ದರ್ಗಾದಲ್ಲಿಟ್ಟಿದ್ದ ಬಂಗಾರದ ಒಡವೆ ಕಳವು

ಕಲಬುರಗಿ: ಜು.02: ದರ್ಗಾದಲ್ಲಿ ಇಟ್ಟಿದ್ದ 14 ತೊಲ (140 ಗ್ರಾಂ) ಬಂಗಾರದ ಆಭರಣ ಕಳುವಾದ ಘಟನೆ ಅಫಜಲಪುರ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿರುವ ಹಜರತ್ ಲಾಲಸಾಹೆಬ್ ಮೌಲಾಲಿ ದರ್ಗಾದಲ್ಲಿ ನಡೆದಿದೆ.
ಮೊಹರಂ ಹಬ್ಬದ ಸಂಭ್ರಮ ಇರುವುದರಿಂದ ದೇವರಿಗಾಗಿ ಮೀಸಲಿಟಿದ್ದ ಆಭರಣವನ್ನು ಕಳ್ಳತನ ಮಾಡಲಾಗಿದ್ದು, ಆಭರಣ ಇಟ್ಟಿದ್ದ ಲಾಕರ್ ಮುರಿದು ಕಳ್ಳರು ಬಂಗಾರ ಕಳ್ಳತನ ಮಾಡಿದ್ದಾರೆ.
ದೇವಲ ಗಾಣಗಾಪೂರ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೆÇೀಲಿಸ್, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.