ಗದಗ:ಜೂ.24: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಗದಗ ನಗರದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ತೋಂಟದ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ವಿಶೇಷ ಯೋಗ ಶಿಬಿರ ಹಮ್ಮಿಕೊಳ್ಳಲಾಯಿತು.
ಬಸವ ಯೋಗ ಮಹಾವಿದ್ಯಾಲದ ಪ್ರಾಚಾರ್ಯ ಕೆ ಎಸ್ ಪಲ್ಯದ, ಮತ್ತು ಜಯಶ್ರೀ ದಾವಣಗೆರೆ ಹಾಗೂ ಎಪ್. ಆರ್. ದೊಡ್ಡಣ್ಣನವರ್ ಯೋಗ ತರಬೇತಿ ನೀಡಿ ಮಾತನಾಡಿದ ಅವರು ಭಾರತದ ಯೋಗ ಪದ್ಧತಿಯನ್ನು ಹಲವು ದೇಶಗಳು ಅನುಕರಿಸುತ್ತಿವೆ. ಯೋಗ ಮಾಡುವುದು ಒಂದು ದಿನಕ್ಕೆ ಸೀಮಿತವಾಗದೆ, ಪ್ರತಿದಿನ ಆಚರಣೆಯಲ್ಲಿರಬೇಕು. ದೈಹಿಕ, ಮಾನಸಿಕ ಸಮತೋಲನಕ್ಕೆ ಯೋಗ ಸಹಕಾರಿ. ಯೋಗವು ಜೀವನ ಶೈಲಿಯ ಭಾಗವಾಗಲಿ ಎಂದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ವಾಯ್. ಎಸ್. ಮತ್ತೂರ, ಕೆ.ಡಿ. ಮೆಣಸಿನಕಾಯಿ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ ಸಮೂಹ ಹಾಜರಿದ್ದರು.