ವನ್ಯಜೀವಿಗಳು ಮನುಕುಲಕ್ಕೆ ಉಪಕಾರಿ:ಕೊಟ್ಟೂರ

ಮುದ್ದೇಬಿಹಾಳ :ಜೂ.19: ವನ್ಯಜೀವಿಗಳು ಮನುಕುಲಕ್ಕೆ ಉಪಕಾರಿಯಾಗಿವೆ ಎಂದು ಹೊಸಪೇಟೆ ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಸಮದ್ ಕೊಟ್ಟೂರ ಹೇಳಿದರು.
ತಾಲ್ಲೂಕಿನ ಬಿದರಕುಂದಿಯಲ್ಲಿ ಪ್ರಾದೇಶಿಕ ಅರಣ್ಯ ವಿಭಾಗ ವಿಜಯಪುರ , ಪ್ರಾದೇಶಿಕ ಅರಣ್ಯ ವಲಯ ಮುದ್ದೇಬಿಹಾಳ ಮತ್ತು ಸರ್ಕಾರಿ ಆದರ್ಶ ವಿದ್ಯಾಲಯದ ಬಿದರಕುಂದಿ ಇವರ ಸಂಯುಕ್ತ ಆಶಯದಲ್ಲಿ ಮಂಗಳವಾರ ನಡೆದ ವಿಶ್ವ ಮೊಸಳೆ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1975 ರಲ್ಲಿ ವಿಶ್ವಸಂಸ್ಥೆ ವಿಶ್ವ ಮೊಸಳೆ ದಿನ ಎಂದು ಘೋಷಣೆ ಮಾಡಿದೆ.ಮೊಸಳೆ ಜೀವಿತಕಾಲ ಅವಗಳ ಪ್ರಭೇದ, ವಿಧಗಳು, ವಿವಿಧ ರಾಜ್ಯಗಳು ಮತ್ತು ದೇಶಗಳಲ್ಲಿ ಬೇರೆ ಬೇರೆ ಪ್ರಭೇದದ ಮೊಸಳೆಗಳು ಇವೆ ಎಂಬುದನ್ನು ತಿಳಿಸಿದರು.
ವಿಜಯಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ ಮಾತನಾಡಿ, ವನ್ಯಜೀವಿಗಳನ್ನು ನಾಶ ಮಾಡದೇ ಪ್ರಕೃತಿಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಅವುಗಳ ಉಳಿವು ಅಗತ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಸ್.ಎಲ್.ಪಾಟೀಲ್ ಮಾತನಾಡಿ, ಅರಣ್ಯಗಳನ್ನು ಸಂರಕ್ಷಿಸುವದರಿಂದ ಶುದ್ಧ ಗಾಳಿ ಸಿಗುವುದು. ಮನಕುಲಕ್ಕೆ ಬೆಲೆ ಕಟ್ಟಲಾಗದಷ್ಟು ಬದುಕಲು ಅವಕಾಶ ಮಾಡಿಕೊಡುತ್ತದೆ ಎಂದರು.
ವನ್ಯಜೀವಿಗಳ ಸಂರಕ್ಷಣೆ ಮಾಡುತ್ತಿರುವ ತಂಗಡಗಿ ಗ್ರಾಮದ ಸ್ನೇಕ್ ಭಾμÁ ಚಪ್ಪರಬಂದ್, ನಾಗೇಶ್ ವಡ್ಡರ್, ಯಮನಪ್ಪ ಗೊಲ್ಲರ, ಎಸ್.ವೈ.ಯರಝರಿ ಅವರು ಗ್ರಾಮಾಂತರ ಪ್ರದೇಶಗಳಲ್ಲಿ ಮೊಸಳೆ , ವಿಷ ಜಂತು ಹಾವುಗಳು ಯಾವುದೇ ರೀತಿ ಜನರಿಗೆ ಹಾನಿಯಾಗದಂತೆ ಮತ್ತು ಜಲಚರಗಳನ್ನು ಸಂರಕ್ಷಣೆ ಮಾಡುತ್ತಿರುವ ಕಾರಣ ಅವರಿಗೆ 10 ಲಕ್ಷ ರೂ. ವಿಮಾ ನೋಂದಣಿ ಬಾಂಡ್ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಾಗ್ಯವಂತ ಮಸೂದಿ,ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾದಾರ,ಇಂಡಿ ಅರಣ್ಯಾಧಿಕಾರಿ ಎಸ್.ಜೆ.ಸಂಗಾಲಕ,ಮುಖ್ಯಗುರು ಅನಿಲ್‍ಕುಮಾರ್ ರಾಥೋಡ ,ರಾಜೇಂದ್ರ ಹೊನ್ನೂರ್,ಎ.ಸಿ.ಕೆರೂರ, ಎನ್ .ಎಸ್.ಬಿರಾದಾರ,ವಿಠ್ಠಲ್ ಬರಟಗಿ ಕಾರ್ಯಕ್ರಮ ನಿರ್ವಹಿಸಿದರು.