Home ಜಿಲ್ಲೆ ಬೆಂಗಳೂರು ಸಹಾಯಕ ನಿರ್ದೇಶಕಿ ವಿಜಯಕ್ಷ್ಮಿ ವಿರುದ್ಧ ತನಿಖೆಗೆ ಕೋರಿ ಡಿಸಿಗೆ ದೂರು

ಸಹಾಯಕ ನಿರ್ದೇಶಕಿ ವಿಜಯಕ್ಷ್ಮಿ ವಿರುದ್ಧ ತನಿಖೆಗೆ ಕೋರಿ ಡಿಸಿಗೆ ದೂರು

ಕೋಲಾರ: ೯- ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ವಿರುದ್ಧ ಭ್ರಷ್ಟಾಚಾರದ ಆರೋಪಕ್ಕೆ ದಲಿತ ಮುಖಂಡ ಕಲಾವಿದ ಮತ್ತಿಕುಂಟೆ ಕೃಷ್ಣ ವಿರುದ್ದ ವಿನಾಕಾರಣ ಸುಳ್ಳು ದೂರು ದಾಖಲಿಸಿ, ತೇಜೋವದೆ ಮಾಡಿ ಹಾಗೂ ತೊಂದರೆ ನೀಡುತ್ತಿದ್ದು ಕೂಡಲೇ ವಿಜಯಲಕ್ಷ್ಮಿ ಅವರನ್ನು ಅಮಾನತ್ತು ಗೊಳಿಸಿ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ದಲಿತ ಸಂಘಟನೆಗಳ ಸಂಯುಕ್ತ ರಂಗದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಎಂ.ಆರ್ ರವಿಗೆ ದೂರು ನೀಡಿದರು.


ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಿಪಿಎಸ್ ಮುನಿರಾಜು ಮಾತನಾಡಿ ಕಲಾವಿದ ಮತ್ತಿಕುಂಟೆ ಕೃಷ್ಣ ದಲಿತ ಸಂಘಟನೆಗಳ ಹೋರಾಟಗಳ ಮೂಲಕ ದಲಿತ ಕಲಾವಿದನಾಗಿ ಜಿಲ್ಲೆಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡಿದ್ದಾರೆ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ಆಯೋಜಿಸುವ ಜಿಲ್ಲಾ ಮಟ್ಟದ ಹಾಗೂ ರಾಜ್ಯಮಟ್ಟದ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದು ಹೆಚ್ಚು ಪ್ರಸಿದ್ಧಿಯಾಗಿ ಜನಪ್ರಿಯಗೊಂಡಿದ್ದಾನೆ ಮತ್ತಿಕುಂಟೆ ಕೃಷ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆ ತರುವ ಕೆಲಸವನ್ನು ಮಾಡಿದ್ದಾರೆ ಎಂದು ಆರೋಪಿಸಿದರು.


ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಹಾಯಕ ನಿರ್ದೇಶಕಿಯಾಗಿ ವಿಜಯಲಕ್ಷ್ಮಿ ಇಲಾಖೆಗೆ ಬಂದಾಗಿನಿಂದ ಹಲವಾರು ಮಹನೀಯರ ಜಯಂತಿಗಳು ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜ್ಯಮಟ್ಟದ ಕಾರ್ಯಕ್ರಮಗಳು ನಡೆದಿದ್ದು, ಈ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಇಲಾಖೆಗೆ ನೀಡುವ ಅನುದಾನವನ್ನು ನೈಜ ಕಲಾವಿದರಿಗೆ ಹಣವನ್ನು ನೀಡದೆ, ಸಂಬಂಧ ಇಲ್ಲದ ಖಾಸಗಿ ವ್ಯಕ್ತಿಗಳ ಜೊತೆ ಕೈಜೋಡಿಸಿ ಮತ್ತು ಅಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುವ ಸಿಬ್ಬಂದಿ ಹಾಗೂ ಕೆಲ ಗುತ್ತಿಗೆದಾರರ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ಹಣವನ್ನು ವರ್ಗಾಯಿಸಿಕೊಂಡು ಅವರಗಳಿಂದ ಪುನಃ ಲಕ್ಷಾಂತರ ರೂಪಾಯಿ ಹಣವನ್ನು ಹಿಂಪಡಿದುಕೊಂಡು ಸರ್ಕಾರಕ್ಕೆ ಸುಳ್ಳು ಲೆಕ್ಕಗಳನ್ನು ಕೊಟ್ಟು ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.


