
ಕಲಬುರಗಿ,ಜ.9-ಇಲ್ಲಿನ ಗೋದುತಾಯಿ ನಗರದ ಶಿವಮಂದಿರ ಆವರಣದಲ್ಲಿ ಗುರುವಾರ ಸಂಜೆ ಶರಣಬಸವೇಶ್ವರರ ಮಹಾ ತೊಟ್ಟಿಲೋತ್ಸವ ಹಾಗೂ ಸಹಸ್ರ ದೀಪೆÇೀತ್ಸವದ ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮವನ್ನು ಗಣ್ಯರಿಂದ ಜ್ಯೋತಿ ಬೆಳಸುವ ಮೂಲಕ ಶರಣಬಸವೇಶ್ವರರ ಮಹಾತೊಟ್ಟಿಲೋತ್ಸವಕ್ಕೆ ಚಾಲನೆ ನೀಡಲಾಯಿತು. ನೂರಾರು ಮಹಿಳೆಯರ ಸಮ್ಮುಖದಲ್ಲಿ ಹಲವರು ಪುಷ್ಪಾಲಂಕೃತ ತೊಟ್ಟಿಲು ತೂಗಿದರು.
ಈ ಸಂದರ್ಭದಲ್ಲಿ ಡಾ.ಪೂಜ್ಯ ಲಿಂಗರಾಜಪ್ಪ ಅಪ್ಪ, ಗೋದುತಾಯಿ ನಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ಮಹಾನಗರ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಉದನೂರ, ಕಾಂಗ್ರೆಸ್ ಮುಖಂಡ ಶರಣಗೌಡ ಅಲ್ಲಮಪ್ರಭು ಪಾಟೀಲ, ಚಂದ್ರಶೇಖರ್ ಸಿಲವಂತ, ಬಸವರಾಜ್, ಲಿಂಗರಾಜಪ್ಪ ಅಪ್ಪ ಅವರ ಮಗಳು ಶ್ರವಣಾ, ಅಳಿಯ ಸುಭಾಷ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. ಶರಣ ಬಸವೇಶ್ವರರ ಮಹಾತೊಟ್ಟಿಲೋತ್ಸವದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. ಸಮಾರಂಭದ ಬಳಿಕ ಭಕ್ತರಿಗೆ ಅನ್ನಪ್ರಸಾದ ಉಣಬಡಿಸಲಾಯಿತು.

























