
ಅಹಮದಾಬಾದ್/ ರಾಜ್ಕೋಟ್,ಮಾ.24- ಗುಜರಾತ್ನ ವಿವಿಧೆಡೆ ಇಂಧನ ಕೊರತೆಯ ವದಂತಿ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ನಗರಗಳಲ್ಲಿ ಪೆಟ್ರೋಲ್ ಪಂಪ್ಗಳ ಮುಂದೆ ಸಾವಿರಾರು ವಾಹನ ಸವಾರರು ಪರದಾಡುವಂತೆ ಮಾಡಿದ ಘಟನೆ ನಡೆದಿದೆ.
ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳಲು ವಾಹನ ಸವಾರರು ಕಿಲೋ ಮೀಟರ್ಗಟ್ಟಲೆ ಪೆಟ್ರೋಲ್ ಬಂಕ್ ಮುಂದೆ ನಿಂತಿದ್ದ ದೃಶ್ಯ ಪೆಟ್ರೊಲ್ ,ಡೀಸೆಲ್ ಅಭಾವ ಎಷ್ಟಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ಉದ್ದನೆಯ ಸರತಿ ಸಾಲುಗಳು, ಸಂಚಾರ ದಟ್ಟಣೆ ಮತ್ತು ಉದ್ವಿಗ್ನ ವಾತಾವರಣ ಸೃಷ್ಟಿಗೂ ಕಾರಣವಾಗಿತ್ತು
ಶಿವರಂಜನಿ, ಎಸ್ಜಿ ಹೆದ್ದಾರಿ, ಬೋಡಕ್ದೇವ್, ಥಲ್ತೇಜ್, ಗುಲ್ಬಾಯಿ ಟೆಕ್ರಾ ಮತ್ತು ಪಾಲ್ಡಿಗಳಲ್ಲಿನ ಪಂಪ್ಗಳಲ್ಲಿ ಅಸ್ತವ್ಯಸ್ತವಾಗಿರುವ ದೃಶ್ಯಗಳು ಕಂಡುಬಂದರೂ, ಗುಜರಾತ್ನಾದ್ಯಂತ ಹೆಚ್ಚು ಸಂಕೀರ್ಣವಾದ ಇಂಧನ ವಿತರಣಾ ಅಡಚಣೆ ರಾಜ್ಯದ ಜನರಿಗೆ ತೊಂದರೆ ಉಂಟು ಮಾಡಿದೆ
ವಿತರಕರು ಮತ್ತು ಅಧಿಕಾರಿಗಳು ಇಂಧನದ ಕೊರತೆಯಿಲ್ಲ ಎಂದು ಹೇಳಿದರೂ ವಾಹನ ಸವಾರರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ ಗುಜರಾತ್ ಸರ್ಕಾರವೂ ಕೂಡ ನಾಗರಿಕರು ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದೆ
“ಒಂದು ಹಂತದಲ್ಲಿ, ಕುಟುಂಬದ ಸದಸ್ಯರು ತಮ್ಮ ಸಂಬಂಧಿಕರಿಗೆ ಕರೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಟ್ಯಾಂಕ್ ತುಂಬಿಸಿಕೊಳ್ಳಲು ಪೆಟ್ರೋಲ್ ಬಂಕ್ ಮುಂದೆ ಕಿಲೋಮೀಟರ್ ಗಟ್ಟಲೆ ಸವಾರುರು ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಜನಸಂದಣಿಯನ್ನು ನಿರ್ವಹಿಸಲು ಸಿಬ್ಬಂದಿ ಹಗ್ಗಗಳು ಮತ್ತು ಬ್ಯಾರಿಕೇಡ್ಗಳನ್ನು ಬಳಸಲಾಗಿತ್ತು ವಾಹನ ಚಾಲಕರು ಸರತಿ ಸಾಲಿನಲ್ಲಿ ನಿಲ್ಲಲು ಪ್ರಯತ್ನಿಸಿದಾಗ ವಾದ, ಪ್ರತಿವಾದಕ್ಕೆ ಕಾರಣವಾಗಿತ್ತು ಎಂದು ಫಾರ್ಮಾ ವಲಯದ ವೃತ್ತಿಪರ ಸಂತೋಷ್ ಸೋಲಂಕಿ ತಾವು ಎದುರಿಸಿದ ಘಟನೆಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ
ಡೀಲರ್ಗಳು ಇತ್ತೀಚಿನ ಕಾರ್ಯಾಚರಣೆಯ ಬದಲಾವಣೆಗಳನ್ನು ಇಂತಹ ವದಂತಿಗಳಿಗೆ ಕಾರಣವಾಗಿದೆ.ಶಿವರಂಜನಿ ಬಳಿಯ ಸೈನಿಕ್ ಸೇವಾ ಸೇವೆಗಳ ಮಾಲೀಕ ಪದ್ಮಜಯ್ ರಾಥೋಡ್, ತೈಲ ಕಂಪನಿಗಳು ಹಿಂದಿನ ಐದು ದಿನಗಳ ರಿವಾಲ್ವಿಂಗ್ ಕ್ರೆಡಿಟ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಿವೆ
“ಹೆಚ್ಚಿನ ಪೆಟ್ರೋಲ್ ಪಂಪ್ಗಳು ಸುಮಾರು ಮೂರು ದಿನಗಳ ಸ್ಟಾಕ್ ಅನ್ನು ನಿರ್ವಹಿಸುತ್ತವೆ. ಸಾಲವಿಲ್ಲದೆ, ಕೆಲವು ಸಮಯಕ್ಕೆ ಸರಿಯಾಗಿ ಇಂಧನ ತುಂಬಲು ಸಾಧ್ಯವಾಗಲಿಲ್ಲ ಮತ್ತು ಭೀತಿಯ ವಾತಾವರಣ ಸೃಷ್ಟಿಯಾಗಿತ್ತು.






















