ಖುಷಾಲ್ ಶರ್ಮಾ ಅವರು, “ಇಂತಹ ಆಧ್ಯಾತ್ಮಿಕ ಸ್ಥಳಕ್ಕೆ ಬರುವ ಅವಕಾಶ ಸಿಗುವುದು ಸೌಭಾಗ್ಯದ ಸಂಗತಿ. ಪೆÇಲೀಸ್ ಅಧಿಕಾರಿಯಾಗಿ ಪತ್ರಕರ್ತರೊಂದಿಗೆ ನನ್ನ ಸಂಬಂಧ ಯಾವಾಗಲೂ ಸಕಾರಾತ್ಮಕವಾಗಿದೆ. ನಾನು ಎರಡು ಬಾರಿ ಬ್ರಹ್ಮಾಕುಮಾರೀಸ್‍ನ ಪ್ರಧಾನಕಚೇರಿಗೂ ಹೋಗಿದ್ದೇನೆ. ಕಾಲೇಜು ದಿನಗಳಿಂದಲೇ ಬ್ರಹ್ಮಾಕುಮಾರೀಸ್‍ನ ಕಾರ್ಯಗಳ ಬಗ್ಗೆ ಕೇಳುತ್ತಿದ್ದೇನೆ. ಇಂದು ನಾವು ಅಶಾಂತಿಯ ಬಿರುಗಾಳಿಯ ಮಧ್ಯೆ ಸಾಗುತ್ತಿದ್ದೇವೆ, ಇದನ್ನು ದೂರ ಮಾಡುವಲ್ಲಿ ಪತ್ರಿಕೋದ್ಯಮವು ಪ್ರಮುಖ ಪಾತ್ರ ವಹಿಸುತ್ತದೆ.
ಪತ್ರಿಕೋದ್ಯಮದ ಮುಂದೆ ತನ್ನದೇ ಆದ ಸವಾಲುಗಳಿವೆ. ಪತ್ರಕರ್ತರಲ್ಲಿ ಆಧ್ಯಾತ್ಮಿಕತೆ ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಿರುವ ಬ್ರಹ್ಮಾಕುಮಾರೀಸ್‍ನ ಮೀಡಿಯಾ ವಿಂಗ್‍ನ ಪ್ರಯತ್ನ ನಿಜಕ್ಕೂ ಶ್ಲಾಘನೀಯ” ಎಂದರು.
ವಿಶಿಷ್ಟ ಅತಿಥಿಯಾಗಿ ಡೆಹ್ರಾಡೂನ್‍ನಿಂದ ಆಗಮಿಸಿದ್ದ ‘ಶ್ರೀಮತ್ ಎಕ್ಸ್‍ಪ್ರೆಸ್’ ಮುಖ್ಯ ಸಂಪಾದಕ ಡಾ. ಡಿ. ಡಿ. ಮಿತ್ತಲ್ ಮಾತನಾಡಿ, “ನಮ್ಮ ಭಾವನೆಯಲ್ಲಿ ಸದ್ಭಾವನೆ, ಶಾಂತಿ ಮತ್ತು ಶುಭ ಹಾರೈಕೆಗಳು ಮೂಡಿದಾಗ, ನಾವು ಸಕಾರಾತ್ಮಕ ಪತ್ರಿಕೋದ್ಯಮವನ್ನು ಮಾಡಲು ಪ್ರಾರಂಭಿಸುತ್ತೇವೆ. ವದಂತಿಗಳಿಂದ ದೂರವಿರಿ, ಸತ್ಯಾಸತ್ಯತೆಯನ್ನು ಪರಿಶೀಲಿಸಿ ಮಾಧ್ಯಮದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿ ಇರಬೇಕು” ಎಂದು
ಹೇಳಿದರು.
ರಾಯ್‍ಪುರದಿಂದ ಬಂದಿದ್ದ ‘ಭಾರತ್ ಎಕ್ಸ್‍ಪ್ರೆಸ್’ ಚಾನೆಲ್‍ನ ಸ್ಥಳೀಯ ಸಂಪಾದಕಿ ಪ್ರಿಯಾಂಕಾ ಕೌಶಲ್ ಮಾತನಾಡಿ, “ಸಮಾಜವು ನಮ್ಮನ್ನು ನಂಬಬೇಕಾದರೆ, ನಾವು ನಮ್ಮ ನಡವಳಿಕೆಯನ್ನು ಅಷ್ಟೇ ಪರಿಶುದ್ಧವಾಗಿ ಮಾಡಿಕೊಳ್ಳಬೇಕು” ಎಂದರು.
