ಹಣ ಕೊಟ್ಟು ತೆಗೆದುಕೊಂಡು ಓಟು ಹಾಕುವವರೆಗೆರಾಜಕೀಯ ಮೌಲ್ಯ ಹುಡುಕುವುದು ಅಸಾಧ್ಯ: ಹೊರಟ್ಟಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜೂ,16-
ಈ ದೇಶದಲ್ಲಿ, ರಾಜ್ಯದಲ್ಲಿ ಎಲ್ಲಿವರೆಗೆ ಹಣ ಕೊಟ್ಟು, ತೆಗೆದುಕೊಂಡು ಓಟು ಹಾಕುವ ವ್ಯವಸ್ಥೆ ಇರುವವರೆಗೆ ರಾಜಕೀಯ ಮೌಲ್ಯ ಹುಡುಕುವುದು ಅಸಾಧ್ಯ ಎಂದು ವಿಧಾನ ಪರಿಷತ್ ಅಧ್ಯಕ್ಷ ಬಸವರಾಜ್ ಹೊರಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಅವರಿಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜಕೀಯದಲ್ಲಿ ಎಲ್ಲಿದೆ ಮೌಲ್ಯ. ಮೌಲ್ಯ ಇದ್ದವರು ರಾಜಕೀಯದಲ್ಲಿರಲು ಕಷ್ಟವಾಗುತ್ತಿದೆ. ಸದನದಲೋಮ್ಮೆ ರಾಮಕೃಷ್ಣ ಹೆಗಡೆ ಬಂಗಾರಪ್ಪ ಚರ್ಚೆ ನಡೆತಿತ್ತು. ಕೊನೆಗೆ ಇಬ್ಬರು ಮೌಲ್ಯ ಕಾಪಾಡೋದು ನಮ್ಮ ಧರ್ಮ ಎಂದು ಚರ್ಚೆ ಮುಗಿಸಿದ್ರು. ಅಂದು ರಾಜಕೀಯದಲ್ಲಿ ಮೌಲ್ಯ ಇತ್ತು ಇವತ್ತು ಎಲ್ಲಿದೆಂದರು.
ಈಗಿನ ಶಾಸಕರು ಸದನದಲ್ಲಿ ಪ್ರಶ್ನೆ ಕೇಳ್ತಾರೆ ಉತ್ತರ ಹೇಳೋವಾಗ ಅವರೇ ಇರೋದಿಲ್ಲ. ಹಿಂದೆ ಸದನ ಆರಂಭವಾಗಿ ಮುಗಿಯೋವರೆಗೂ ಇರುತ್ತಿದ್ರು. ಇವತ್ತು ಅದು ಉಳಿದಿಲ್ಲ. ಜನ ಕೂಡ ಹಾಗೇ ಅಗಿದ್ದಾರೆ. ಯಾರನ್ನು ಸದನದಲ್ಲಿ ಕೂಡಲು ಬಿಡಲ್ಲ, ಚೀಟಿ ಕೊಟ್ಟು ಹೊರಗೆ ಕರೆಸಿಕೊಳ್ಳುತ್ತಾರೆ. ಅಲ್ಲಿ ಇಲ್ಲಿಗೆ ಕರೆದುಕೊಂಡು ಹೋಗ್ತಾರೆಂದರು.
ಸಿಟಿ ರವಿ, ಲಕ್ಷ್ಮೀ ಹೆಬ್ಬಾಳ್ಕರ್ ಜಟಾಪಟಿ ವಿಚಾರ:
ಕಳೆದ ಡಿಸೆಂಬರ್ 19ರಂದು ಬೆಳಗಾವಿಯ ಸುವರ್ಣ ಸೌದದಲ್ಲಿ ಈ ಘಟನೆ ನಡೆದಿತ್ತು. ಸದನ ಇಲ್ಲದ ವೇಳೆ ನಡೆದಿತ್ತು..ಚರ್ಚೆ ಮಾಡಿ ಕಾನೂನು ಪರಿಶೀಲಿಸಿ ತೀರ್ಮಾನವನ್ನು ಕೊಟ್ಡಿದ್ದೇವು. ಸುಪ್ರೀಂ ಕೋರ್ಟ್ ಕೂಡ ಸಹ ಸಭಾಪತಿ ನಿರ್ಧಾರ ಸರಿಯಿದೆ ಎಂದು ಹೇಳಿದೆ. ಅದಾದ ಬಳಿಕ ಇಬ್ಬರು ಮತ್ತೊಮ್ಮೆ ದೂರು ನೀಡಿದ್ದಾರೆ. ನೈತಿಕ ಮೌಲ್ಯಗಳ ಸಮಿತಿ ( ಎತಿಕ್ ಕಮಿಟಿ)ಗೆ ಕೊಟ್ಟಿದ್ದೇನೆ. ಸದ್ಯಕ್ಕೆ ಈ ವಿಚಾರ ಪೆಂಡಿಂಗ್ ನಲ್ಲಿದೆಂದರು.