
ಕರಜಗಿ :ಏ.27:ಕಬ್ಬಿನ ಗದ್ದೆಗೆ ನೀರುಣಿಸಲು ಹೋಗಿದ್ದ ರೈತನಿಗೆ ವಿದ್ಯುತ್ ತಂತಿ ತಗಲಿ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಕರಜಗಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ರೈತ ಬಸವರಾಜ ಮೇತ್ರಿ (45) ಮೃತಪಟ್ಟಿರುವ ಮೃತ.ಎಂದಿನಂತೆ ಕಬ್ಬಿನ ಗದ್ದೆಗೆ ನೀರುಣಿಸಬೇಕೆಂದು ಮೋಟಾರ್ ಚಾಲು ಮಾಡಲು ಹೋಗಿದ್ದಾಗ ವಿದ್ಯುತ್ ತಂತಿ ಕಡಿತಗೊಂಡು ಕೆಳಗಡೆ ಬಿದ್ದಿದ್ದರಿಂದ ರೈತ ಗಮನಿಸದೆ ತಂತಿಯ ಮೇಲೆ ಕಾಲು ಇಡುತ್ತಿದ್ದಂತೆ ಸ್ಥಳದಲ್ಲೇ ರೈತ ಮೃತಪಟ್ಟಿರುವ ಬಗ್ಗೆ ಅಫಜಲಪುರ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




















