ಮೂಲ ವಿಗ್ರಹಕ್ಕೆ ದಕ್ಕೆ ಇಒ ಸೆಲ್ವಮಣಿ ಮೌನ-ಆರೋಪ

ಕೆಜಿಎಫ್:ಜೂ:೧೫: ಇತಿಹಾಸ ಪ್ರಸಿದ್ದ ಶ್ರೀ ಪ್ರಸನ್ನಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಗರ್ಭ ಗುಡಿಯಲ್ಲಿರುವ ಸ್ವಾಮಿಗಳ ಹಾಗೂ ಅಮ್ಮನವರ ಮೂಲ ವಿಗ್ರಹಗಳ ಕೆಳಭಾಗದಲ್ಲಿನ ಅಷ್ಟಬಂದನದಲ್ಲಿ ಬಿರುಕು ಬಿಟ್ಟಿದ್ದರು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ರವರು ಮಾತ್ರ ದುರಸ್ಥಿಪಡಿಸುವ ಗೋಜಿಗೆ ಹೋಗುತ್ತಿಲ್ಲ ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ಕಾರ್ಯದರ್ಶಿ ಬಾಬು ಕೋಲಾರ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ .


ಪತ್ರಿಕಾಪ್ರಕಟಣೆಯನ್ನು ಬಿಡುಗಡೆಗೊಳಿಸಿರುವ ಬಾಬು ಇತಿಹಾಸ ಪ್ರಸಿದ್ದವಾಗಿರುವ ಶ್ರೀ ಪ್ರಸನ್ನ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಗರ್ಭ ಗುಡಿಯಲ್ಲಿರುವ ಸ್ವಾಮಿಗಳ ಹಾಗೂ ಅಮ್ಮನವರ ತಳಭಾಗದಲ್ಲಿ ಹಾಕಲಾಗಿರುವ ಅಷ್ಟಬಂದನದಲ್ಲಿ ಬಿರುಕು ಬಿಟ್ಟು ಹಲವು ತಿಂಗಳು ಕಳೆದಿದ್ದರು ಇದುವರೆಗೂ ಸರಿಪಡಿಸುವ ಕೆಲಸಕ್ಕೆ ಮುಂದಾಗಿಲ್ಲ ದುರಸ್ಥಿಪಡಿಸದಿರುವುದರಿಂದ ಸ್ವಾಮಿಗಳಿಗೆ ಮಾಡುವ ಅಭಿಷೇಕವು ಬಿರುಕು ಬಿಟ್ಟಿರುವ ಸ್ಥಳದಲ್ಲಿ ಸೇರಿ ದುರ್ವಸನೆ ಬೀರುವಂತೆ ಆಗಿದೆ ಮತ್ತು ಮೂಲ ವಿಗ್ರಹವೇ ಅಲುಗಾಡುವ ಪರಿಸ್ಥಿತಿ ಬಂದು ತಲುಪಿದೆ ಎಂದು ಹೇಳಿದ್ದಾರೆ .


ಹಿಂದುಳಿದ ವರ್ಗಗಳ ಒಕ್ಕೂಟದ ಕಾರ್ಯದರ್ಶಿ ಬಾಬು ಶೇಷಯ್ಯ ಮುಜುರಾಯಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನಲೆಯಲ್ಲಿ ಅಗಮ ಪಂಡಿತರು ದೇವಾಲಯಕ್ಕೆ ಆಗಮಿಸಿ ಪರಿಶೀಪನೆ ನಡೆಸಿ ಅಷ್ಟಬಂದನ ಜೀಣೋದ್ಧಾರ ಮಹಾಸಂಪ್ರೋಕ್ಷಣೆ ಮಾಡುವಂತೆ ಸುಚಿಸಿದ ಹಿನ್ನಲೆಯಲ್ಲಿ ದೇವಾಲಯದ ಮುಖ್ಯ ಅರ್ಚಕರಾದ ರಂಜೀತ್ ರವರು ಅಷ್ಟಬಂದನ ಮಹಾ ಸಂಪೋಕ್ಷಣೆ ಜೀಣೋದ್ದಾರ ನೆರೆವೆರಿಸಲು ಅರ್ಜಿ ಸಲ್ಲಿಸಿದ್ದರು ಇಒ ಯಾವುದೆ ಕ್ರಮವಹಿಸಿದೆ ನಿರ್ಲಕ್ಷವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ ತಕ್ಷಣ ಸಂಭಂದಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