
(ಸುಪ್ರಿಂ ಅಭಿಪ್ರಾಯ)
ನವದೆಹಲಿ, ಮಾರ್ಚ್ ೨೪: ನಾಗರಿಕತೆ ತಿದ್ದುಪಡಿ ಕಾಯ್ದೆ ೨೦೧೯ ಅಡಿಯಲ್ಲಿ ಸಲ್ಲಿಸಲಾದ ಪೌರತ್ವ ಅರ್ಜಿಗಳ ನಿರ್ಧಾರಕ್ಕೆ ಸಮಯಮಿತಿ ನಿಗದಿ ಮಾಡುವಲ್ಲಿ ಹಿಂಜರಿಕೆ ವ್ಯಕ್ತಪಡಿಸಿದೆ. ಈ ವಿಚಾರವು ಕಾರ್ಯನಿರ್ವಹಣಾ ವಿಭಾಗದ ಅಧೀನದಲ್ಲಿರುವುದರಿಂದ ನ್ಯಾಯಾಂಗದ “ಕನಿಷ್ಠ ಹಸ್ತಕ್ಷೇಪ” ಅಗತ್ಯವೆಂದು ಕೋರ್ಟ್ ತಿಳಿಸಿದೆ.
ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳಕ್ಕೆ ಬಂದ ಶರಣಾರ್ಥಿಗಳಿಗೆ ಪೌರತ್ವ ನೀಡುವಂತೆ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ವೇಳೆ ಈ ಅಭಿಪ್ರಾಯ ವ್ಯಕ್ತವಾಯಿತು. ಸಿಎಎ ಅಡಿಯಲ್ಲಿ ಅರ್ಜಿ ಸಲ್ಲಿಸಿದವರ ಅರ್ಜಿಗಳು ಇನ್ನೂ ಬಾಕಿ ಇರುವುದರಿಂದ, ಅವರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂಬ ಆತಂಕವನ್ನು ಅರ್ಜಿದಾರರು ವ್ಯಕ್ತಪಡಿಸಿದರು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜಯಮಾಲ್ಯ ಭಗೀಚಿ ಅವರಿದ್ದ ಪೀಠವು, ಈಗಾಗಲೇ ಕಾನೂನು ಪ್ರಕ್ರಿಯೆ ಜಾರಿಯಲ್ಲಿರುವುದರಿಂದ ಅದನ್ನು ಹೇಗೆ ಅನುಷ್ಠಾನಗೊಳಿಸಬೇಕು ಎಂಬುದು ಕೇಂದ್ರ ಸರ್ಕಾರದ ಹೊಣೆ ಎಂದು ತಿಳಿಸಿತು. ಅರ್ಜಿದಾರರ ಪರ ಹಿರಿಯ ವಕೀಲ ಕರುಣಾ ನಾಂಡೆ ವಾದಿಸಿದಂತೆ, ಅಂಂ ಮೂಲಕ ಕೆಲವು ಅಲ್ಪಸಂಖ್ಯಾತ ಸಮುದಾಯಗಳಿಗೆ ನಾಗರಿಕತೆ ಪಡೆಯುವ ಅವಧಿಯನ್ನು ೧೧ ವರ್ಷಗಳಿಂದ ೫ ವರ್ಷಗಳಿಗೆ ಕಡಿತಗೊಳಿಸಲಾಗಿದೆ.
ಆದರೆ ನಿಯಮಗಳು ಜಾರಿಯಾದ ನಂತರವೂ ಎರಡು ವರ್ಷ ಕಳೆದರೂ ಅರ್ಜಿಗಳು ಇನ್ನೂ ಬಾಕಿಯೇ ಇರುವುದರಿಂದ ನ್ಯಾಯಾಲಯ ಸಮಯಮಿತಿ ನಿಗದಿ ಮಾಡಬೇಕೆಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಅರ್ಜಿಗಳ ಪರಿಶೀಲನೆ, ದಾಖಲೆಗಳ ದೃಢೀಕರಣ ಮುಂತಾದವುಗಳನ್ನು ಕಾರ್ಯನಿರ್ವಹಣಾ ಯಂತ್ರಾಂಗವೇ ನಿರ್ವಹಿಸಬೇಕಾಗಿದೆ ಎಂದು ಹೇಳಿ, ಈ ಹಂತದಲ್ಲಿ ನ್ಯಾಯಾಲಯದ ಹೆಚ್ಚು ಹಸ್ತಕ್ಷೇಪ ಬೇಡವೆಂದು ಸ್ಪಷ್ಟಪಡಿಸಿದರು.ಈ ಪ್ರಕರಣದಲ್ಲಿ ಕೇಂದ್ರದ ಪರವಾಗಿ ಹಾಜರಾದ ಸೊಲಿಸಿಟರ್ ಜನರಲ್ ಖಿushಚಿಡಿ ಒehಣಚಿ, ಸರ್ಕಾರದ ಪ್ರತಿಕ್ರಿಯೆ ಪ್ರಕ್ರಿಯೆಯಲ್ಲಿದೆ ಎಂದು ಕೋರ್ಟ್ಗೆ ತಿಳಿಸಿದರು.
ಇದಕ್ಕೂ ಮೊದಲು ಕೂಡ, ಸಿಎಎ ಅಡಿಯಲ್ಲಿ ಅರ್ಜಿ ಸಲ್ಲಿಸಿದವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಬೇಡಿಕೆಯನ್ನು ಕೋರ್ಟ್ ತಳ್ಳಿಹಾಕಿದ್ದು, ಮೊದಲು ಪೌರತ್ವ ಪಡೆಯಬೇಕು ಎಂದು ಹೇಳಿತ್ತು. ಕೇಂದ್ರ ಸರ್ಕಾರದಿಂದ ಸ್ಪಷ್ಟ ಉತ್ತರ ಪಡೆಯಲು ಪ್ರಕರಣವನ್ನು ಕೋರ್ಟ್ ಮುಂದೂಡಿದೆ.





























