
ನವದೆಹಲಿ,ಮಾ.೨೨- ರಿಲಯನ್ಸ್ ಕಮ್ಯುನಿಕೇಷನ್ಸ್ -ಆರ್ಸಿಒಎಂ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ -ಎಸ್ಬಿಐ ಒಳಗೊಂಡ ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐ ಇನ್ನಷ್ಟು ತೀವ್ರಗೊಳಿಸಿದ್ದು ಉದ್ಯಮಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ನ ಮೂವರು ಮಾಜಿ ಉನ್ನತ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದೆ.
ಎಸ್ಬಿಎಲ್ ನೀಡಿದ ಔಪಚಾರಿಕ ದೂರಿನ ನಂತರ ದಾಖಲಾಗಿರುವ ಎಫ್ಐಆರ್ಗೆ ಸಂಬಂಧಿಸಿದಂತೆ ಸಿಬಿಐ, ಆರ್ ಸಿಒಎಂ ಸಮೂಹದ ಮಾಜಿ ವ್ಯವಸ್ಥಾಪಕ ನಿರ್ದೇಶಕರಾದ ಸತೀಶ್ ಸೇಠ್ ಮತ್ತು ಗೌತಮ್ ದೋಷಿ ಅವರಿಗೆ ಸಮನ್ಸ್ ಜಾರಿ ಮಾಡಿದೆ.
ಸಮೂಹದ ಮೂರನೇ ಮಾಜಿ ವ್ಯವಸ್ಥಾಪಕ ನಿರ್ದೇಶಕ ಅಮಿತಾಭ್ ಜುನ್ಜುನ್ವಾಲಾ ಅವರನ್ನು ಪ್ರಶ್ನಿಸಿದ ನಂತರ ಇಬ್ಬರಿಗೆ ನೋಟೀಸ್ ಜಾರಿ ಮಾಡಿದೆ
ಈ ಹಿಂದೆ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ನಲ್ಲಿ ಉಪಾಧ್ಯಕ್ಷ ಸ್ಥಾನ ಹೊಂದಿದ್ದ ಮತ್ತು ರಿಲಯನ್ಸ್ ಟೆಲಿಕಾಂ ಲಿಮಿಟೆಡ್ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದ ಸೇಥ್, ಆರ್ಟಿಎಲ್ನ ಮಂಡಳಿಯ ಸದಸ್ಯರೂ ಆಗಿದ್ದ ದೋಷಿ ಜೊತೆಗೆ ವಿಚಾರಣೆಗೆ ಎದುರಿಸಿದ್ಧಾರೆ
ಮಾರ್ಚ್ ೧೯ ಮತ್ತು ೨೦ ರಂದು ಅನಿಲ್ ಅಂಬಾನಿ ಹಾಜರಾಗಲು ನಿಗದಿಯಾಗಿದ್ದ ದಿನಾಂಕಕ್ಕೂ ಮುನ್ನ ಮೂರು ದಿನಗಳ ಕಾಲ ಸಿಬಿಐ ಜುಂಜುನ್ವಾಲಾ ಅವರನ್ನು ವಿಚಾರಣೆಗೆ ಒಳಪಡಿಸಿದೆ ಎಂದು ಮೂಲಗಳು ತಿಳಿಸಿವೆ
ಈ ಹಿಂದೆ ರಿಲಯನ್ಸ್ ಕ್ಯಾಪಿಟಲ್ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈ ಮೂವರು ಕಾರ್ಯನಿರ್ವಾಹಕರು ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ನಲ್ಲಿ ೧೫ ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ ಹಿರಿಯ ಅಧಿಕಾರಿಗಳಾಗಿದ್ಧಾರೆ
