
ಕಲಬುರಗಿ,ಜೂ.13-ನಗರದ ಜಾಫರಾಬಾದ್ ಕ್ರಾಸ್, ರಿಂಗ್ ರೋಡ್ನಲ್ಲಿರುವ ಎನ್ಕೆ ಆಸ್ಪತ್ರೆ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಹಾಗೂ ಅತ್ಯಾಧುನಿಕ 200 ಹಾಸಿಗೆಗಳ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, ವೈದ್ಯರ ದಿನಾಚರಣೆಯ ಅಂಗವಾಗಿ ಜುಲೈ 1 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಆಸ್ಪತ್ರೆಯಲ್ಲಿ ಉಚಿತ ಮೆಗಾ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷರಾದ ಡಾ.ಆರಿಫ್ ರಝಾ ಅಹ್ಮದ್ ತಿಳಿಸಿದರು.
ಆಸ್ಪತ್ರೆಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಶಿಬಿರದಲ್ಲಿ ವಿವಿಧ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಸಲಹೆ ನೀಡಲಾಗುವುದು. ಶಿಬಿರದಲ್ಲಿ ಭಾಗವಹಿಸುವ ಎಲ್ಲರಿಗೂ ಉಚಿತ ವೈದ್ಯಕೀಯ ಸಲಹೆ, ಉಚಿತ ಔಷಧ ವಿತರಣೆ,ಪ್ರಯೋಗಾಲಯ ಪರೀಕ್ಷೆಗಳಲ್ಲಿ 30% ರಿಯಾಯಿತಿ, ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ತಜ್ಞರು ಮಾರ್ಗದರ್ಶನ ನೀಡಲಿದ್ದು, ಸಾರ್ವಜನಿಕರು ಈ ಅಪರೂಪದ ಅವಕಾಶದ ಸದುಪಯೋಗ ಪಡೆದುಕೊಂಡು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಆರಿಫ್ ರಝಾ ಅಹ್ಮದ್ ಅವರು ಮನವಿ ಮಾಡಿದರು.
ಆಸ್ಪತ್ರೆಯಲ್ಲಿ 2್ಠ47 ತುರ್ತು ಹಾಗೂ ಟ್ರಾಮಾ ಕೇರ್, ವೆಂಟಿಲೇಟರ್ ಮತ್ತು ಲೈಫ್ ಸಪೆÇೀರ್ಟ್ ಸೌಲಭ್ಯಗಳು, ಅತ್ಯಾಧುನಿಕ ಐಸಿಯು, ಡಯಾಲಿಸಿಸ್, ಸಿಟಿ ಸ್ಕ್ಯಾನ್, ಎಂಐಆರ್, ರಕ್ತನಿಧಿ, ಇಆರ್ಸಿಪಿ ಸೇರಿದಂತೆ ಅನೇಕ ಸುಧಾರಿತ ವೈದ್ಯಕೀಯ ಸೌಲಭ್ಯಗಳು ಲಭ್ಯವಿವೆ. ರೋಗಿ-ಕೇಂದ್ರಿತ ಸೇವೆ, ಆಧುನಿಕ ತಂತ್ರಜ್ಞಾನ, ನೈತಿಕ ವೈದ್ಯಕೀಯ ಪದ್ಧತಿ ಹಾಗೂ ಅನುಭವಿ ವೈದ್ಯರ ತಂಡದ ಮೂಲಕ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವುದು ನಮ್ಮ ಧ್ಯೇಯವಾಗಿದೆ ಎಂದರು.
…………
ಅತ್ಯಾಧುನಿಕ ಸೌಲಭ್ಯಗಳು ಮತ್ತು ತುರ್ತು ಚಿಕಿತ್ಸಾ ಸೇವೆಗಳು
ಎನ್ಕೆ ಆಸ್ಪತ್ರೆಯು ಉತ್ತರ ಕರ್ನಾಟಕದಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುತ್ತಿರುವ ಪ್ರಮುಖ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದೆ. ಅನುಭವಿ ವೈದ್ಯರ ತಂಡ, ಸುಧಾರಿತ ತಂತ್ರಜ್ಞಾನ ಮತ್ತು ರೋಗಿ-ಕೇಂದ್ರಿತ ಸೇವೆಗಳ ಮೂಲಕ ಆಸ್ಪತ್ರೆಯು ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡುತ್ತಿದೆ.
