ಅಹಮದಾಬಾದ್,ಜೂ.೧೩-ಏರ್ ಇಂಡಿಯಾ ವಿಮಾನ ಅಪಘಾತದ ಸಮಯದಲ್ಲಿ ಚಹಾ ಅಂಗಡಿಯ ಬಳಿ ನಿಂತಿದ್ದ ೧೪ ವರ್ಷದ ಬಾಲಕನೊಬ್ಬ ಭಾರಿ ಬೆಂಕಿಯಲ್ಲಿ ಸಿಲುಕಿ ದುರಂತ ಸಾವನ್ನಪ್ಪಿದ್ದಾನೆ.
ಮೃತ ಬಾಲಕ ಆಕಾಶ್ (೧೪) ಎಂದು ಗುರುತಿಸಲಾಗಿದೆ.ಆಕಾಶ್ ಕುಟುಂಬವು ಬಿಜೆ ಹಾಸ್ಟೆಲ್ ಮುಂದೆ ಚಹಾ ಅಂಗಡಿಯನ್ನು ಹೊಂದಿತ್ತು. ಆಕಾಶ್ ತನ್ನ ತಾಯಿಗೆ ಆಹಾರವನ್ನು ನೀಡಲು ಅಂಗಡಿಗೆ ಹೋಗಿದ್ದ.
ವಿಮಾನ ಅಪಘಾತಕ್ಕೀಡಾದಾಗ ಆಕಾಶ್ ಚಹಾ ಅಂಗಡಿಯ ಮುಂದೆ ನಿಂತಿದ್ದ. ಹಠಾತ್ ಸ್ಫೋಟದಿಂದಾಗಿ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ. ಕುಟುಂಬ ಸದಸ್ಯರು ಆಕಾಶ್ ಬೆಂಕಿಯಲ್ಲಿ ಸುಟ್ಟು ಸಾವನ್ನಪ್ಪಿದ್ದಾನೆ ಎಂದು ಕಣ್ಣೀರಿಟ್ಟಿದ್ದಾರೆ.
ಆಕಾಶ ಮರಣಿಸಿದ ಸುದ್ದಿ ತಾಯಿಗೆ ಇನ್ನೂ ತಿಳಿದಿಲ್ಲ ಏಕೆಂದರೆ ಅವರು ಕೂಡಾ ಈ ದುರಂತ ದಲ್ಲಿ ಗಾಯಗೊಂಡಿದ್ದಾರೆ.ಇದೀಗ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಮಗ ಹೇಗಿದ್ದಾನೆ ಎಂದು ಕೇಳುತ್ತಿದ್ದಾರೆ. ಆಕಾಶ್ಗೆ ಏನೂ ಆಗಿಲ್ಲ ಮತ್ತು ಅವನು ಚೆನ್ನಾಗಿದ್ದಾನೆ ಎಂದು ಕುಟುಂಬ ಸದಸ್ಯರು ಭರವಸೆ ನೀಡಿದ್ದಾರೆ.