Home ಜಿಲ್ಲೆ ಬೆಂಗಳೂರು ನಾಗರಿಕರ ಅಹವಾಲಿಗೆ ಉತ್ತರ ನಗರಪಾಲಿಕೆ ಆಯುಕ್ತರ ಸ್ಪಂದನೆ..

ನಾಗರಿಕರ ಅಹವಾಲಿಗೆ ಉತ್ತರ ನಗರಪಾಲಿಕೆ ಆಯುಕ್ತರ ಸ್ಪಂದನೆ..

ಬೆಂಗಳೂರು, ಮಾ. ೨೦- ನಗರದ ನಾಗರಿಕ ಸೇವೆಗಳ ಸುಧಾರಣೆಗಾಗಿ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಪ್ರತಿ ಶುಕ್ರವಾರ ನಡೆಸುತ್ತಿರುವ ಫೋನ್ ಇನ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.


ಇಂದು ಬೆಳಿಗ್ಗೆ ಅಮೃತಹಳ್ಳಿ ಮುಖ್ಯರಸ್ತೆಯಲ್ಲಿರುವ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗರಿಕರಿಂದ ನೇರವಾಗಿ ಅಹವಾಲುಗಳನ್ನು ಸ್ವೀಕರಿಸಿ, ತ್ವರಿತ ಪರಿಹಾರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಂದಿನ ಫೋನ್‌ಇನ್ ಕಾರ್ಯಕ್ರಮದಲ್ಲಿ ೪೪ ಕರೆಗಳು ಸ್ವೀಕೃತಿ೫೯ ಅಹವಾಲುಗಳು ದಾಖಲು ಆಗಿದವು.


ಎಲ್ಲಾ ಅಹವಾಲುಗಳಿಗೆ ತಕ್ಷಣ ಸ್ಪಂದಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅಯುಕ್ತರು ರಸ್ತೆ ಸಮಸ್ಯೆಗಳೇ ಹೆಚ್ಚಾಗಿ ಬಂದಿವೆ.ರಸ್ತೆ ನಿರ್ವಹಣೆಗೆ ಸಂಬಂಧಿಸಿದಂತೆ ೨೧ ಅಹವಾಲುಗಳು ಬಂದಿದ್ದು, ಗುಣಮಟ್ಟ ಕಾಪಾಡಿ ತುರ್ತು ದುರಸ್ತಿ ಕಾರ್ಯ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಇನ್ನೂ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ೧೯ ಅಹವಾಲುಗಳು ದಾಖಲಾಗಿದ್ದು, ಸಮಯಪಾಲನೆ ಮತ್ತು ವೈಜ್ಞಾನಿಕ ವಿಲೇವಾರಿ ಕ್ರಮ ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚಿನೆ ನೀಡಿದರು.
ಅಪಾಯಕಾರಿ ಮರಗಳ ಕೊಂಬೆ ತೆರೆಗೂ ಸೂಚನೆ ನೀಡಿದರು