ಸಂತಜೋಸೆಫ್ ಕಾಲೇಜಿನಲ್ಲಿ ಸಂಚಾರಿ ನಿಯಮ ಜಾಗೃತಿ ಕಾರ್ಯಕ್ರಮ

ಕಲಬುರಗಿ,ಸೆ.23: ನಗರದ ಸಂತ ಜೋಸೆಫ್ ಪಿ.ಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು . ಪ್ರಾಂಶುಪಾಲರಾದ ಸಿಸ್ಟರ್ ಶರಣಲತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಚಾರಿ ಪೊಲೀಸ್ ಠಾಣೆ-2 ಎಎಸ್‍ಐ ರಾಜಕುಮಾರ ಕೋಬಾಳÉ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉಪಪ್ರಾಚಾರ್ಯ ಡಾ. ಚಿ. ಸಿ. ನಿಂಗಣ್ಣನವರು ಮಾತನಾಡಿ ಯುವಜನತೆ ಸಂಚಾರಿ ನಿಯಮಪಾಲನೆ ಮಾಡುವುದರ ಜೊತೆಗೆ ಅತಿವೇಗವಾಗಿ ವಾಹನ ಚಲಿಸಬಾರದು. ತಮ್ಮ ರಕ್ಷಣೆಯ ಜೊತೆಗೆ ಸಂಚಾರಿ ನಿಯಮ ಪಾಲಿಸುವುದು ಭವ್ಯಭವಿಷ್ಯತ್ತಿಗೆ ಸಹಾಯಕವಾಗಲಿದೆ ಎಂದು ತಿಳಿಸಿದರು . ಆರಂಭದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥನಾಗೀತೆ ನಡೆಸಿಕೊಟ್ಟರು , ಉಪನ್ಯಾಸಕಿ ದಿವ್ಯಾ ಕುಲಕರ್ಣಿ ನಿರೂಪಿಸಿದರು, ಸೃಜನಾ ವಂದನಾರ್ಪಣೆ ಮಾಡಿದರು.