Home ಜಿಲ್ಲೆ ಮುಖ್ಯಮಂತ್ರಿಗಳ ಪದಕ ಪುರಸ್ಕೃತ ಸಂತೋಷ ಮಹಾರಾಜರಿಗೆ ಗೌರವ ಸನ್ಮಾನ

ಮುಖ್ಯಮಂತ್ರಿಗಳ ಪದಕ ಪುರಸ್ಕೃತ ಸಂತೋಷ ಮಹಾರಾಜರಿಗೆ ಗೌರವ ಸನ್ಮಾನ

ಬೀದರ, ಮೇ ೧೨:ಬೀದರ ಎಸ್.ಪಿ. ಕಚೇರಿಯ ಡಿ.ಎಸ್.ಬಿ ವಿಭಾಗದ ಹೆಡ್ ಕಾನ್ಸ್ಟೇಬಲ್ ಆಗಿರುವ ಸಂತೋಷ ಮಹಾರಾಜ ಅವರಿಗೆ ೨೦೨೫ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಪದಕ ಲಭಿಸಿದ ಹಿನ್ನೆಲೆಯಲ್ಲಿ ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು.
ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ಹಾಗೂ ಬುದ್ಧ ಬಸವ ಅಂಬೇಡ್ಕರ್ ಯುವ ಸಂಘಟನೆಯ ಸದಸ್ಯ ಅಮರ ಅಲ್ಲಾಪೂರ ಅವರು ಎಸ್.ಪಿ. ಕಚೇರಿಯಲ್ಲಿ ಸಂತೋಷ ಮಹಾರಾಜರನ್ನು ಸನ್ಮಾನಿಸಿ ಶುಭಾಶಯ ಕೋರಿದರು.
ಸಂತೋಷ ಮಹಾರಾಜ ಅವರು ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿರುವ ಸೇವೆಯನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಲಿ ಎಂದು ಹಾರೈಸಲಾಯಿತು.ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಗುಂಡಪ್ಪಾ ಅವರು ಉಪಸ್ಥಿತರಿದ್ದರು.