
ಯಾದಗಿರಿ:ಜೂ.18: ಮಾಧ್ವಾರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 2024-25 ನೇ ಸಾಲಿನ ಲೆಕ್ಕ ಶಿರ್ಷಿಕೆ ಅಪೆಂಡಿಕ್ಸ್ ಇ ಅನುದಾನದ ಅಡಿಯಲ್ಲಿ ಗುರುಮಠಕಲ್ ಮತಕ್ಷೇತ್ರದ ಮುಧೋಳ, ಯಲಗೇರಾ ಎಸ್ ಎಚ್ 10 ರಿಂದ ಆಂದ್ರ ಬಾರ್ಡರ್ ಎಸ್ ಎಚ್ -127 ಕಿ ಮೀ 59.0 ರಿಂದ 64.0ರವರೆಗೆ ರಸ್ತೆ ನಿರ್ಮಾಣದ ಅಂದಾಜು ಮೊತ್ತ 4ಕೋಟಿ ರೊ. ಗಳ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಶಿಲಾನ್ಯಾಸಕರು ಹಾಗೂ ಕಾರ್ಯಕ್ರಮದ ಘನ ಅಧ್ಯಕ್ಷವಹಿಸಿದ ಗುರುಮಠಕಲ್ ಶಾಸಕ ಶರಣುಗೌಡ ಕಂದಕೂರ ಅವರು ಕ್ಷೇತ್ರದ ಜನತೆಯ ಬೇಡಿಕೆಗಳಿಗೆ ಪ್ರಮಾಣಿಕ ಪ್ರಯತ್ನ ಮಾಡುವುದರ ಜೋತೆಗೆ ಸರಕಾರ ಅನುದಾನ ನೀಡಿದಂತೆ ಗ್ರಾಮೀಣ ಪ್ರದೇಶಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಅಭಿವೃದ್ಧಿಗೆ ಆಧ್ಯತೆ ನೀಡಲಾಗುವುದು ಎಂದು ಹೇಳಿದರು. ಈ ವೇಳೆ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಪಿ ಡಬ್ಲ್ಯೂ ಡಿ ಎಇಇ ಪರಶುರಾಮ್, ತಾ ಪಂ ಇ ಒ ಅಮರೇಶ ಪಾಟೀಲ್, ಅಮರನಾಥರೆಡ್ಡಿ, ಬನ್ನಪ್ಪಗೌಡ, ಶಂಕ್ರಣ್ಣ ಕಾಳಗಿ, ಶಂಕರರೆಡ್ಡಿ ಯಲಸತ್ತಿ, ರಾಘವೇಂದ್ರ ರೆಡ್ಡಿ ವಡವಟ್, ಆನಂದ, ಗುರುನಾಥ ರೆಡ್ಡಿ ಸೇರಿದಂತೆ ಇತರರು ಇದ್ದರು.