‘ಯೂನಿಯನ್ ಆಫ್ ಜರ್ನಲಿಸ್ಟ್ಸ್’ ಪಾಲಂಪುರ್ ಅಧ್ಯಕ್ಷ ಸಂಜೀವ್ ಬಾಗ್ಲಾ ಮಾತನಾಡಿ, “ಆಧ್ಯಾತ್ಮಿಕತೆಗೆ ಸಂಬಂಧಿಸಿದ ಬ್ರಹ್ಮಾಕುಮಾರೀಸ್ ಸಹೋದರಿಯರು ನಮ್ಮನ್ನು ಆಹ್ವಾನಿಸಿದ್ದು ನನಗೆ ತುಂಬಾ ಸಂತೋಷ ತಂದಿದೆ. ನಾವು ನಕಾರಾತ್ಮಕ ಮತ್ತು ಸಕಾರಾತ್ಮಕ ಎರಡೂ ರೀತಿಯ ಸುದ್ದಿಗಳನ್ನು ಬರೆಯಬೇಕಾಗುತ್ತದೆ. ನಾವು ಸುದ್ದಿಯನ್ನಂತೂ ನೀಡುತ್ತಿದ್ದೇವೆ, ಆದರೆ ಅದರ ಮುಂದಿನ ಬೆಳವಣಿಗೆಯನ್ನು
ಗಮನಿಸುತ್ತಿಲ್ಲ, ಇದರಿಂದಾಗಿ ಸುದ್ದಿಯ ಒಂದು ಪಾಶ್ರ್ವ ಮಾತ್ರ ಜನರ ಮುಂದೆ ಬರುತ್ತಿದೆ” ಎಂದು ಅಭಿಪ್ರಾಯಪಟ್ಟರು.
‘ಛತ್ತೀಸ್‍ಗಢ ಬಂಧು’ (ರಾಯ್‍ಪುರ) ಸಂಪಾದಕ ಮಧುಕರ್ ದ್ವಿವೇದಿ ಮಾತನಾಡಿ, “ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಪತ್ರಕರ್ತರ ಪಾತ್ರ ತುಂಬಾ ದೊಡ್ಡದಾಗಿದೆ. ಜಿಲ್ಲಾ ಮಟ್ಟದ ಪತ್ರಕರ್ತರು ಭಾರತೀಯ ಪತ್ರಿಕೋದ್ಯಮದ ಆತ್ಮವಿದ್ದಂತೆ. ನಾವು ನಿಷ್ಪಕ್ಷಪಾತ, ನಿರ್ಭೀತ ಮತ್ತು ಧೈರ್ಯಶಾಲಿಗಳಾಗಿರಬೇಕು ಎಂದು ಸಾರ್ವಜನಿಕರು ನಮ್ಮಿಂದ ಅಪಾರ ನಿರೀಕ್ಷೆ ಹೊಂದಿದ್ದಾರೆ” ಎಂದರು.
ಹೈದರಾಬಾದ್‍ನಿಂದ ಆಗಮಿಸಿದ್ದ ಮೀಡಿಯಾ ವಿಂಗ್‍ನ ಉಪಾಧ್ಯಕ್ಷೆ ಬಿ.ಕೆ. ಸರಳಾ ಅಕ್ಕನವರು ಆಶೀರ್ವಚನ ನೀಡಿ, “ಈ ಸಭೆಗೆ ಸ್ವತಃ ಭಗವಂತನೇ ನಿಮ್ಮನ್ನು ಆಹ್ವಾನಿಸಿದ್ದಾನೆ. ಮಾಧ್ಯಮವು ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದೆ. ಜನರು ನಿಮ್ಮನ್ನು ಪ್ರೀತಿಸುತ್ತಾರೆ, ಆದ್ದರಿಂದ ನೀವು ಏನನ್ನು ಉಣಬಡಿಸುತ್ತೀರೋ ಅದನ್ನು ವಹಿಸಬಲ್ಲದು” ಎಂದು ಹೇಳಿದರು.ರಾಯ್‍ಪುರದಿಂದ ಬಂದಿದ್ದ ‘ಭಾರತ್ ಎಕ್ಸ್‍ಪ್ರೆಸ್’
ಚಾನೆಲ್‍ನ ಸ್ಥಳೀಯ ಸಂಪಾದಕಿ ಪ್ರಿಯಾಂಕಾ ಕೌಶಲ್ ಮಾತನಾಡಿ, “ಸಮಾಜವು ನಮ್ಮನ್ನು ನಂಬಬೇಕಾದರೆ, ನಾವು ನಮ್ಮ ನಡವಳಿಕೆಯನ್ನು ಅಷ್ಟೇ ಪರಿಶುದ್ಧವಾಗಿ ಮಾಡಿಕೊಳ್ಳಬೇಕು” ಎಂದರು.
