ವಿಷಯ : ಸಿದ್ದಾರ್ಥ ಕಾಲೋನಿ, ವಾಜಪೇಯಿ ಲೇ-ಔಟ್ ಮುಖಾಂತರ ಹೋಗುವ
ನಗರದ ಸಿದ್ದಾರ್ಥ ಕಾಲೋನಿ, ವಾಜಪೇಯಿ ಲೇ-ಕೆ ಲೇ-ಔಟ್ಸ್ ಮುಖಾಂತರ ಹೋಗುವ ಹೆಚ್.ಎಲ್.ಸಿ. ಉಪ ಕಾಲುವೆಯಲ್ಲಿ ಸಿಕ್ಕಾಪಟ್ಟೆ ತ್ಯಾಜ್ಯದಿಂದ ತುಂಬಿರುತ್ತದೆ. ಸದರಿ ತ್ಯಾಜ್ಯವನ್ನು ಸುಮಾರು 2/3 ವರ್ಷಗಳಿಂದ ತ್ಯಾಜ್ಯವನ್ನು ತೆಗೆಸಿರುವುದಿಲ್ಲ. ಸಿದ್ಧಾರ್ಥ ಕಾಲೋನಿಯಿಂದ ವಾಜಪೇಯಿ ಲೇ-ಔಟ್ ವರೆಗೆ ನೋಡಿದಾಗ ಸಿಕ್ಕಾಪಟ್ಟೆ ತ್ಯಾಜ್ಯ ಇರುವುದು ಕಂಡುಬಂದಿರುತ್ತದೆ. ಸದರಿ ಕಾಲುವೆಯ ನೀರನ್ನು ಜನ, ಜಾನುವಾರಗಳು ಕುಡಿಯಲು ಉಪಯೋಗಿಸುತ್ತಾರೆ ಹಾಗೂ ಸದರಿ ಕಾಲುವೆಯಲ್ಲಿ ಬಟ್ಟೆಗಳನ್ನು ತೊಳೆಯುತ್ತಾರೆ. ಸದರಿ ತ್ಯಾಜ್ಯ ತೆಗೆಯದಿರುವುದರಿಂದ ರೋಗ, ರುಜಿನಗಳು ಬರುವ ಸಾಧ್ಯತೆ ಇರುತ್ತದೆ. ಸದರಿ ತ್ಯಾಜ್ಯದ ಚಿತ್ರದ ಪ್ರತಿಗಳನ್ನು ಈ ಪತ್ರದ ಜೊತೆಗೆ ಲಗತ್ತಿಸಲಾಗಿದೆ.
ಸಿದ್ಧಾರ್ಥ ಕಾಲೋನಿ, ವಾಜಪೇಯಿ ಲೇ-ಔಟ್, ದೊಡ್ಡಬಸವೇಶ್ವರ ನಗರದ ಮೂಲಕ ಹೋಗುವ ಕಾಲುವೆಯ ಒಂದು ಪಕ್ಕದಲ್ಲಿ ಜಾಲಿ ಗಿಡಗಳು ಬೆಳೆದಿದ್ದು, ಕಾಲುವೆಯ ಆವರಿಸಿಕೊಂಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿರುತ್ತದೆ. ರಸ್ತೆಯನ್ನು
ಆದ್ದರಿಂದ ಸದರಿ ಕಾಲುವೆಯಲ್ಲಿರುವ ತ್ಯಾಜ್ಯವನ್ನು ತೆಗೆಸಲು ಹಾಗೂ ಹಾಲಿ ಗಿಡಗಳನ್ನು ತೆರವುಗೊಳಿಸಲು ತಮ್ಮಲ್ಲಿ ಕೋರಲಾಗಿದೆ.
ಎಲ್. ಪಂಪನಗೌಡ
ಕನಕದುರ್ಗ ಬಡಾವಣೆ, ಮೋಕ ರಸ್ತೆ, ಬಳ್ಳಾರಿ