ನವಲಗುಂದ, ಜೂ.೨೭: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕದಿಂದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪಟ್ಟಣದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಜೂನ್ ೨೮ ಶನಿವಾರ ಬೆಳಿಗ್ಗೆ ೧೧ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷ ಶಂಕರಗೌಡ ಬಾಳನಗೌಡ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು ಈ ಕಾರ್ಯಕ್ರಮದ ಸಾನಿಧ್ಯವನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತುಂಜಯ ಮಹಾಸ್ವಾಮೀಜಿಗಳು ವಹಿಸಲಿದ್ದಾರೆ. ಮಾಜಿ ಶಾಸಕ ಆರ್ ಬಿ ಶಿರಿಯಣ್ಣವರ ಉದ್ಘಾಟಿಸುವರು. ತಾಲ್ಲೂಕು ಅಧ್ಯಕ್ಷ ಶಂಕರಗೌಡ ಬಾಳನಗೌಡ್ರ ಅಧ್ಯಕ್ಷತೆ ವಹಿಸುವರು ಎಂದರು.
ಶಾಸಕ ಸಿ ಸಿ ಪಾಟೀಲ್ ಹಾಗೂ ಎಂ ಆರ್ ಪಾಟೀಲ್ ಇವರಿಂದ ವಿದ್ಯಾರ್ಥಿಗಳಿಗೆ ಸನ್ಮಾನ, ಶಾಸಕ ಅರವಿಂದ ಬೆಲ್ಲದರಿಂದ ಪುರಸ್ಕಾರ ವಿತರಣೆ, ಮಾಜಿ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಅವರು ನೆನಪಿನ ಕಾಣಿಕೆ ವಿತರಿಸುವರು.ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಲಾಂಛನ ಬಿಡುಗಡೆಗೊಳಿಸಲಿದ್ದಾರೆ.
ಧಾರವಾಡ ಜಿಲ್ಲಾ ೨ಎ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಬಾಪೂಗೌಡ ಪಾಟೀಲ್ ಹಾಗೂ ಧಾರವಾಡ ಹಾಲು ಒಕ್ಕೂಟ ನಿರ್ದೇಶಕರಾದ ಶಿವಲೀಲಾ ವಿನಯ ಕುಲಕರ್ಣಿ ಭಾವಚಿತ್ರ ಅನಾವರಣ, ೨ಎ ಮೀಸಲಾತಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ವಿಜಯ ಕುಲಕರ್ಣಿ ಪುಸ್ತಕ ಬಿಡುಗಡೆಗೊಳಿಸುವರು, ನಗರ ಘಟಕ ಅಧ್ಯಕ್ಷ ಡಾ. ಸುರೇಶ ಕಮ್ಮಾರ, ಮಹಿಳಾ ಘಟದ ಅಧ್ಯಕ್ಷೆ ವಿನೋದಾ ನಾಗರಹಳ್ಳಿ ಹಾಗೂ ಗದಗ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಡಿವಾಳಪ್ಪ ಸಂಕದ ಉಪಸ್ಥಿತರಿರುವರು.
ಜಿಲ್ಲಾಧ್ಯಕ್ಷ ನಿಂಗಣ್ಣ ಕರಿಕಟ್ಟಿ, ರಾಷ್ಟಿçÃಯ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಿರೇಕೊಪ್ಪ, ಸದುಗೌಡ ಪಾಟೀಲ್ ಅಡಿವೆಪ್ಪ ಮನಮಿ, ನಾಗಪ್ಪ ಸಂಕದ, ಗುರುಶಾಂತಗೌಡ ಪಾಟೀಲ್,. ದೇವರಾಜ ದಾಡಿಭಾಯಿ, ವಿಜಯಲಕ್ಷಿ÷್ಮ ಪಾಟೀಲ್, ಶಾಂತಾದೇವಿ ನೀಡವಣಿ ಮುಖ್ಯ ಅತಿಥಿಗಳಾಗಿ ಹಾಗೂ ಅತಿಥಿಗಳಾಗಿ ಅನೇಕರು ಭಾಗವಹಿಸಲಿದ್ದಾರೆ ಎಂದರು.
ನವಲಗುAದ ತಾಲೂಕ ಪಂಚಮಸಾಲಿ ಸಮಾಜದ ನಗರ ಘಟಕ ಅಧ್ಯಕ್ಷ ಡಾ. ಸುರೇಶ ಕಮ್ಮಾರ, ಸಮಾಜದ ಹಿರಿಯರಾದ ಗಂಗಣ್ಣ ಮನಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಗುರುಪ್ರಸಾದ ಪಾಟೀಲ, ದ್ಯಾಮನಗೌಡ ಪಾಟೀಲ, ನಾಗನಗೌಡ ಪಾಟೀಲ, ಗೌರೀಶ ಕಮತರ, ಮಹೇಶ ಕುರ್ತಕೋಟಿ, ಮಲ್ಲಪ್ಪ ಕಿರೇಸುರ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು