
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ,20- ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ವತಿಯಿಂದ ವಿ ಬಿ ಜಿ ರಾಮ್ ಜಿ ಕಾಯ್ದೆ ರದ್ದತಿಗಾಗಿ ಮತ್ತು ಮನರೆಗಾ ಯೋಜನೆ ಮರು ಜಾರಿಗಾಗಿ ಆಗ್ರಹಿಸಿ ಕುರುಗೋಡು ಪಟ್ಟಣದಲ್ಲಿ ಪ್ರತಿಭಟನೆ ಮಾಡಿ, ಪ್ರಧಾನಿಗಳಿಗೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು
ಈ ಸಂಧರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ್ ಮಾತನಾಡುತ್ತಾ, ವಿ ಬಿ ಜಿ ರಾಮ್ ಜಿ ಕಾಯ್ದೆಯು ಸಂಪೂರ್ಣವಾಗಿ ಬಡ ಕೂಲಿ ಕಾರ್ಮಿಕರಿಂದ ಉದ್ಯೋಗ ಕಸೆಯುವ ಕಾಯ್ದೆಯಾಗಿದೆ, ಕೆಲಸ ನೀಡುವಲ್ಲಿ ಮೊದಲು ಗ್ರಾಮ ಪಂಚಾಯಿತಿಗಳಿಗೆ ಇದ್ದ ಅಧಿಕಾರವನ್ನು ರದ್ದು ಮಾಡಲಾಗಿದೆ, ಇನ್ನೂ ಮುಂದೆ ಈ ಕಾರ್ಯದಲ್ಲಿ ಗುತ್ತಿಗೆದಾರರ ಪ್ರವೇಶ ಮಾಡಲು ಯೋಜನೆ ರೂಪಿಸಲಾಗಿದ್ದು, ಇದೊಂದು ದೊಡ್ಡ ಷಡ್ಯಂತ್ರ ವಾಗಿದೆ ಎಂದು ತಿಳಿಸಿದರು
ರಾಜ್ಯ ಸಮಿತಿ ಸದಸ್ಯರಾದ ಈ.ಹನುಮಂತಪ್ಪ ಮಾತನಾಡುತ್ತಾ ರಾಜ್ಯ ಸರ್ಕಾರ ಬರೀ ಕೇಂದ್ರ ಸರ್ಕಾರದ ಮೇಲೆ ಜವಾಬ್ದಾರಿ ಹಾಕದೆ, ತಾವುಗಳು ಸಹ ರಾಜ್ಯದ ಜನರಿಗೆ ಉದ್ಯೋಗ ಒದಗಿಸಲು ಮುಂದಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ನರೇಗಾ ಉಳಿಸಿ ತಾಲ್ಲೂಕು ಸಮಿತಿ ರಚಿಸಲಾಯಿತು. ಈ ಸಮಿತಿಯ ಅದ್ಯಕ್ಷರಾಗಿ ಕಲ್ಲುಕಂಬ ಪಂಪಾಪತಿ, ಉಪಾಧ್ಯಕ್ಷರಾಗಿ ಮುಷ್ಟಗಟ್ಟ ಪಂಪನಗೌಡ, ಕಲ್ಲುಕಂಬ ಮಾರೆಪ್ಪ, ಕಾರ್ಯದರ್ಶಿಯಾಗಿ ಕೇರೇಕೆರೆ ಬಸವರಾಜ್ ಮತ್ತು 5 ಜನ ಜಂಟಿ ಕಾರ್ಯದರ್ಶಿಗಳು 23 ಜನ ಸದಸ್ಯರ ಬಲಿಷ್ಠ ಸಮಿತಿ ರಚಿಸಲಾಯಿತು.
ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಈ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವಜನ ಸಂಘಟನೆ ಎಐಡಿವೈಒನ ಜಿಲ್ಲಾ ಅಧ್ಯಕ್ಷ ಕೋಳೂರು ಪಂಪಾಪತಿ ಮಾತನಾಡಿದರು. ತಾಲ್ಲೂಕು ಕಾರ್ಯದರ್ಶಿ ಕೆರೇಕೇರೆ ಬಸವರಾಜ್, ಜಿಲ್ಲಾ ಸಮಿತಿ ಸದಸ್ಯರಾದ ಮಾರೆಪ್ಪ ರೈತರಾದ ಕಾಲಿಂಗಪ್ಪ , ಹನುಮಂತಪ್ಪ, ಪಂಪನಗೌಡ, ಶಿವಪ್ಪ, ರುದ್ರಮ್ಮ, ರತ್ನಮ್ಮ, ವೀರೇಶ್, ಅಂಬರೀಷ, ದೊಡ್ಡಬಸವ, ವೆಂಕಟೇಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.





















