Home ಸುದ್ದಿ ರಾಷ್ಟ್ರೀಯ ಗಡಿ ಮಸೂದೆಯ ಪ್ರತಿ ಸುಟ್ಟು ಸ್ಟಾಲಿನ್ ಆಕ್ರೋಶ

ಗಡಿ ಮಸೂದೆಯ ಪ್ರತಿ ಸುಟ್ಟು ಸ್ಟಾಲಿನ್ ಆಕ್ರೋಶ

ಚಿನ್ನೈ,ಏ.16:- ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೇಂದ್ರ ಸರ್ಕಾರದ ಗಡಿ ನಿರ್ಣಯ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ನಾಮಕ್ಕಲ್‍ನಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅವರು ಮಸೂದೆಯ ಪ್ರತಿಯನ್ನು ಸುಟ್ಟು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಸ್ಟಾಲಿನ್ ಇದನ್ನು ತಮಿಳರ ವಿರುದ್ಧದ ಫ್ಯಾಸಿಸ್ಟ್ ನಡೆ ಎಂದು ಕರೆದಿದ್ದಾರೆ ಮತ್ತು ದ್ರಾವಿಡ ಪ್ರದೇಶದಾದ್ಯಂತ ಚಳುವಳಿಯನ್ನು ಹರಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಮಸೂದೆ ದಕ್ಷಿಣ ಭಾರತದ ರಾಜಕೀಯ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಉತ್ತರ ಭಾರತದ ಪ್ರಾಬಲ್ಯವನ್ನು ಹೆಚ್ಚಿಸುತ್ತದೆ ಎಂದು ಡಿಎಂಕೆ ನಾಯಕ ಅಭಿಪ್ರಾಯಪಟ್ಟಿದ್ದಾರೆ.


ಇನ್ಸ್ಟಾಗ್ರಾಮ್ ನಲ್ಲಿ ಪೆÇೀಸ್ಟ್ ಹಂಚಿಕೊಂಡಿರುವ ಸ್ಟಾಲಿನ್, ರಾಜ್ಯದ ಎಲ್ಲಾ ಜನರು ಪ್ರಸ್ತಾವಿತ ಸೀಮಾ ನಿರ್ಣಯವನ್ನು ಬಲವಾಗಿ ವಿರೋಧಿಸಬೇಕೆಂದು ಒತ್ತಾಯಿಸಿದ್ದಾರೆ. “ಸೀಮಾ ನಿರ್ಣಯದ ವಿರುದ್ಧದ ಪ್ರತಿಭಟನೆಯ ಬೆಂಕಿ ತಮಿಳುನಾಡಿನಾದ್ಯಂತ ಹರಡಲಿ , ಇದರಿಂದ ಬಿಜೆಪಿಯ ದುರಹಂಕಾರವು ಛಿದ್ರವಾಗುತ್ತದೆ ” ಎಂದು ಬರೆದಿದ್ದಾರೆ. ಐತಿಹಾಸಿಕ ಹಿಂದಿ ವಿರೋಧಿ ಚಳುವಳಿಗಳ ಉದಾಹರಣೆಯನ್ನು ಉಲ್ಲೇಖಿಸಿ, ದೆಹಲಿಯು ಅಂದು ತಲೆಬಾಗಬೇಕಾದಂತೆಯೇ, ಈಗಲೂ ಅದೇ ಸಂಭವಿಸುತ್ತದೆ ಎಂದು ಡಿಎಂಕೆ ಮುಖ್ಯಸ್ಥರು ಹೇಳಿದರು. ಈ ಗಡಿ ನಿರ್ಣಯ ಪ್ರಸ್ತಾಪವು ತಮಿಳರನ್ನು ಅವರ ಸ್ವಂತ ದೇಶದಲ್ಲಿ ರಾಜಕೀಯವಾಗಿ ಅಂಚಿನಲ್ಲಿಡುತ್ತದೆ ಮತ್ತು ಅವರ ಧ್ವನಿಯನ್ನು ಹತ್ತಿಕ್ಕುತ್ತದೆ ಎಂದು ಅವರು ಹೇಳಿದ್ದಾರೆ.


“ಇಂದು, ಈ ಕಪ್ಪು ಕಾನೂನಿನ ಪ್ರತಿಯನ್ನು ಸುಟ್ಟು ಮತ್ತು ನಮ್ಮ ಸ್ವಂತ ನೆಲದಲ್ಲಿ ತಮಿಳರನ್ನು ನಿರಾಶ್ರಿತರನ್ನಾಗಿ ಮಾಡಲು ಪ್ರಯತ್ನಿಸುವ ಈ ಕಪ್ಪು ಕಾನೂನಿನ ವಿರುದ್ಧ ಕಪ್ಪು ಧ್ವಜವನ್ನು ಎತ್ತುವ ಮೂಲಕ ನಾನು ಆ ಬೆಂಕಿಯನ್ನು ಮತ್ತೆ ಹೊತ್ತಿಸಿದ್ದೇನೆ” ಎಂದು ಸಾರುವ ಮೂಲಕ ಕೇಂದ್ರದ ವಿರುದ್ಧ ಸಿಡಿದೆದ್ದಿದ್ದಾರೆ.