
ಬೀದರ್:ಜ.29: ತಾಲೂಕಿನ ಜನವಾಡದ ಮಾಂಜ್ರಾ ನದಿಯ ಸೇತುವೆ ಬಳಿ ಬುಧವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಸಾವಿಗೀಡಾಗಿ, ಇನ್ನೊಬ್ಬ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ನಗರದ ಚಿದ್ರಿ ನಿವಾಸಿ ಪುರುಷೋತ್ತಮ (22) ಸ್ಥಳದಲ್ಲಿಯೇ ಮೃತನಾಗಿದ್ದು, ಭಾಗ್ಯರಾಜ (24) ಗಂಭೀರವಾಗಿ ಗಾಯಗೊಂಡಿದ್ದು, ಇಲ್ಲಿನ ಬ್ರಿಮ್ಸ್ಗೆ ದಾಖಲಿಸಲಾಗಿದೆ. ಈ ಇಬ್ಬರು ದ್ವಿಚಕ್ರ ವಾಹನದ ಮೇಲೆ ಔರಾದ್ ಕಡೆ ಹೋಗುವಾಗ ಘಟನೆ ನಡೆದಿದೆ. ಪಿಎಸ್ಐ ಬಾಸುಮಿಯಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜನವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