ಆಸ್ಪತ್ರೆಯಲ್ಲಿ 2್ಠ47 ತುರ್ತು ಚಿಕಿತ್ಸಾ ವಿಭಾಗ (ಇmeಡಿgeಟಿಛಿಥಿ ಆeಠಿಚಿಡಿಣmeಟಿಣ) ಕಾರ್ಯನಿರ್ವಹಿಸುತ್ತಿದ್ದು, ತುರ್ತು ವೈದ್ಯಕೀಯ ವಿಭಾಗದಲ್ಲಿ ಪರಿಣತಿ ಹೊಂದಿರುವ ವೈದ್ಯರ ತಂಡವು ದಿನದ 24 ಗಂಟೆಯೂ ಸೇವೆಗೆ ಲಭ್ಯವಿರುತ್ತದೆ. ಅಪಘಾತ, ಹೃದಯಾಘಾತ, ಪಾಶ್ರ್ವವಾಯು ಹಾಗೂ ಇತರ ತುರ್ತು ಆರೋಗ್ಯ ಸಮಸ್ಯೆಗಳನ್ನು ತ್ವರಿತವಾಗಿ ನಿರ್ವಹಿಸಲು ಆಸ್ಪತ್ರೆಯು ಸಂಪೂರ್ಣ ಸಜ್ಜಾಗಿದೆ.
ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಆರೈಕೆಗಾಗಿ ಆಸ್ಪತ್ರೆಯಲ್ಲಿ ವಿಶೇಷ ವೈದ್ಯಕೀಯ ತೀವ್ರ ನಿಗಾ ಘಟಕ (ಒIಅU) ಕಾರ್ಯನಿರ್ವಹಿಸುತ್ತಿದ್ದು, ಅನುಭವಿ ಕ್ರಿಟಿಕಲ್ ಕೇರ್ ವೈದ್ಯರ ತಂಡವು ವೆಂಟಿಲೇಟರ್, ಲೈಫ್ ಸಪೆÇೀರ್ಟ್ ಹಾಗೂ ಇತರೆ ಸುಧಾರಿತ ಚಿಕಿತ್ಸಾ ವ್ಯವಸ್ಥೆಗಳ ಮೂಲಕ ರೋಗಿಗಳ ಆರೈಕೆಯನ್ನು ನಿರ್ವಹಿಸುತ್ತಿದೆ.
ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಪ್ರತ್ಯೇಕ ಅನೆಸ್ಥೇಷಿಯಾ (ಂಟಿಚಿesಣhesiಚಿ) ತಂಡ ಕಾರ್ಯನಿರ್ವಹಿಸುತ್ತಿದ್ದು, ಶಸ್ತ್ರಚಿಕಿತ್ಸೆಗೊಳಗಾಗುವ ರೋಗಿಗಳ ಸುರಕ್ಷತೆ ಮತ್ತು ಆರೈಕೆಯನ್ನು ಖಚಿತಪಡಿಸುತ್ತದೆ.
ಎನ್ಕೆ ಆಸ್ಪತ್ರೆಯ ಹೆಮ್ಮೆಯ ವಿಶೇಷತೆಯೆಂದರೆ ಅಖಖಖಿ (ಅoಟಿಣiಟಿuous ಖeಟಿಚಿಟ ಖeಠಿಟಚಿಛಿemeಟಿಣ ಖಿheಡಿಚಿಠಿಥಿ) ಯಂತ್ರ ಲಭ್ಯತೆ. ತೀವ್ರ ಮೂತ್ರಪಿಂಡ ವೈಫಲ್ಯ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಗಂಭೀರ ರೋಗಿಗಳಿಗೆ ಜೀವ ರಕ್ಷಕ ಚಿಕಿತ್ಸೆಯಾದ ಈ ವ್ಯವಸ್ಥೆ ಸಂಪೂರ್ಣ ಉತ್ತರ ಕರ್ನಾಟಕದಲ್ಲಿ ಎನ್ಕೆ ಆಸ್ಪತ್ರೆಯಲ್ಲೇ ಲಭ್ಯವಿದೆ.
