
ಲಕ್ಷ್ಮೇಶ್ವರ,ಏ3: ಪಟ್ಟಣದ ಜಗದ್ಗುರು ಶ್ರೀ ವೀರಗಂಗಾಧರ ಕಲ್ಯಾಣ ಮಂಟಪದಲ್ಲಿ ಶಿರಹಟ್ಟಿ ಮಂಡಲ ಬಿಜೆಪಿ ವತಿಯಿಂದ ಪಂಡಿತ್ ದೀನ ದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ ಜರುಗಿತು.
ಕಾರ್ಯಕ್ರಮವನ್ನು ಶಿರಹಟ್ಟಿ ಮಂಡಲ ಬಿಜೆಪಿ ಅಧ್ಯಕ್ಷ ಸುನಿಲ ಮಹಾಂತಶೆಟ್ಟರ ಶಾಸಕ ಚಂದ್ರು ಲಮಾಣಿ ಬಸವರಾಜ್ ಕುಂದಗೋಳ ಮಠ ಎಂಎಸ್ ದೊಡ್ ಗೌಡ್ರು ಮತ್ತಿತರರು ಸಸಿಗೆ ನೀರರೆಯುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಿಂಗಪ್ಪ ಬನ್ನಿ ಸೋಮಣ್ಣ ಉಪನಾಳ ವಿಜಯ ಹತ್ತಿ ಕಾಳ ಗಂಗಾಧರ ಮೆಣಸಿನಕಾಯಿ ಬಸವರಾಜ್ ಸೇರಿದಂತೆ ಅನೇಕರಿದ್ದರು.






















