
ಲಕ್ಷ್ಮೇಶ್ವರ, ಮೇ13: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ದಾದಿಯರ ದಿನಾಚರಣೆಯ ಅಂಗವಾಗಿ ಪತ್ರಕರ್ತ ಶಿವಲಿಂಗಯ್ಯ ಹೊತ್ತಿಗೆ ಮಠ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಾಧಿಕಾರಿ ಶ್ರೀಕಾಂತ್ ಕಾಟೇ ವಾಲೆ ಪತ್ರಕರ್ತ ನಾಗರಾಜ ಹಣಗಿ ಅವರು ದಾದಿಯರ ಸೇವಾ ಮನೋಭಾವ ಮತ್ತು ಸಮರ್ಪಣ ಭಾವನೆ ಅತ್ಯಂತ ಶ್ಲಾಘನೀಯ.
ದಾದಿಯರು ಎಂತಹದೇ ಕಠಿಣ ಸಂದರ್ಭದಲ್ಲಿ ರೋಗಿಗಳ ಆರೈಕೆ ಮಾಡುವುದು ಮತ್ತು ಅನೇಕ ಕಠಿಣ ಸಂದರ್ಭಗಳಲ್ಲಿ ಅದರಲ್ಲೂ ವಿಶೇಷವಾಗಿ ಕೋವಿಡ್ನಂತ ಸಂದರ್ಭದಲ್ಲಿ ತಮ್ಮ ಜೀವನದ ಹಂಗು ತೊರೆದು ಸೇವೆ ಮಾಡಿದ್ದು ಒಂದು ಇತಿಹಾಸ ಎಂದು ಪ್ರಶಂಶಿಸಿದರು ಸಮಾಜ ಇಂತಹ ಜನರನ್ನು ಗುರುತಿಸಿ , ಸನ್ಮಾನಿಸುವುದು ಅತ್ಯಂತ ಸೂಕ್ತವಾದದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರವೀಣ್ ಸಜ್ಜನ್, ಸುನಿಲ್ ಚೌಹಾನ್, ವಿಜಯ್ ಕುಮಾರ ಮಾಂಡ್ರೆ, ಸುನೀತಾ ನಂದಣ್ಣವರ, ವರಲಕ್ಷ್ಮಿ ಜನಿವಾರದ, ಶ್ರೀಶೈಲ್ ಫಕೀರಶೆಟ್ಟಿ, ಲಕ್ಷ್ಮಿ ಡೊಳ್ಳಿನ, ಪತ್ರಕರ್ತರಾದ ಅಶೋಕ ಸೊರಟೂರ, ದಿಗಂಬರ್ ಪೂಜಾರ, ಶಿವಲಿಂಗಯ್ಯ ಹೊತ್ತಿಗೆಮಠ ಇದ್ದರು.























