ಬೀದರ:ಜೂ.26: ಆಣದುರದಲ್ಲಿ ಪ್ರಸ್ತುತ ಸಮಯದ ಒತ್ತಡದ ಬದುಕಿನಲ್ಲಿ ಮನುಜನಿಗೆ ಏನೂ ಮಾಡಲು ಸಮಯವೇ ಇಲ್ಲವಾಗಿದೆ. ಬೆಳಗಿನಿಂದ ಸಾಯಂಕಾಲದವರೆಗೆ ವೈಯಕ್ತಿಕ ಕಾರ್ಯಗಳು, ವ್ಯವಹಾರಗಳಲ್ಲಿ ತನ್ನ ತಾನೆ ಕಳೆದು ಹೋಗುತ್ತಿರುವುದು ನಿಜಕ್ಕೂ ವಿಷಾದನೀಯ. ಇದರಿಂದಾಗಿ ನೆಮ್ಮದಿಯು ಕಳೆದುಹೋಗಿದೆ ಮತ್ತು ಆರೋಗ್ಯವು ಹದಗೆಡವುತ್ತಿರುವುದು ಅಕ್ಷರಶಃ ಸತ್ಯ. ಇಂಥದರಲ್ಲಿ ನಾವು ಪ್ರತಿದಿನ 30 ನಿಮಿಷ ಯೋಗವನ್ನು ಮಾಡುವುದರಿಂದ ಉತ್ತಮ ಆರೋಗ್ಯವಿರಲು ಸಾಧ್ಯ ಎಂದು ಖ್ಯಾತ ಸಾಹಿತಿ ಎಂ.ಜಿ. ದೇಶಪಾಂಡೆ ಅವರು ಹೇಳಿದರು. ಅವರು ಇತ್ತೀಚಿಗೆ ಬೀದರ ತಾಲ್ಲೂಕಿನ ಆಣದೂರು ಗ್ರಾಮದಲ್ಲಿದ್ದ ಕಿಡ್ಸ್ ಹೋಪ್ ಕಾನ್ವೆಂಟ್ ಶಾಲೆಯವರು ಏರ್ಪಡಿಸಿದ್ದ ಯೋಗ ಶಿಬಿರ ವೇದಿಕೆಯಲ್ಲಿ ಯೋಗ ಕುರಿತು ಮಾತನಾಡಿದರು.ಈ ವೇಳೆ ನಾಟಿ ವೈದ್ಯರಾದ ನಿಂಗಪ್ಪ ಮತ್ತು ಡಾಕ್ಟರ್ ವಿಶ್ವನಾಥ್ ಉಪ್ಪಿನ ಅವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಡಾ. ಮುಖ್ಯೋಪಾಧ್ಯರಾದ ಪ್ರಶಾಂತ, ಶಿಕ್ಷಕ ವೃಂದದವರಾದ ಸಲೋಮಿ ಬೀದರ ಇವರು ಶಾಲೆಯಲ್ಲಿ ಹಾಜರುದ್ದರು. ಭಾಗ್ಯವತಿ ಕಾರ್ಯಕ್ರಮಕ್ಕೆ ಸ್ವಾಗತವನ್ನು ಕೋರಿದರೆ ವಿಕ್ಟೋರಿಯಾರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಶಾಲೆಯಲ್ಲಿ ನೂರಾರು ಮಕ್ಕಳು ಯೋಗ ಮಾಡಿದರು. ಕೊನೆಗೆ ಶಿಕ್ಷಕಿ ಭಾರತಿಯವರು ವಂದಿಸಿದರು.