
ಕಲಬುರಗಿ,ಜು.22- ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ನಗರದ ಸುಪರ ಮಾರುಕಟ್ಟೆ ಕೆಕೆಸಿಸಿಐ ಯ ಶ್ರೀನಿವಾಸರಾವ ರಘೋಜಿ ಸಭಾಂಗಣದಲ್ಲಿ ನಿನ್ನೆ ಮಂಗಳವಾರ ಜು.21ರಂದು ಜರುಗಿದ ಕಾರ್ಯಕ್ರಮದಲ್ಲಿ ಉದ್ಯಮಿ ರಾಘವೇಂದ್ರ ಮೈಲಾಪುರ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ “ಕುಶಾಗ್ರಮತಿ ಖರ್ಗೆ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ಮಯೋಗಿ ರಾಜ್ಯ ಸಭಾ ವಿರೋಧ ಪಕ್ಷದ ನಾಯಕರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರ 85ನೇ ಹುಟ್ಟು ಹಬ್ಬದ ಸಂಭ್ರಮದ ಪ್ರಯುಕ್ತ್ತ ಆಯೋಜಿಸÀಲಾಗಿದ್ದ ಈ ಕಾರ್ಯಕ್ರಮಕ್ಕೆ ಪೂಜ್ಯ ಹವಾ ಮಲ್ಲಿನಾಥ ಮಹಾರಾಜರು ಚಾಲನೆ ನೀಡಿದರು.
ಶ್ರೀಶರಣಬಸವೇಶ್ವರ ವಿದ್ಯಾವರ್ದಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಗುವಿವಿ ಕುಲಪತಿ ಪ್ರೊ.ಶಶಿಕಾಂತ ಎಸ್.ಉಡಿಕೇರಿ, ಶರಣಬಸಪ್ಪಾ ಪಪ್ಪಾ, ರಾಜು ದೇಶಮುಖ, ಲಕ್ಷ್ಮೀ ನಾರಾಯಣ ಮನೋಕರ್ ಭಾಗವಹಿಸಿದ್ದರು.
ವ್ಯಾಪಾರ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಕೈಗೊಂಡ ಗಣನಿಯ ಸಾಧನೆಗಾಗಿ ಹಿರಿಯ ಉದ್ಯಮಿ ರಾಘವೇಂದ್ರ ಮೈಲಾಪುರ ಮತ್ತು ವಿವಿಧ ಕ್ಷೇತ್ರಗಳ ಸಾಧಕರಾದ ಉಮಾಕಾಂತ ನಿಗ್ಗುಡಗಿ, ಡಾ.ಶಿವಪುತ್ರಪ್ಪ ಹರವಾಳ, ಪ್ರಭಾಕರ ಜೋಶಿ, ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ, ಹಿರಿಯ ಪತ್ರಕರ್ತ ಹಟ್ಟಿ ನಜೀರ್ ಮಿಯಾನ್, ಡಾ.ಲಕ್ಷ್ಮೀ ಪಾಟೀಲ ಮಾಕಾ, ವೈಷ್ಣವಿ ಎಸ್.ಅಹಂಕಾರಿ, ಸರೇಖಾ ಹೊನಗುಂಟಾ, ಸೋಮಶೇಖರ ಬಣಗಾರ ಸೊನ್ನ, ದಯಾನಂದ ಮನೋಕರ್, ಶಿವು ಹಳ್ಳಿಖೇಡ ಅವರಿಗೆ ಕುಶಾಗ್ರಮತಿ ಖರ್ಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದ ಅಧ್ಯಕ್ಷರಾದ Àಶಾಂತರೆಡ್ಡಿ ಪೇಠಶೀರೂರ ಅವರು, ಪ್ರಸ್ತಾವಿಕವಾಗಿ ಸಂಘದ ಉದ್ದೇಶ ಮತ್ತು ಕಳೆದ ಎರಡು ದಶಕಗಳಿಂದ ಕೈಗೊಳ್ಳುತ್ತಿರುವ ಕಾರ್ಯಕ್ರಮದ ಕುರಿತು ಮಾತನಾಡಿದರು.
ಹೋರಾಟಗಾರ ಲಕ್ಷ್ಮಣ ದಸ್ತಿ, ಉಮಾಕಾಂತ ನಿಗ್ಗುಡಗಿ, ಬಸವರಾಜ ದೇಶಮುಖ, ಶರಣು ಪಪ್ಪಾ ಮತ್ತು ಪ್ರೊ. ಶಶಿಕಾಂತ ಉಡಿಕೇರಿ ಅವರು, ಡಾ.ಮಲ್ಲಿಕಾರ್ಜುನ ಖರ್ಗೆ ಅವರು, ಈ ಭಾಗದ ಕಲ್ಯಾಣಕ್ಕಾಗಿ ಕೈಗೊಂಡ ಕೊಡುಗೆಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು.
ಡಾ.ಖರ್ಗೆ ಅವರ ಜನಪರ ಕಾಳಜಿ, ದೂರದೃಷ್ಠಿಯಿಂದ ಕಲಂ 371 ಜೆ ಸಂವಿಧಾನಿಕ ಸೌಲಭ್ಯ ನಮ್ಮ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸಿಗುವಂತಾಗಿದೆ. ಅವರ ಜನಸೇವೆಯನ್ನು ಸ್ಮರಿಸುವ ಈ ಕಾರ್ಯಕ್ರಮ ಸಂಘಟಿಸಿರುವುದು ಆರ್ಥ ಪೂರ್ಣವಾಗಿದ್ದು, ಖರ್ಗೆ ಅವರನ್ನು ಪಕ್ಷತೀಥ, ಜಾತಿ ಧರ್ಮ ರಹಿತವಾಗಿ ಈ ಭಾಗದ ಜನರು ಸ್ಮರಿಸುತ್ತಾರೆ. ಭಗವಂತನು ಅವರಿಗೆ ಆಯುರಾರೋಗ್ಯ ಅಧಿಕಾರ ಸಂಪತ್ತು ನೀಡಿ ಅವರ ಜನಸೇವೆ ಮತ್ತಷ್ಟು ಕಲ್ಯಾಣಕರ ವಾಗಿ ರಾಷ್ಟ್ರಕ್ಕೆ ವಿಸ್ತರಿಸಲೆ ಎಂದು ಗಣ್ಯಮಾನ್ಯರು ತಮ್ಮ ಅನಿಷಿಕೆಯಲ್ಲಿ ಶುಭಹಾರೈಸಿದರು.































