
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಏ,27- ತಾಲೂಕಿನ ಕುಡಿತಿನಿ ಪಟ್ಟಣದ ಶ್ರೀ ಸೀತಾರಾಮ ದೇವರ ಹಾಗೂ ಶ್ರೀ ದೊಡ್ಡ ಆಂಜನೇಯಸ್ವಾಮಿ ದೇವರ ರಥೋತ್ಸವ ನಿನ್ನೆ ಸಂಜೆ ಸಡಗರ ಸಂಭ್ರಮದಿಂದ ಜರುಗಿತು.
ಬೆಳಿಗ್ಗೆ ದೇವಾಲದಲ್ಲಿ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, ಹವನ. ಹಾಗೂ ಶ್ರೀ ಸೀತಾರಾಮ ಕಲ್ಯಾಣೋತ್ಸವ ಜರುಗಿತು. ನೂರಾರು ಭಕ್ತರು ಹರಕೆ ಸಲ್ಲಿಸುವುದು ಕಂಡುಬಂತು.
ಸುತ್ತ ಮುತ್ತಲಿನ ಗ್ರಾಮಗಳಾದ ಹೊರಗಿನದೋಣಿ, ತಿಮ್ಮಲಾಪುರ, ಏಳುಬೆಂಚಿ, ತೋರಣಗಲ್ಲು, ತಾಳೂರು ಸೇರಿದಂತೆ ಹಲವು ಹಳ್ಳಿಗಳ ಭಕ್ತಜನ ಸ್ತೋಮ ಭಾಗಿಯಾಗಿದ್ದರು.






















