
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಆ.10 ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಸೋಮನಗೌಡ ಪಾಟೀಲ್ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸುವ ವಿಚಾರವಾಗಿ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಅವಿಶ್ವಾಸ ನಿರ್ಣಯ ಕೈಗೊಳ್ಳಲಾಯಿತು ಎಂದು ಪಂಚಮಸಾಲಿ ಸಮಾಜದ ಮಾಜಿ ರಾಜ್ಯಾಧ್ಯಕ್ಷ ಹಾಗೂ ಸಮಾಜದ ಹಿರಿಯ ಮುಖಂಡ ಬಸವರಾಜ್ ದಿಂಡೂರು ಹೇಳಿದರು.
ಪಟ್ಟಣದ ಹರ ದೇಗುಲದ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ರಾಜ್ಯ ಕಾರ್ಯಕಾರಣಿ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಸಂಘದ ನಿರ್ಣಯಗಳನ್ನು ಧಿಕ್ಕರಿಸಿ, ಸಂಘವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವ ವ್ಯಕ್ತಿ ಅಧ್ಯಕ್ಷರಾಗಲು ಅನರ್ಹರು. ಸಮುದಾಯದಲ್ಲಿ ಗೊಂದಲ ಸೃಷ್ಟಿಸಲು ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಸಮುದಾಯದ ನೈತಿಕ ಸ್ಥೆರ್ಯ ಕುಗ್ಗಿಸಲು ಯತ್ನಿಸುತ್ತಿರುವವರಿಗೆ ಪಾಠ ಕಲಿಸಲಾಗುವುದು ಎಂದರು.
ರಾಜ್ಯ ಉಪಾಧ್ಯಕ್ಷ ದೇವರಮನಿ ಶಿವಶರಣ,ಮಾತನಾಡಿದ ರಾಜ್ಯದಲ್ಲಿ ಸಮುದಾಯವೇ ತಲೆತಗ್ಗಿಸುವಂತೆ ಸೋಮನಗೌಡ ಪಾಟೀಲ್ ವರ್ತಿಸಿದ್ದಾರೆ. ಸಮುದಾಯವನ್ನು ಟೀಕಿಸಲು ಮಾಧ್ಯಮಗಳನ್ನು ಬಳಸಿಕೊಂಡು ಸಣ್ಣತನ ಪ್ರದರ್ಶಿಸಿರುವ ಅವರು ತಮ್ಮ ನಿರ್ಣಯದ ಮೂಲಕ ಪದಾಧಿಕಾರಿಗಳನ್ನೇ ಉಚ್ಚಾಟಿಸಿರುವುದಾಗಿ ಬಿಂಬಿಸುತ್ತಿದ್ದಾರೆ ಎಂದು ತೀವ್ರವಾಗಿ ಕಿಡಿಕಾರಿದರು.
ರಾಜ್ಯ ಸಮಿತಿಯ ಕಾನೂನು ಸಲಹೆಗಾರ ಎಂ. ಸೋಮಶೇಖರ ಕೊತ್ತಂಬರಿ ಮಾತನಾಡಿ, ಸಮುದಾಯವನ್ನು ವಿರೋಧಿಸುತ್ತಿರುವ ಹಾಗೂ ಯಾವುದೇ ಸಂಘಟನೆಯಲ್ಲಿ ತೊಡಗಿಕೊಳ್ಳದೆ, ಸದಸ್ಯತ್ವವೇ ಇಲ್ಲದ ವ್ಯಕ್ತಿಯೊಬ್ಬ ಅಕ್ರಮ ಕೂಟವನ್ನು ಕಟ್ಟಿಕೊಂಡು ಸಮಾಜವನ್ನು ವಿಭಜಿಸುವ ಹುನ್ನಾರ ನಡೆಸಿದ್ದಾರೆ. ಈಗಾಗಲೇ ನಿರ್ಣಯಿಸಿದಂತೆ ಅವಿಶ್ವಾಸ ಮಂಡನೆಯ ನೋಟಿಸ್ ನೀಡಲಾಗುವುದು, ಏಳು ದಿನಗಳ ಒಳಗಾಗಿ ಉತ್ತರಿಸಬೇಕು. ತಪ್ಪಿದ್ದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಪಟ್ಟಣಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಬಾವಿ ಬೆಟ್ಟಪ್ಪ, ಜೆ.ಪಿ. ಪಾಟೀಲ್, ನಾಗನಗೌಡ್ರು, ಮಹಿಳಾ ರಾಜ್ಯಧ್ಯಕ್ಷೆ ಹುಲ್ಲತ್ತಿ ರಾಜ್ಯ ಸಮತಿ ಸದಸ್ಯರು ರಷ್ಮೀ, ಮಂಗಳ, ರಾಜೇಶ್ವರಿ, ಆಶಾ ಕಲ್ಲಪ್ಪ, ರೇಣುಕಾ, ಲಲಿತಾ ದೊಡ್ಡಮನಿ, ಪ್ರಮುಖರಾದ ಹನಸಿ ಸಿದ್ದೇಶ, ಬಿ.ಸಿ. ಉಮಾಪತಿ, ಜ್ಯೋತಿ ಪ್ರಕಾಶ, ಚಂದ್ರಶೇಖರ ಪೂಜಾರ್, ಸಿದ್ದೇಶ ಬೇಗೂರ್, ಪಿ.ಜಿ. ಶಿವಕುಮಾರ, ಚಂದ್ರಪ್ಪ ಶಿವಮೊಗ್ಗ, ಮಲ್ಲಣ್ಣ ಬೋಸನೂರು, ಸಿ.ಸಿ. ಕರಡಿಕಲ್, ಮಂಜುನಾಥ ಗೌಡ, ಅಕ್ಕಿ ಶಿವಣ್ಣ, ಶಿವಕುಮಾರಗೌಡ, ವೈ. ಮಲ್ಲಿಕಾರ್ಜುನ, ಇಟ್ಟಿಗಿ ಕಲ್ಲೇಶಪ್ಪ, ಬಾವಿ ರವೀಂದ್ರ, ಗುರುಬಸವರಾಜ ಸೊನ್ನದ್, ಎ. ಸಂತೋಷ, ಬಂಡಿಹಳ್ಳಿ ಮಂಜುನಾಥ, ಗುರುರಾಜ, ಜೋತ್ಯಪ್ಪ ಹಾಗೂ ಫೋಟೋ ವೀರೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.]




