ಇದರ ಸಂಬಂಧ ವಿಜಯಲಕ್ಷ್ಮಿ ವಿರುದ್ದ ಮತ್ತಿಕುಂಟೆ ಕೃಷ್ಣ ಸರ್ಕಾರದ ಹಣವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಅಕೌಂಟಿಗೆ ಜಮಾ ಮಾಡಿ ಅವರಿಂದ ಆಕ್ರಮವಾಗಿ ವಾಪಸ್ ಪಡೆಯುತ್ತಿದ್ದು, ಕೆಲವು ದಾಖಲೆಗಳ ಸಮೇತ ಲೋಕಾಯುಕ್ತರಿಗೆ ಈ ಅಧಿಕಾರಿಯ ವಿರುದ್ಧ ಕಾನೂನು ಶಿಸ್ತು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗಿದೆ ತಾವುಗಳು ಈ ಅಕ್ರಮಗಳನ್ನು ತನಿಖೆ ಮಾಡಿ ವರದಿ ಕೊಡಲು ಸಮಿತಿಯನ್ನು ರಚಿಸುವಂತೆ ಒತ್ತಾಯಿಸಿದರು


ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ಮೇಡಿಹಾಳ ಮುನಿಅಂಜಿನಪ್ಪ ಮಾತನಾಡಿ ಕಳೆದ ವಾರ ಅಂಬೇಡ್ಕರ್ ಪ್ರತಿಮೆ ಗುದ್ದಲಿ ಪೂಜೆಯಲ್ಲಿ ಕಲಾವಿದ ಮತ್ತಿಕುಂಟೆ ಕೃಷ್ಣ ಪಾಲ್ಗೊಂಡಿದ್ದು ಆ ದಿನ ಯಾವುದೇ ರೀತಿಯಲ್ಲಿ ವಿಜಯಲಕ್ಷ್ಮಿ ಅವರಿಗೂ ಮತ್ತಿಕುಂಟೆ ಕೃಷ್ಣ ಅವರಿಗೂ ಗಲಾಟೆ ನಡೆದಿಲ್ಲ ಆದರೂ ಗಲಾಟೆ ಮಾಡಿದ್ದಾರೆ ಎಂದು ನಗರದ ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ನೀಡಿ ತೊಂದರೆಯನ್ನು ನೀಡುತ್ತಿದ್ದಾರೆ ಆದ್ದರಿಂದ ಸುಳ್ಳು ದೂರು ನೀಡಿರುವ ಮತ್ತು ಅಕ್ರಮವಾಗಿ ಇಲಾಖೆಯಿಂದ ಹಣವನ್ನು ದುರುಪಯೋಗ ಮಾಡಿಕೊಂಡಿರುವ ವಿಜಯಲಕ್ಷ್ಮಿ ರವರನ್ನು ಕೂಡಲೇ ಅಮಾನತ್ತು ಗೊಳಿಸಬೇಕು ಎಂದು ಒತ್ತಾಯಿಸಿದರು


ವಿಜಯಲಕ್ಷ್ಮಿ ಅವರ ಅವಧಿಯಲ್ಲಿ ನಡೆಸಿರುವ ಎಲ್ಲಾ ಕಾರ್ಯಕ್ರಮಗಳ ಹೆಸರಿನಲ್ಲಿ ನಡೆಸಿರುವಂತಹ ಅಕ್ರಮ ಹಣಕಾಸಿನ ಅವ್ಯವಹಾರ, ಟಿ ಚೆನ್ನಯ್ಯ ರಂಗಮಂದಿರ ನಿರ್ವಹಣೆ, ಡಿವಿಜಿ ಗುಂಡಪ್ಪ ರಂಗಮಂದಿರ, ಮುಳಬಾಗಲು ಹಾಗೂ ಮಾಸ್ತಿ ಅಯ್ಯಂಗಾರ್ ಟ್ರಸ್ಟ್, ಮಾಸ್ತಿ ಇದರ ನಿರ್ವಹಣೆಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅಕ್ರಮಗಳನ್ನು ಸರ್ಕಾರಕ್ಕೆ ತಪ್ಪು ಲೆಕ್ಕಗಳನ್ನು ಕೊಟ್ಟು, ಸುಳ್ಳು ದಾಖಲೆಗಳನ್ನು ನೀಡಿ ಲಕ್ಷಾಂತರ ರೂಪಾಯಿಗಳ ಹಣವನ್ನು ಲಪಟಾಯಿಸಿರುವ ಕಾರಣ ಈ ಅಧಿಕಾರಿಯ ವಿರುದ್ಧ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಒತ್ತಾಯಿಸಿದರು


ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಟಿ.ವಿಜಯಕುಮಾರ್, ಚಂದ್ರಶೇಖರ್, ಚಂದ್ರಮೌಳಿ, ನಾಗನಾಳ ಶಂಕರ್, ವಾಲ್ಮೀಕಿ ಸಂಘದ ಕೋಟೆ ಶ್ರೀನಿವಾಸ್, ಮೋಚಿಪಾಳ್ಯ ನಾಗೇಶ್, ಹಾರೋಹಳ್ಳಿ ರವಿ, ಅನಿಲ್, ರಾಜಕುಮಾರ್ ಸೇರಿದಂತೆ ನೂರಾರು ದಲಿತ ಮುಖಂಡರು ಇದ್ದರು,