‘ಯೂನಿಯನ್ ಆಫ್ ಜರ್ನಲಿಸ್ಟ್ಸ್’ ಪಾಲಂಪುರ್ ಅಧ್ಯಕ್ಷ ಸಂಜೀವ್ ಬಾಗ್ಲಾ ಮಾತನಾಡಿ, “ಆಧ್ಯಾತ್ಮಿಕತೆಗೆ ಸಂಬಂಧಿಸಿದ ಬ್ರಹ್ಮಾಕುಮಾರೀಸ್ ಸಹೋದರಿಯರು ನಮ್ಮನ್ನು ಆಹ್ವಾನಿಸಿದ್ದು ನನಗೆ ತುಂಬಾ ಸಂತೋಷ ತಂದಿದೆ. ನಾವು ನಕಾರಾತ್ಮಕ ಮತ್ತು ಸಕಾರಾತ್ಮಕ ಎರಡೂ ರೀತಿಯ ಸುದ್ದಿಗಳನ್ನು ಬರೆಯಬೇಕಾಗುತ್ತದೆ. ನಾವು ಸುದ್ದಿಯನ್ನಂತೂ ನೀಡುತ್ತಿದ್ದೇವೆ, ಆದರೆ ಅದರ ಮುಂದಿನ ಬೆಳವಣಿಗೆಯನ್ನು ಗಮನಿಸುತ್ತಿಲ್ಲ, ಇದರಿಂದಾಗಿ ಸುದ್ದಿಯ ಒಂದು ಪಾಶ್ರ್ವ ಮಾತ್ರ ಜನರ ಮುಂದೆ ಬರುತ್ತಿದೆ” ಎಂದು ಅಭಿಪ್ರಾಯಪಟ್ಟರು.
‘ಛತ್ತೀಸ್‍ಗಢ ಬಂಧು’ (ರಾಯ್‍ಪುರ) ಸಂಪಾದಕ ಮಧುಕರ್ ದ್ವಿವೇದಿ ಮಾತನಾಡಿ, “ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಪತ್ರಕರ್ತರ ಪಾತ್ರ ತುಂಬಾ ದೊಡ್ಡದಾಗಿದೆ. ಜಿಲ್ಲಾ ಮಟ್ಟದ ಪತ್ರಕರ್ತರು ಭಾರತೀಯ ಪತ್ರಿಕೋದ್ಯಮದ ಆತ್ಮವಿದ್ದಂತೆ. ನಾವು ನಿಷ್ಪಕ್ಷಪಾತ, ನಿರ್ಭೀತ ಮತ್ತು ಧೈರ್ಯಶಾಲಿಗಳಾಗಿರಬೇಕು ಎಂದು ಸಾರ್ವಜನಿಕರು ನಮ್ಮಿಂದ ಅಪಾರ ನಿರೀಕ್ಷೆ ಹೊಂದಿದ್ದಾರೆ” ಎಂದರು.
ಹೈದರಾಬಾದ್‍ನಿಂದ ಆಗಮಿಸಿದ್ದ ಮೀಡಿಯಾ ವಿಂಗ್‍ನ ಉಪಾಧ್ಯಕ್ಷೆ ಬಿ.ಕೆ. ಸರಳಾ ಅಕ್ಕನವರು ಆಶೀರ್ವಚನ ನೀಡಿ, “ಈ ಸಭೆಗೆ ಸ್ವತಃ ಭಗವಂತನೇ ನಿಮ್ಮನ್ನು ಆಹ್ವಾನಿಸಿದ್ದಾನೆ. ಮಾಧ್ಯಮವು ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದೆ. ಜನರು ನಿಮ್ಮನ್ನು ಪ್ರೀತಿಸುತ್ತಾರೆ, ಆದ್ದರಿಂದ ನೀವು ಏನನ್ನು ಉಣಬಡಿಸುತ್ತೀರೋಅದನ್ನು ಅವರು ಸ್ವೀಕರಿಸುತ್ತಾರೆ” ಎಂದು ಹೇಳಿದರು.
ದೆಹಲಿಯಿಂದ ಆಗಮಿಸಿದ್ದ ಹಿರಿಯ ರಾಜಯೋಗಿ ಶಿಕ್ಷಕಿ ಬ್ರಹ್ಮಾಕುಮಾರಿ ಸುನಿತಾ ದೀದಿ ಅವರು ಎಲ್ಲರಿಗೂ ಶಕ್ತಿಶಾಲಿ ರಾಜಯೋಗದ ಅನುಭೂತಿ ಮಾಡಿಸಿದರು. ಕೆಲ ನಿಮಿಷಗಳ ಧ್ಯಾನದ ಅಭ್ಯಾಸವು ಪತ್ರಕರ್ತ ಬಂಧುಗಳಿಗೆ ಆಳವಾದ ಶಾಂತಿಯ ಅನುಭೂತಿಯನ್ನು ನೀಡಿತು.
ಮೀಡಿಯಾ ವಿಂಗ್ ಛತ್ತೀಸ್‍ಗಢದ ರಾಜ್ಯ ಸಂಯೋಜಕಿ ಬಿ.ಕೆ. ಮಂಜು ದೀದಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಬಂದಿರುವ ಅತಿಥಿಗಳಿಗೆ ಸ್ವಾಗತ ಬ್ರಹ್ಮ ಕುಮಾರ್ ವಿಶ್ವಾಸ್ ಧಾರವಾಡ ಇವರು ಮಾಡಿದರೆ, ಕೈಲಾಶ ಮಾನಸಸರೋವರ ಕೇಂದ್ರದ ಮುಖ್ಯ ಕಾರ್ಯದರ್ಶಿ ತಿಲಕ ರಾಜ ಅವರು ವಂದನಾರ್ಪಣೆ ಮಾಡಿದರು.