
(ಸಂಜೆವಾಣಿ ವಾರ್ತೆ)
ಬಳ್ಳಾರಿ. ಮೇ. 08: ತಾಲೂಕಿನ ಚರಕುಂಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗುತ್ತಿರುವ ಶ್ರೀ ಎರಿತಾತ ದೇವಸ್ಥಾನದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ಒಂದು ಲಕ್ಷ ರೂಪಾಯಿ ಹಣವನ್ನು ಸಹಾಯಧನವನ್ನಾಗಿ ನೀಡಿದ್ದಾರೆ. ಸಂಸ್ಥೆಯಿಂದ ನೀಡಲಾದ ಈ ಡಿ. ಡಿ ಯನ್ನು ಬಳ್ಳಾರಿ ತಾಲೂಕಿನ ನಂಬರ್ 2 ಕಚೇರಿಯ ಯೋಜನಾಧಿಕಾರಿ ಸತೀಶ್ ಜಿ ಅವರು ಶ್ರೀ ಎರಿತಾತ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಮತ್ತು ಕಾರ್ಯದರ್ಶಿ ಕೃಷ್ಣ ಅವರಿಗೆ ಊರಿನ ಗಣ್ಯರ ಮತ್ತು ಹಲವು ಜನ ಭಕ್ತರ ಸಮ್ಮುಖದಲ್ಲಿ ವಿತರಿಸಿದರು





















