ಚನ್ನಮ್ಮನ ಕಿತ್ತೂರು,ಜೂ.೨೭: ಮನೆ ಕಳ್ಳನನ್ನು ಕಿತ್ತೂರು ಪೋಲಿಸ್ ಠಾಣೆ ಪೋಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಖಾನಾಪೂರ ತಾಲೂಕಿನ ಹಲಸಿ ಗ್ರಾಮದ ಮಹಾದೇವ ನಾರಾಯಣ ದಾಮಣೆಕರ (೨೬) ಎಂದು ಗುರುತಿಸಲಾಗಿದೆ.
ಈತನಿಂದ ೩೫ ಗ್ರಾಂ. ಬಂಗಾರದ ತಾಳಿ ಚೈನ್, (ರೂ. ೨.೨೭.೫೦೦), ೫ ಗ್ರಾಂ. ಬಂಗಾರ ಚೈನ್(ರೂ.೩೨.೫೦೦), ೧೦ ಗ್ರಾಂ. ಕಿವಿ ಓಲೆ (ರೂ.೬೫.೦೦೦), ೫ ಗ್ರಾಂ. ಎಳೆ (ರೂ.೩೨.೫೦೦), ೫ ಗ್ರಾಂ. ಸಣ್ಣ ಉಂಗುರಗಳು(ರೂ. ೩೨.೫೦೦), ಒಟ್ಟು ೨೦೦ ಗ್ರಾಂ. ಬಂಗಾರದ ಆಭರಣಗಳು ಹಾಗೂ ೧೫೦ ಗ್ರಾಂ. ಬೆಳ್ಳಿ ತೋಡೆ (ರೂ.೭.೫೦೦), ೫೦ ಗ್ರಾಂ. ಕೈಕಟ್ಟ (ರೂ.೨.೫೦೦), ೭೦ ಗ್ರಾಂ. ಬೆಳ್ಳಿಗೆಜ್ಜೆ (ರೂ.೩.೫೦೦), ಒಟ್ಟು ೨೭೦ ಗ್ರಾಂ. ಬೆಳ್ಳಿ ಆಭರಣಗಳು ಮತ್ತು ರೂ.೫.೫೦೦ ನಗದು ಸೇರಿದಂತೆ ಒಟ್ಟು ರೂ. ೨೦.೩೦.೦೦೦/- ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.