ಇದಲ್ಲದೆ ಆಸ್ಪತ್ರೆಯಲ್ಲಿ ಇನ್-ಹೌಸ್ ಅಖಿ Sಛಿಚಿಟಿ ಹಾಗೂ ಒಖI Sಛಿಚಿಟಿ ಸೌಲಭ್ಯಗಳು ಲಭ್ಯವಿದ್ದು, ರೋಗಿಗಳು ಬೇರೆಡೆಗೆ ತೆರಳುವ ಅವಶ್ಯಕತೆ ಇಲ್ಲದೆ ಎಲ್ಲಾ ಸುಧಾರಿತ ರೋಗನಿರ್ಣಯ ಸೇವೆಗಳನ್ನು ಒಂದೇ ಸ್ಥಳದಲ್ಲಿ ಪಡೆಯಬಹುದು.
ಡಯಾಲಿಸಿಸ್, ರಕ್ತನಿಧಿ, ಇಖಅP, ತುರ್ತು ಚಿಕಿತ್ಸಾ ಸೇವೆಗಳು, ಕ್ರಿಟಿಕಲ್ ಕೇರ್, ಸೂಪರ್ ಸ್ಪೆಷಾಲಿಟಿ ಕನ್ಸಲ್ಟೇಶನ್ ಸೇರಿದಂತೆ ಸಮಗ್ರ ಆರೋಗ್ಯ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಮೂಲಕ ಎನ್ಕೆ ಆಸ್ಪತ್ರೆಯು ಕಲ್ಯಾಣ ಕರ್ನಾಟಕದ ಜನತೆಗೆ ವಿಶ್ವಾಸಾರ್ಹ ಆರೋಗ್ಯ ಸೇವಾ ಕೇಂದ್ರವಾಗಿ ಹೊರಹೊಮ್ಮಿದೆ.
“ಅತ್ಯಾಧುನಿಕ ತಂತ್ರಜ್ಞಾನ, ಪರಿಣಿತ ವೈದ್ಯರು ಹಾಗೂ ಮಾನವೀಯ ಸೇವೆಯ ಮೂಲಕ ವಿಶ್ವಮಟ್ಟದ ಆರೋಗ್ಯ ಸೇವೆಯನ್ನು ಕಲ್ಯಾಣ ಕರ್ನಾಟಕದ ಜನರಿಗೆ ತಲುಪಿಸುವುದು ನಮ್ಮ ಧ್ಯೇಯವಾಗಿದೆ” ಎಂದು ಎನ್ಕೆ ಆಸ್ಪತ್ರೆಯ ಅಧ್ಯಕ್ಷರಾದ ಡಾ.ಆರಿಫ್ ರಝಾ ಅಹ್ಮದ್ ತಿಳಿಸಿದರು.
…………
ತಜ್ಞ ವೈದ್ಯರ ತಂಡ
ಡಾ.ಆರಿಫ್ ರಝಾ ಅಹ್ಮದ್ (ಒಃಃS, ಒS, ಒಅh) 13 ವರ್ಷಗಳ ಅನುಭವ ಹೊಂದಿರುವ ಖ್ಯಾತ ಗ್ಯಾಸ್ಟ್ರೋ ಮತ್ತು ಲಿವರ್ ಶಸ್ತ್ರಚಿಕಿತ್ಸಕರಾಗಿದ್ದು, ಜಠರ, ಯಕೃತ್ ಮತ್ತು ಅಗ್ನ್ಯಾಶಯ ಸಂಬಂಧಿತ ಸಂಕೀರ್ಣ ಶಸ್ತ್ರಚಿಕಿತ್ಸೆಗಳಲ್ಲಿ ಪರಿಣತಿ ಹೊಂದಿದ್ದಾರೆ.
ಡಾ.ಜೀಶಾನ್ ಅಲಿ (ಒಃಃS, ಒಆ, ಆಒ ಉಚಿsಣಡಿoeಟಿಣeಡಿoಟogಥಿ) 12 ವರ್ಷಗಳ ಅನುಭವ ಹೊಂದಿರುವ ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಆಗಿದ್ದು, ಜೀಣಾರ್ಂಗ, ಯಕೃತ್ ಹಾಗೂ ಪ್ಯಾಂಕ್ರಿಯಾಸ್ ರೋಗಗಳ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ್ದಾರೆ.
