Home ಜಿಲ್ಲೆ ಗುರುವಂದನೆ ಕಾರ್ಯಕ್ರಮ

ಗುರುವಂದನೆ ಕಾರ್ಯಕ್ರಮ

ನವಲಗುಂದ,ಮಾ30: ಸುಮಾರು ವರ್ಷಗಳ ನಂತರ, ವಿದ್ಯೆ ಧಾರೆ ಎರೆದ ವಿದಾರ್ಥಿಗಳನ್ನು ನೋಡುವ ಅವಕಾಶ ನಮಗೆ ಸಿಕ್ಕಿದ್ದು ನಮ್ಮೆಲ್ಲರ ಪುಣ್ಯ ತಮಗೆ ಧನ್ಯವಾದಗಳು ಎಂದು ಶಂಕರ ಮಹಾ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಡಾಃ ಬಿ.ಸಿ.ಪೂಜಾರ ಹೇಳಿದರು.

ಅವರು ಸ್ಥಳೀಯ ಶ್ರೀ ಶಂಕರ ಮಹಾ ವಿದ್ಯಾಲಯದಲ್ಲಿ ಹಳೆಯ ವಾಣಿಜ್ಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಿ.ಸಿ.ಪೂಜಾರ, ಬಿ.ಸಿ.ಹೊಂಬಳ,ಕೆ.ಎನ್. ಹದಗಲ, ಸಿ.ಎಸ್. ಹೊಸಮಠ, ಎಸ್.ಕೆ.ಜಂಗಳೆಪ್ಪಗೌಡ್ರ, ಎಸ್.ಕೆ.ದೋಟಿಕಲ್, ಜಿ.ಎಸ್.ಪಲ್ಲೇದ, ಎಸ್.ಬಿ.ಯಳ್ಳರ, ನಿವೃತ್ತ ಪ್ರಾಧ್ಯಾಪಕರಾದ ಪಿ.ಜಿ ಹಿರೇಮಠ, ಸಿ.ಬಿ.ಪೂಜಾರ, ಎಂ.ಸಿ.ಹಿರೇಮಠ, ಆರ್.ಎಸ್.ಗುರುಮಠ, ಎಸ್.ಬಿ.ಕುಂದಗೋಳ, ಎಂ.ಆಯ್.ಬುಳಗಣ್ಣವರ ಸೇರಿ ಸಮಸ್ತ ಗುರುವೃಂದವನ್ನು ಸನ್ಮಾನಿಸಿ ಗೌರವಿಸಲಾಯಿತು.

ಪದವಿ ಮಹಾ ವಿದ್ಯಾಲಯದ ಪ್ರಾಚಾರ್ಯರದ ಎಸ್.ವಿ.ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಮುಖ್ಯ ಅತಿಥಿಗಳಾದ ಜೆ.ಪಿ.ಲಮಾಣಿ ಭಾಗವಹಿಸಿದ್ದರು.

ಶ್ರೀಮತಿ ಸುನಿತಾ ಸಿದ್ರಾಮಶೆಟ್ಟರ, ವೇಣುಗೋಪಾಲ ಮದ್ವರಾಯಣ್ಣವರ ಹಾಗೂ ಶ್ರೀಮತಿ ಜ್ಯೋತಿ ಮೇಲಿನಮಠ ಕಳೆದು ಹೋದ ಕಾಲೇಜು ಜೀವನದ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ, ಎನ್.ಸಿದ್ಯಾಮನಗೌಡರ, ಬಿ.ಎಫ್.ಕೊಟಗಿ, ಬಿ.ವಿ.ಮುದಿಗೌಡರ, ಮಲ್ಲಿಕಾರ್ಜುನಗೌಡ ಪಾಟೀಲ, ಶ್ರೀಮತಿ ಚಂದ್ರಿಕಾ ಪಾಟೀಲ, ಶ್ರೀಮತಿ ಸಪನಾ ಪಾಟೀಲ, ಶ್ರೀಮತಿ ಲಲಿತಾ ಬೆಂಡಿಗೇರಿ, ಶ್ರೀಮತಿ ರಾಜಶ್ರೀ ದೇಸಾಯಿ, ಇನ್ನಿತರ ವಾಣಿಜ್ಯ ವಿದಾರ್ಥಿ ವಿದ್ಯಾರ್ಥಿನಿಯರು ಹಾಗೂ ಶಂಕರ ಮಹಾ ವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಶ್ರೀಮತಿ ವೀಣಾ ಪುರಾಣಿಕ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾಂತೇಶ ಖಂಡಿಬಾಗಿಲ, ಸ್ವಾಗತಿಸಿದರು. ರವಿ ಮುಗಳಿ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಮತಿ ಶಾಂತಲಾ ಸೋಮನಕಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದರು,ಶ್ರೀಮತಿ ಅನುರಾಧ ಹೆಬಸೂರ ಇವರು ಕಾರ್ಯಕ್ರಮ ವಂದನಾರ್ಪಣೆ ಮಾಡಿದರು.