ಭಾರತೀಯ ಚಾರ್ಟರ್ಡ್ ಅಕೌಂಟೆಂಟ್  ದಿನಾಚರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.2:
ಭಾರತೀಯ ಚಾರ್ಟರ್ಡ್ ಅಕೌಂಟೆಂಟ್  ಸಂಸ್ಥೆಯ 77ನೇ ಸಂಸ್ಥಾಪನ ದಿನದ ಅಂಗವಾಗಿ ನಿನ್ನೆ ಬಳ್ಳಾರಿ ಶಾಖೆಯು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
ಸಿಎ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸಂಸ್ಥೆಯ ಸದಸ್ಯರು ವಿತರಿಸಿದರು. ನರಶಸ್ತ್ರ ಚಿಕಿತ್ಸೆಕ ಡಾಕ್ಟರ್ ಕಮಲ್ ಕುಮಾರ್ ಜೈನ್  ವೈಯಕ್ತಿಕ ಜೀವನ ಮತ್ತು ವೃತ್ತಿಯನ್ನು ಹೇಗೆ ನಿಭಾಯಿಸಬೇಕು ಎಂದು ಸಂಸ್ಥೆಯ ಸದಸ್ಯರಿಗೆ ಮಾರ್ಗದರ್ಶನ ಮಾಡಿದರು.
ಬೇವಿನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಸಂಸ್ಥೆಯ ಸದಸ್ಯರು ವಿತರಿಸಿದರು.
ಸಂಸ್ಥೆಯ ಹಿರಿಯ ಸದಸ್ಯ ಸಿರುಗುಪ್ಪದ  ನಾಗನಗೌಡ ಕೆ ಅವರಿಗೆ ಸನ್ಮಾನಿಸಲಾಯಿತು.  ಸಂಸ್ಥೆಯ ಸದಸ್ಯರು ರಕ್ತದಾನ ಮಾಡಿದರು.  ಗಿಡ ನೆಡುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಂಡಿದ್ದರು.
 ಶಾಖೆಯ ಎದುರುಗಡೆ ಇರುವ ಉದ್ಯಾನವನವನ್ನು ಸ್ವಚ್ಛಗೊಳಿಸಲಾಯ್ತು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಂಸ್ಥೆಯ ಅಧ್ಯಕ್ಷ ಗಜರಾಜ್.ಡಿ , ಉಪಾಧ್ಯಕ್ಷ  ಪುರುಷೋತ್ತಮರೆಡ್ಡಿ,  ಕಾರ್ಯದರ್ಶಿಗ ವಿಶ್ವನಾಥ್ ಆಚಾರಿ ಖಜಂಚಿ  ಸ್ವಪ್ನ ಪ್ರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ  ಶರಣ್ ಪಾಟೀಲ್ ಸದಸ್ಯರಾದ  ಹನುಮಂತರೆಡ್ಡಿ  ವೆಂಕಟೇಶ್ ಗುಂಡ ಮತ್ತು ಜಿತೇಂದ್ರ ಭಾಗವಹಿಸಿದ್ದರು