ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆ ಇಲ್ಲ

ಯಾದಗಿರಿ:ಜೂ.೨೪:ಗುರುಮಠಕಲ್ ತಾಲೂಕ ಪ್ರಾಥಮಿಕ ಆರೋಗ್ಯ ಕೇಂದ್ರ ಗಾಜರಕೋಟ ವ್ಯಾಪ್ತಿಯಲ್ಲಿ ಬರುವ. ಆಯುಷ್ಮಾನ್ ಆರೋಗ್ಯ ಮಂದಿರ ಚಂಡರಕಿಯಲ್ಲಿ ಸೆಪ್ಟಿಕ್ ಟ್ಯಾಂಕ್ ತುಂಬಿದ್ದು ಇದನ್ನು ಸ್ವಚ್ಛ ಗೊಳಿಸಬೇಕೆಂದು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ದಿನಾಂಕ ೦೩-೦೨-೨೫ ರಂದು ಆಯುಷ್ಮಾನ್ ಆರೋಗ್ಯ ಅಧಿಕಾರಿಗಳು ಮನವಿ ಪತ್ರ ಕೊಟ್ಟು ಸ್ವಿಕೃತಿಯನ್ನು ತೆಗೆದುಕೊಂಡರು ಇದುವರೆಗು ಆರೋಗ್ಯ ಮಂದಿರಕ್ಕೆ ಬಂದು ಯಾವುದೇ ಸ್ವಚ್ಛತೆ ಮಾಡಿರುವುದಿಲ್ಲ ಆಯುಷ್ಮಾನ್ ಆರೋಗ್ಯ ಮಂದಿರ ಚಂಡರಿಕಿಯ ಸೆಪ್ಟಿಂಕ್ ಟ್ಯಾಂಕ್ ತುಂಬಿದ್ದು, ಇದರಿಂದ ಆರೋಗ್ಯ ಕೇಂದ್ರಕ್ಕೆ ಬರುವ ಸಾರ್ವಜನಿಕರಿಗೆ ಹಾಗು ಮಹಿಳಾ ಸಿಬ್ಬಂದಿಗಳಿಗೆ ಶೌಚಲಕ್ಕೆ ಹೋಗಲು ತೊಂದರೆಯಾಗುತ್ತಿದ್ದು, ಆದ್ದರಿಂದಕೂಡಲೆ ತುಂಬಿರುವ ಸೆಪ್ಟಿಕ್ ಟ್ಯಾಂಕನ್ನು ಖಾಲಿ ಮಾಡಿಸಿ ಆರೋಗ್ಯ ಕೇಂದ್ರಕ್ಕೆ ಬರುವ ಸಾರ್ವಜನಿಕರಿಗೆ ಹಾಗೂ ಮಹಿಳಾ ಸಿಬ್ಬಂದಿಗಳಿಗೆ ಶೌಚಲಯಕ್ಕೆ ಹೋಗಲು ಅನುಕೂಲ ಮಾಡಿಕೂಡಬೇಕಾಗಿ ಆಡಳಿತ ವ?ದ್ಯಾಧಿಕಾರಿಗಳು . ದಿನಾಂಕ -೦೩-೦೨-೨೦೨೫ ದಿನಾಂಕ ದಂದು ಅರ್ಜಿಯನ್ನು ಕೊಟ್ಟು ಅರ್ಜಿಯ ಪ್ರತಿಯನ್ನು ತೆಗೆದುಕೊಂಡರು ಇದುವರೆಗು ಯಾವುದೇ ಸ್ಚಚ್ಛತೆಯ ಕಾರ್ಯಮಾಡಿರುವುದಿಲ್ಲ ಕಾರಣ ಸಂಭAದ ಪಟ್ಟ ಆರೋಗ್ಯ ಅಧಿಕಾರಿಗಳು ಚಂಡರಕಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಹೇಳಿ ಸ್ವಚ್ಛತೆ ಕಾರ್ಯವನ್ನು ಮಾಡಿಸಿ ಕೊಡಲು ಆಡಳಿತ ವೈದ್ಯಾಧಿಕಾರಿಗಳು ತಿಳಿಸಿದರು.