ಕೆಜಿಎಫ್,೧೪- ತಾಲ್ಲೂಕು ಕಛೇರಿಯಲ್ಲಿ ನಮೂನೆ-೫೩ ಹಾಗೂ ನಮೂನೆ -೫೭ ಅರ್ಜಿಯನ್ನು ಸಲ್ಲಿಸಿಕೊಂಡಿರುವ ರೈತರಿಗೆ ಕೂಡಲೇ ಸಾಗುವಳಿ ಚೀಟಿಗಳನ್ನು ವಿತರಿಸಬೇಕು. ಈ ಹಿಂದೆ ಭೂ ಕಬಳಿಕೆ ಹಾಗೂ ಕೆರೆ ಕುಂಟೆ, ಹುಲ್ಲುಗಾವಲು, ರಾಜಕಾಲುವೆಗಳನ್ನು ಹಾಗೂ ನಗರ ಪ್ರದೇಶದಲ್ಲಿ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿರುವ ರಿಯಲ್ ಎಸ್ಟೇಟ್ ಮಾಫಿಯಾಗಳು ಹಾಗೂ ದೊಡ್ಡ ಪ್ರಭಾವಿಗಳಿಂದ ಕಬಳಿಕೆ ಆಗಿರುವ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಬೇಕು. ಇಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೈತಸಂಘ ಜಿಲ್ಲಾಧ್ಯಕ್ಷ ಟಿ.ಎನ್.ರಾಮೇಗೌಡ ತಹಸೀಲ್ದಾರ್ಗೆ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡು ಮಾತನಾಡಿದ ಅವರು, ರೈತರ ಪಹಣಿಗಳಲ್ಲಿರುವ ’ಪಿ’ ನಂಬರ್ಗಳನ್ನು ದುರಸ್ತಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ತಾಲ್ಲೂಕಿನಲ್ಲಿ ಟಮೊಟೊ, ಮಾವು ಬೆಳೆಗಾರರಿಗೆ ಬೆಂಬಲ ಬೆಲೆಯನ್ನು ಸರ್ಕಾರ ನಿಗಧಿಪಡಿಸಬೇಕು. ಬೆಳೆಯಿಂದಾದ ನಷ್ಟವನ್ನು ರೈತರಿಗೆ ಹಣ ಪಾವತಿಸಬೇಕು. ಕೆಜಿಎಫ್ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ೫-೧೦ ಸಾವಿರ ಪಡೆದು ಇ-ಖಾತೆಗಳನ್ನು ಮಾಡುತ್ತಿರುವುದು ಸಮಂಜಸವಲ್ಲ, ಇವರ ಮೇಲೆ ತೀವ್ರಮಟ್ಟದ ಕ್ರಮ ಕೈಗೊಳ್ಳಬೇಕು. ಹಾಗೂ ಗ್ರಾಮಗಳಲ್ಲಿ ಸಮರ್ಪಕವಾದ ಕುಡಿಯುವ ನೀರು .ನೀಡತ್ತಿಲ್ಲ
ಭೂ ಮಾಪನ ಶಾಖೆಯಲ್ಲಿ ಭೂ ಮಾಪಕರಿಗೆ ಹಣ ನೀಡದಿದ್ದರೆ ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ. ತಾಲ್ಲೂಕು ಕಛೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಚಾರವನ್ನು ತಡೆಗಟ್ಟಬೇಕು, ಹಾಗೂ ಸರ್ಕಾರಿ ಆಸ್ಪತ್ರೆ ಮತ್ತು ನಗರಸಭೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಲಂಚ ನೀಡದಿದ್ದರೆ ಸರಿಯಾದ ವೈದ್ಯ ಸಿಗುತ್ತಿಲ್ಲ. ಚೆನೈ-ಕಾರಿಡಾರ್ ರಸ್ತೆಯಲ್ಲಿ ಹಲವು ಅಪಘಾತಗಳು ನಡೆಯುತ್ತಿದ್ದು, ಸಂಬ೦ಧಪಟ್ಟ ಅಧಿಕಾರಿಗಳಿಂದ ಸಭೆ ನಡೆಸಿ ಸೂಕ್ತ ಭದ್ರತೆಯೊಂದಿಗೆ ಅಪಘಾತಗಳನ್ನು ತಡೆಯಬೇಕು.
ಈಗಾಗಲೇ ಮುಂಗಾರು ಪ್ರಾರಂಭವಾಗಿದ್ದು, ರೈತರಿಗೆ ಸಮರ್ಪಕ ರಸಗೊಬ್ಬರ, ಬಿತ್ತನೆ ಬೀಜ ಬಡ ರೈತರಿಗೆ ಕೈಗಟುಕದಂತಾಗಿದೆ. ತೋಟಗಾರಿಕೆ ಇಲಾಖೆಯಿಂದ ಬರುವ ಸೌಲಭ್ಯಗಳನ್ನು ರೈತರಿಗೆ ತಲುಪಿಸುವಂತಾಗಬೇಕು. ಈ ಮೇಲ್ಕಂಡ ಎಲ್ಲಾ ಬೇಡಿಕೆಗಳನ್ನು ಒಂದು ವಾರದೊಳಗೆ ಈಡೇರಿಸಬೇಕು. ಇಲ್ಲದಿದ್ದಲ್ಲಿ ಕಛೇರಿ ಮುಂಭಾಗ ಉಗ್ರ ಹೋರಾಟವನ್ನು ಹಮ್ಮಿಕೊಂಡು ಸರ್ಕಾರದ ಗಮನಕ್ಕೆ ತರಬಯಸುವುದಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ವೀರಭದ್ರಸ್ವಾಮಿ, ಜಿಲ್ಲಾ ಕಾರ್ಯದರ್ಶಿ ರವಿ, ಜಿಲ್ಲಾ ಉಪಾಧ್ಯಕ್ಷ ಜಯರಾಮರೆಡ್ಡಿ, ಜೆಸಿಬಿ ರಮೇಶ್, ಮುರಳಿ, ವಿನೋದ್, ಗಂಗಾಧರ್, ವಿಶ್ವನಾಥ್, ಮಂಜುನಾಥ್, ಮುನಿಯಪ್ಪ, ಕೃಷ್ಣಪ್ಪ, ದೇವರಾಜು, ಶ್ರೀನಿವಾಸ್, ರಮೇಶ್, ನಾರಾಯಣಸ್ವಾಮಿ, ವಿಶ್ವಪ್ಪ, ಮುನಿರಾಜು, ಯರಪ್ಪ, ಮುನಿವೆಂಕಟಪ್ಪ, ಸೀನಪ್ಪ, ಗೋವಿಂದಪ್ಪ, ಪಳನಿ, ಶ್ಯಾಮಸುಂದರ್, ಆಂಜಿನಪ್ಪ, ನರಸಿಂಹಯ್ಯ, ಬಸಪ್ಪ, ಚಂದ್ರಪ್ಪ, ಅರುಣ್, ವೆಂಕಟೇಶ್, ಸಂಪ೦ಗಿರಾಮೇಗೌಡ, ಮುನಿರಾಜು, ಮಂಜು, ಸಂತೋಷ್ ಸೇರಿದಂತೆ ಇನ್ನಿತರರು ಇದ್ದರು.