ಡಾ.ವೀರೇಶ್ ಗೋಡಿ (ಒಃಃS, ಒಆ Iಟಿಣeಡಿಟಿಚಿಟ ಒeಜiಛಿiಟಿe) ಸಾಮಾನ್ಯ ವೈದ್ಯಕೀಯ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಧುಮೇಹ, ರಕ್ತದೊತ್ತಡ ಹಾಗೂ ವಿವಿಧ ದೀರ್ಘಕಾಲೀನ ಕಾಯಿಲೆಗಳ ನಿರ್ವಹಣೆಯಲ್ಲಿ ಪರಿಣತಿ ಹೊಂದಿದ್ದಾರೆ.
ಡಾ.ಮಹಾಲಿಂಗಂ (ಒಃಃS, ಒS ಔಡಿಣho, ಈಒISS) ಆರ್ಥೋಪೆಡಿಕ್ ಹಾಗೂ ಸ್ಪೈನ್ ಸರ್ಜನ್ ಆಗಿದ್ದು, ಮೂಳೆ, ಕೀಲು ಹಾಗೂ ಬೆನ್ನುಹುರಿ ಸಂಬಂಧಿತ ಶಸ್ತ್ರಚಿಕಿತ್ಸೆಗಳಲ್ಲಿ ಪರಿಣತಿ ಹೊಂದಿದ್ದಾರೆ.
ಡಾ.ಶ್ರುತಿಕಾ (ಒಃಃS, ಒS ಔbsಣeಣಡಿiಛಿs & ಉಥಿಟಿಚಿeಛಿoಟogಥಿ) ಮಹಿಳಾ ಆರೋಗ್ಯ, ಗರ್ಭಧಾರಣೆ, ಹೆರಿಗೆ ಹಾಗೂ ಸ್ತ್ರೀರೋಗ ಚಿಕಿತ್ಸೆಯಲ್ಲಿ ಅನುಭವ ಹೊಂದಿರುವ ಗೈನಕಾಲಜಿಸ್ಟ್.
ಡಾ.ಮೊಹಮ್ಮದ್ ತೈಫ್ ಬೆಂಗಡಿಗೇರಿ (ಒಃಃS, ಒS, ಒಅh Uಡಿoಟogಥಿ – ಉoಟಜ ಒeಜಚಿಟisಣ) 17 ವರ್ಷಗಳ ಅನುಭವ ಹೊಂದಿರುವ ಯೂರಾಲಜಿಸ್ಟ್ ಆಗಿದ್ದು, ಮೂತ್ರಪಿಂಡ, ಮೂತ್ರನಾಳ ಹಾಗೂ ಪುರುಷರ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ್ದಾರೆ.
ಡಾ.ವಿವೇಕ್ ಪಾಟೀಲ್ (ಒಃಃS, ಒಆ, ಆಒ ಓeಠಿhಡಿoಟogಥಿ)18 ವರ್ಷಗಳ ಅನುಭವ ಹೊಂದಿರುವ ನೆಫ್ರಾಲಜಿಸ್ಟ್ ಆಗಿದ್ದು, ಮೂತ್ರಪಿಂಡ ಕಾಯಿಲೆಗಳು ಹಾಗೂ ಡಯಾಲಿಸಿಸ್ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ್ದಾರೆ.
ಡಾ.ರಹಮಾನ್ ಹೈದರ್ (ಒಃಃS, ಆಂ, ಆಓಃ) ಕ್ರಿಟಿಕಲ್ ಕೇರ್ ಮತ್ತು ಐಸಿಯು ವಿಭಾಗದ ಮುಖ್ಯಸ್ಥರಾಗಿ ಗಂಭೀರ ಸ್ಥಿತಿಯ ರೋಗಿಗಳ ಆರೈಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.
ಡಾ.ಉದಯಕುಮಾರ್ ಖಾಸಗೆ (ಒಃಃS, ಒಆ, ಆಓಃ ಇmeಡಿgeಟಿಛಿಥಿ ಒeಜiಛಿiಟಿe) ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿದ್ದು, ಅಪಘಾತ ಹಾಗೂ ತುರ್ತು ಪರಿಸ್ಥಿತಿಗಳ ನಿರ್ವಹಣೆಯಲ್ಲಿ ಪರಿಣತಿ ಹೊಂದಿದ್ದಾರೆ ಎಂದು ತಿಳಿಸಿದರು.

























