ಜೇವರ್ಗಿ: ಜೂ.16:ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ಜೂನ್ 18ರಂದು ಮಧ್ಯಾಹ್ನ 3 ಗಂಟೆಗೆ ಅಂತರರಾ–ಷ್ಟ್ರೀಯ ಹಿಂದೂ ಪರಿಷದ್ ಹಾಗೂ ರಾಷ್ಟ್ರೀಯ ಬಜರಂಗದಳ ತಾಲ್ಲೂಕು ಘಟಕದ ವತಿಯಿಂದ ಹಿಂದೂ ಧರ್ಮ ಸಭೆ ಆಯೋಜಿಸಲಾಗಿದೆ ಎಂದು ಸಂಘಟನೆಯ ಉತ್ತರ ಕರ್ನಾಟಕ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಆದ್ವಾನಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಇಡೀ ವಿಶ್ವದಲ್ಲಿ -ಹಿಂದೂಗಳ ಮೇಲೆ ಆಗುತ್ತಿರುವ ದರ್ಪ, ದೌರ್ಜನ್ಯಗಳನ್ನು ವಿರೋಧಿಸುವತ್ತನಾವು ಒಂದಾಗಬೇಕಿದೆ. ಮಾನವೀಯ ಹಾಗೂ ನೈತಿಕ ಮೌಲ್ಯಗಳಿಗೆ ಧಕ್ಕೆಯಂಟಾದಾಗ -ಎಲ್ಲ ಹಿಂದೂಗಳು ಒಂದಾಗಬೇಕು. ಹಿಂದೂ ಸಮಾಜ ಸಂಘಟಿತರಾಗಬೇಕು. ಜಾಗೃತರಾಗಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮಗೆಲ್ಲ ಬಹಳ ಕಷ್ಟದ ದಿನಗಳು ಎದುರಾಗಲಿವೆ’ ಎಂದು ಹೇಳಿದರು.
‘ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆ. ಅವರನ್ನು ಪತ್ತೆ ಹಚ್ಚಿ,
ಹೊರಗಟ್ಟುವ ಕೆಲಸವಾಗಬೇಕು. ಇಲ್ಲವಾದಲ್ಲಿ ಬಾಂಗ್ಲಾದ ಪರಿಸ್ಥಿತಿ ಜ್ಯ ದಲ್ಲಿ ನಿರ್ಮಾಣವಾಗಲಿದೆ. ಬಾಂಗ್ಲಾದಲ್ಲಿ 1,400 ಹಿಂದೂ ಶಿಲ್ಪಗಳು, ದೇವಾಲಯಗಳನ್ನು ನಾಶಪಡಿಸಲಾಗಿದ್ದು, ಸಾವಿರಕ್ಕೂ ಹೆಚ್ಚು ಪ್ರವೀಣ್ ತೊಗಾಡಿಯಾ ಹಿ0 ದೂ ಗ ಳ ಮೇಲೆ ಹಲ್ಲೆ, ದೌರ್ಜನ್ಯ ಎಸಗಲಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ತಡೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಹಿಂದೂ ಸಮಾಜದ ಜಾಗೃತಿ ಹಾಗೂ ಒಗ್ಗಟ್ಟಿಗಾಗಿ ಹಿಂದೂ ಧರ್ಮ ಸಭೆ ಮಾಡಲಾಗಿದೆ. ಪಟ್ಟಣದಲ್ಲಿ ಆಯೋಜನೆ ರಾಷ್ಟ್ರೀಯ ಬಜರಂಗದಳ ಸಂಸ್ಥಾಪಕ ಪ್ರವೀಣ ತೊಗಾಡಿಯಾ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದಾರೆ.
ನಾಲವಾರ ಮಠದ ಶಿವಾಚಾರ್ಯರು, ಸೋಪಾನನಾಥ ಮಾಗಣಗೇರಾದ ಕೋರಿಸಿದ್ದೇಶ್ವರ ಸಿದ್ಧತೋಟೇಂದ್ರ ಗಂವ್ಹಾರದ ಶಿವಾಚಾರ್ಯರು, ವಿಶ್ವರಾದ್ಯ
ಶಿವಾಚಾರ್ಯರು, ಆಂದೋಲಾದ ಸಿದ್ದಲಿಂಗ ಸ್ವಾಮೀಜಿ, ಕಡಕೋಳದ ರುದ್ರಮುನಿ ಶಿವಾಚಾರ್ಯರು, ಯಲಗೋಡದ ಸ್ವಾಮೀಜಿ, ಪರಮಾನಂದ ತೊನಸನಹಳ್ಳಿಯ ಮಲ್ಲಣಪ್ಪ ಸ್ವಾಮೀಜಿ, ಹೊನ್ನಾಳದ ವಾಸುದೇವ ಶಿವಯೋಗಿಗಳು, ಮಾವನೂರಿನ ಧರ್ಮರಾಯ ಮುತ್ತಾ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಶ್ವಹಿಂದೂ ಪರಿಷತ್ ರಾಜ್ಯಾಧ್ಯಕ್ಷ ರಮೇಶ ಕುಲಕರ್ಣಿ, ರಾಜ್ಯ ಕಾರ್ಯದರ್ಶಿ ಶಂಭುನಾಥ ಅಲಬಾಳ, ಉತ್ತರ ಕರ್ನಾಟಕ ಭಜರಂಗದಳ ಅಧ್ಯಕ್ಷ ಗಂಗಾಧರ ವಿಶ್ವಕರ್ಮ ಪಾಲ್ಗೊಳ್ಳಲಿದ್ದಾರೆ. ತಾಲ್ಲೂಕಿನ ಸಮಸ್ತ ಹಿಂದೂ ಸಮಾಜದವರು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಧರ್ಮ ಸಭೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಅಂತರಾಷ್ಟ್ರೀಯ ಹಿಂದೂ ಪರಿಷತ್ ವಿಭಾಗೀಯ ಅಧ್ಯಕ್ಷರು ಈಶ್ವರ ಹಿಪ್ಪರಗಿ, ತಾಲ್ಲೂಕು ಅಧ್ಯಕ್ಷ ಮಾಣಿಕ್ಯ ಕೆಲ್ಲೂರ, ಅಂತರರಾಷ್ಟ್ರೀಯ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಜೈನಾಪುರ, ನಾಗರಾಜ ಓಂ, ಲಕ್ಷ್ಮೀಕಾಂತ ಕುಲಕರ್ಣಿ ಹೋತಿನಮಡು, ಹಾಜರಿದ್ದರು.