ಸೇಥ್ ಮತ್ತು ಜುಂಜುನ್ವಾಲಾ ಇಬ್ಬರೂ ಅವಿಭಜಿತ ರಿಲಯನ್ಸ್ ಗ್ರೂಪ್ನ ಅನುಭವಿಗಳಾಗಿದ್ದು, ಹೈಪೊ?ರಫೈಲ್ ಕಾಪೆರ್ರೇಟ್ ವಿಲೀನಕ್ಕೆ ಎರಡು ದಶಕಗಳಿಗೂ ಹೆಚ್ಚು ಕಾಲ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನೊಂದಿಗೆ ಸಂಬಂಧ ಹೊಂದಿದ್ದರು
ನಂತರ ಮೂವರೂ ಸ್ವತಂತ್ರ ಉದ್ಯಮಗಳಿಗೆ ತೆರಳಿದ್ದಾರೆ. ಜುಂಜುನ್ವಾಲಾ ಪ್ರಸ್ತುತ ದುಬೈ ಮತ್ತು ಸಿಂಗಾಪುರದಲ್ಲಿ ಕಾರ್ಯಾಚರಣೆಗಳೊಂದಿಗೆ ಸ್ವತಂತ್ರ ನಿಧಿ ವ್ಯವಸ್ಥಾಪಕರಾಗಿದ್ದಾರೆ. ಸೇಥ್ ಈಗ ರಿಯಲ್ ಎಸ್ಟೇಟ್ ಮತ್ತು ಸಾಫ್ಟ್ವೇರ್ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಮುಖ ಕಂಪನಿಗಳ ಮಂಡಳಿಗಳಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ, ದೋಷಿ ಪ್ರಸ್ತುತ ಪ್ರಮುಖ ತೆರಿಗೆ ಮತ್ತು ವಿಲೀನಗಳು ಮತ್ತು ಸ್ವಾಧೀನ ಸಲಹಾ ಸಂಸ್ಥೆ ಮುನ್ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಿಲ್ ಅಂಬಾನಿ ಗ್ರೂಪ್ ಕಂಪನಿಗಳ ವಿರುದ್ಧ ವಿವಿಧ ಬ್ಯಾಂಕುಗಳ ದೂರುಗಳಿಗೆ ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಸಿಬಿಐಗೆ ಸೂಚಿಸಿತ್ತು.
ಕಳೆದ ವರ್ಷ, ೧೧ ಬ್ಯಾಂಕುಗಳನ್ನು ಒಳಗೊಂಡಿರುವ ಒಕ್ಕೂಟದ ಪ್ರಮುಖ ಬ್ಯಾಂಕ್ ಆಗಿರುವ ಎಸ್ಬಿಐ ಸಲ್ಲಿಸಿದ ದೂರಿನ ಆಧಾರದ ಮೇಲೆ ಮೆಸರ್ಸ್ ರಿಲಯನ್ಸ್ ಕಮ್ಯುನಿಕೇಷನ್ಸ್ ವಿರುದ್ಧ ೨,೯೨೯ ಕೋಟಿ ರೂ. ವಂಚನೆ ಪ್ರಕರಣದಲ್ಲಿ ಸಿಬಿಐ ಪ್ರಕರಣ ದಾಖಲಿಸಿತ್ತು.
೨೦೧೩-೧೭ರ ಅವಧಿಯಲ್ಲಿ ಗುಂಪು ಘಟಕಗಳ ನಡುವೆ ಪರಸ್ಪರ ಸಂಬಂಧ ಹೊಂದಿರುವ ಮತ್ತು ವೃತ್ತಾಕಾರದ ವಹಿವಾಟುಗಳ ಮೂಲಕ ಸಾಲದ ಹಣ ದೊಡ್ಡ ಪ್ರಮಾಣದಲ್ಲಿ ತಿರುಗಿಸಲಾಗಿದೆ ಮತ್ತು ದುರುಪಯೋಗಪಡಿಸಿಕೊಂಡಿದೆ. ಇದರ ಪರಿಣಾಮವಾಗಿ ೧೭ ಸಾರ್ವಜನಿಕ ವಲಯದ ಬ್ಯಾಂಕುಗಳು ಒಳಗೊಂಡ ಒಟ್ಟು ೧೯,೬೯೪ ಕೋಟಿ ರೂ.ಗಳಲ್ಲಿ ಎಸ್ಬಿಐಗೆ ೨.೯೨೯ ಕೋಟಿ ರೂ. ನಷ್ಟವಾಗಿದೆ.





























