ಜೀವನ ಕೌಶಲ್ಯ ಕಾರ್ಯಾಗಾರ

ಧಾರವಾಡ,ಜೂ27: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಯುವ ಸ್ಪಂದನ ಕೇಂದ್ರ ಧಾರವಾಡ ಹಾಗೂ ಎನ್.ಎಸ್.ಎಸ್ ಸಹಯೋಗದಲ್ಲಿ ಜೀವನ ಕೌಶಲ್ಯ ಎಂಬ ವಿಷಯದ ಮೇಲೆ ಒಂದು ದಿನದ ಕಾರ್ಯಗಾರವನ್ನು ಶ್ರೀ ಅಮೃತೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಅಣ್ಣಿಗೇರಿಯಲ್ಲಿ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಎಂ.ಟಿ.ಮಂಜುನಾಥಸ್ವಾಮಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಯ ಯುವ ಸ್ಫಂದನ ಯೋಜನೆಯ ನೋಡಲ್ ಅಧಿಕಾರಿಯಾದ ವರುಣಕುಮಾರ ಡಿ. ಅವರು ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯಗಳನ್ನು ಚಟುವಟಿಕೆಗಳ ಮೂಲಕ ವಿವರಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎಮ್.ಆರ್.ಮುಂಡರಗಿ, ಎನ್.ಎಸ್.ಎಸ್ ಅಧಿಕಾರಿಯಾದ ಅಶೋಕ ಬಿ.ಬಿ., ಧಾರವಾಡ ಜಿಲ್ಲಾ ಯುವ ಸಮಲೋಚಕರಾದ ಸುರೇಖಾ ನಾವಲಗಿ ಮತ್ತು ನವಲಗುಂದ ಯುವ ಪರಿವರ್ತಕರಾದ ಕು.ಗಂಗಾಧರ ರೋಣದ ಉಪಸ್ಥಿತರಿದ್ದರು.