ನವಲಗುಂದ,ಜೂ15: ಪಟ್ಟಣದ ಹೊರವಲಯದ ಇಬ್ರಾಹಿಂಪೂರ ರಸ್ತೆಯಲ್ಲಿರುವ ಅಂಬಲಿ ಹಳ್ಳವು ಮಳೆಗಾಲದ ಸಂರ್ಭದಲ್ಲಿ ತುಂಬಿ ಹರಿದು ರೈತರ ಬೆಳೆಗಳನ್ನು ನಾಶ ಮಾಡುತ್ತಿದೆ ಹಾಗೂ ಸೇತುವೆ ಚಿಕ್ಕದಾಗಿರುವುದರಿಂದ ರಸ್ತೆ ಸಂಪರ್ಕವೂ ಸ್ಥಗಿತಗೊಂಡು ತೊದರೆಯಾಗುತ್ತಿದ್ದು ಸರಕಾರ ಅಂಬಲಿ ಹಳ್ಳವನ್ನು ಅಗಲೀಕರಿಸಿ ಸೇತುವೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮುಖಂಡ ಈರಣ್ಣ ಸಿಡಗಂಟಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಶಾಸಕ ಎನ್ ಎಚ್ ಕೋನರಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಹ ಪೀಡಿದ ಪ್ರದೇಶವನ್ನು ವಿಕ್ಷಣೆ ಮಾಡುವ ಸಂದರ್ಭದಲ್ಲಿ ಮನವಿ ನೀಡಿದ ಸಿಡಗಂಟಿ ಅಂಬಲಿ ಹಳ್ಳದ ಪ್ರವಾಹದಿಂದ ಹಳ್ಳದ ಸಮೀಪವಿರುವ ಶಾಲಾ ಮಕ್ಕಳಿಗೆ ಹಳ್ಳ ದಾಟಲು ಸಮಸ್ಯೆಯಾಗುತ್ತಿದೆ.
ನೆರೆಯಿಂದಾಗಿ ಸಾವಿರಾರು ರೈತರು ಬೆಳೆದ ಬೆಳೆಯು ಹಾನಿಯಾಗುತ್ತಿದೆ. ಜತೆಗೆ ಈ ಮಾರ್ಗವಾಗಿ ರಸ್ತೆ ಸಂಪರ್ಕಹೊಂದಿರುವ ಇಬ್ರಾಹಿಂಪೂರ.ನಾವಳ್ಳಿ.ಕಿತ್ತೂರು ಹಾಗೂ ಅಡ್ನೂರು ಗ್ರಾಮದ ಜನರು ಸಂಚಾರ ಇಲ್ಲದೇ ತೊಂದರೆ ಅನುಭವಿಸಬೇಕಾಗಿದ್ದು ಸರಕಾರ ಕೂಡಲೆ ಹಳ್ಳದ ಅಗಲಿಕರಣದ ಜತೆಗೆ ಸೇತುವೆ ನಿರ್ಮಿಸಬೇಕು ಹಾಗೂ ಹಳ್ಳದ ಪ್ರವಾಹಕ್ಕೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸಚಿವರಿಗೆ ನೀಡಿದ ಮನವಿಯಲ್ಲಿ ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ಜೀವನ ಪವಾರ,ಬಸವರಾಜ ಅಕ್ಕಿ, ಹನುಮಂತ ವಾಲಿಕಾರ, ಮೋದಿನ ಶಿರೂರು, ಮಂಜುನಾಥ್ ಜಾಧವ, ಶಿವಾನಂದ ತಡಸಿ, ಬಾಬಾಜಾನ್ ಮಕಾಂದಾರ ಇತರರು ಇದ್ದರು.