Home ಜಿಲ್ಲೆ ಮೇ.10 ಹೇಮರೆಡ್ಡಿ ಮಲ್ಲಮ್ಮ ಜಯಂತಿ

ಮೇ.10 ಹೇಮರೆಡ್ಡಿ ಮಲ್ಲಮ್ಮ ಜಯಂತಿ

Oplus_16908288

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.22: ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಮೇ10 ರಂದು ನಗರದಲ್ಲಿ ಆಚರಿಸುವ ಕುರಿತು ಸಹಾಯಕ ಆಯುಕ್ತ ಹೆಚ್.ಡಿ.ರಾಜೇಶ್  ನೇತೃತ್ವದಲ್ಲಿ ಇಂದು ಪೂರ್ವ ಸಿದ್ದತಾ ಸಭೆ ಡಿಸಿ ಕಚೇರಿಯ ಸಭಾಂಗಣದಲ್ಲಿ ನಡೆಯಿತು.

ಮಲ್ಲಮ್ಮನ ಭಾವಚಿತ್ರದ ಮೆರವಣಿಗೆ ಸಂಜೆ 5 ಕ್ಕೆ  ನಗರದ ದುರ್ಗಮ್ಮ ದೇವಸ್ಥಾನದಿಂದ ಜನಪದ ಕಲಾ ತಂಡಗಳೊಂದಿಗೆ ಆರಂಭಗೊಳ್ಳಲಿದೆ. ನಂತರ ವೇದಿಕೆ ಕಾರ್ಯಕ್ರಮ  ಸಂಜೆ 6.30 ಬಸವ ಭವನದಲ್ಲಿ ನಡೆಯಲಿದೆ.

ಮಲ್ಲಮ್ಮನ ಕುರಿತು ಉಪನ್ಯಾಸ, ವಚನಗಾಯನ ನಡೆಯಲಿದೆಂದು ಸಭೆಯಲ್ಲಿ ತಿಳಿಸಲಾಯ್ತು.

ಸಭೆಯಲ್ಲಿ ವೀರಶೈವ ಲಿಂಗಾಯತ ರಡ್ಡಿ ಸಮಾಜದ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್, ರಡ್ಡಿ ಸಮಾಜದ ಮುಖಂಡರುಗಳಾದ ಸಂಗನಕಲ್ಲು ಹಿಮಂತರಾಜ್,  ಜಾನೆಕುಂಟೆ ನೇಪಾಕ್ಷಪ್ಪ,    ಶಂಕ್ರಪ್ಪ, ಯುದಿಷ್ಟರ, ಜೋಳದರಾಶಿ ಬಸವರಾಜ್, ಕೋಳೂರು ಚಂದ್ರಶೇಖರಗೌಡ, ಕೋಳೂರು ವೆಂಕಟೇಶ್ ಗೌಡ, ಗೋನಾಳ್ ಮುರಹರಗೌಡ, ಕುರೆಕುಪ್ಪೆ ಮಲ್ಲಿಕಾರ್ಜುನ, ಕೆರೆನಳ್ಳಿ ಚಂದ್ರಶೇಖರ್, ಎಣ್ಣೆ ಎರಿಸ್ವಾಮಿ,ಬಣಾಪುರ ನಾಗರಾಜ್, ಬಿ.ಪುರುಷೋತ್ತಮರೆಡ್ಡಿ, ಲಿಂಗಾರೆಡ್ಡಿ, ಸಂಪತ್, ಹಲಕುಂದಿ ವೀರನಗೌಡ, ಯರಂಗಳಿ ಚಂದ್ರಶೇಖರ್ ಮೊದಲಾದವರು ಇದ್ದರು