ನವದೆಹಲಿ, ಜೂ,೧೩- ನೈಋತ್ಯ ಮುಂಗಾರು ಜೂನ್ ೨೫ರ ವೇಳೆಗೆ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ವಾಯುವ್ಯ ಭಾರತದ ವಿವಿಧ ಭಾಗಗಳಲ್ಲಿ ಬಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ,
ಸಾಮಾನ್ಯ ದಿನಾಂಕಗಳಿಗಿಂತ ಮುಂಚಿತವಾಗಿ ದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಬಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ್ದು ಮುನ್ಸೂಚನೆ ವಹಿಸುವಂತೆ ಸೂಚಿಸಿದೆ.
ಈ ವರ್ಷದ ಮುಂಗಾರು ಮೇ.೨೪ ರಂದು ಕೇರಳ ತಲುಪಿಸಿದೆ. ೨೦೦೯ರ ಮೇ ೨೩ ರಂದು ಮುಂಗಾರು ಮುಂತವಾಗಿ ಆಗಮಿಸಿದ ನಂತರ ಈ ವರ್ಷ ಅವಧಿಗಿಂತ ಮುಂಚೆಯೇ ಮುಂಗಾರು ಕಾಣಿಸಿಕೊಂಡಿದೆ.
ಅರೇಬಿಯನ್ ಸಮುದ್ರ ಮತ್ತು ಬಂಗಾಳಕೊಲ್ಲಿಯ ಮೇಲೆ ತೀವ್ರವಾಯು ಬಾರ ಕುಸಿತದಿಂದ ಬಾರಿ ಮಳೆಯಾಗುವ ಸಾಧ್ಯತೆ ಇದೆ. ಮುಂಬೈ ಸೇರಿದಂತೆ ಮಧ್ಯ ಮಹಾರಾಷ್ಟ್ರದ ಭಾಗಗಳನ್ನು ಮತ್ತು ಮೇ ೨೯ ರ ವೇಳೆಗೆ ಸಂಪೂರ್ಣ ಈಶಾನ್ಯ ಮುಂಗಾರು ಕಾಣಿಕೊಂಡಿದೆ.
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ವಿವಿಧ ಭಾಗಗಳಲ್ಲಿ ಜೂನ್ ಆರಂಭದಿಂದ ಮಳೆಯ ಕೊರತೆ ಆಗಲಿದ್ದು ತಾಪಮಾನದಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ. ಜೂನ್ ೮ ರಿಂದ ೯ ರಿಂದ ವಾಯುವ್ಯ ಮತ್ತು ಮಧ್ಯ ಭಾರತದ ದೊಡ್ಡ ಭಾಗಗಳಲ್ಲಿ ಶಾಖದ ಅಲೆಯ ಪರಿಸ್ಥಿತಿ ಕಾಣಿಸಿಕೊಳ್ಳಲಿದೆ ಎಂದು ಮುನ್ಸೂಚನೆ ನೀಡಿದೆ
ಜೂನ್ ೧೮ ರ ವೇಳೆಗೆ ಮುಂಗಾರು ಮಧ್ಯ ಮತ್ತು ಪೂರ್ವ ಭಾರತದ ಉಳಿದ ಭಾಗಗಳು ಮತ್ತು ವಾಯುವ್ಯ ಭಾರತದ ಕೆಲವು ಪ್ರದೇಶಗಳಲ್ಲಿ ಬಾರಿ ಮಳೆ ಬೀಳುವ ಸಾಧ್ಯತೆ ಇದೆ, ಜೊತೆಗೆ ಜೂನ್ ೧೯ ಮತ್ತು ಜೂನ್ ೨೫ ರ ನಡುವೆ ವಾಯುವ್ಯ ಭಾರತದ ಹೆಚ್ಚಿನ ಭಾಗಗಳನ್ನು ಆವರಿಸುವ ನಿರೀಕ್ಷೆಯಿದೆ ಎನ್ನಲಾಗಿದೆ
ಜೂನ್ ೨೭ರ ಸಾಮಾನ್ಯ ಮಳೆಗಿಂತ ಮುಂಚಿತವಾಗಿ, ಜೂನ್ ೨೨ ರಿಂದ ೨೩ ರ ವೇಳೆಗೆ ಈ ವ್ಯವಸ್ಥೆಯು ದೆಹಲಿಯನ್ನು ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ
ಮೇ ತಿಂಗಳಲ್ಲಿ ಜೂನ್ ಮತ್ತು ಸೆಪ್ಟೆಂಬರ್ ಮಾನ್ಸೂನ್ ಋತುವಿನಲ್ಲಿ ದೇಶದಲ್ಲಿ ದೀರ್ಘಾವಧಿಯ ಸರಾಸರಿ ಮಳೆಯಾದ ೮೭ ಸೆಂ.ಮೀ.ನಷ್ಟು ೧೦೬ ಪ್ರತಿಶತವನ್ನು ಮಳೆ ಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದೆ
ಈ ೫೦ ವರ್ಷಗಳ ಸರಾಸರಿಯಲ್ಲಿ ಶೇಕಡಾ ೯೬ ರಿಂದ ೧೦೪ ರ ನಡುವಿನ ಮಳೆಯನ್ನು “ಸಾಮಾನ್ಯ” ಎಂದು ಪರಿಗಣಿಸಲಾಗುತ್ತದೆ. ಲಡಾಖ್, ಹಿಮಾಚಲ ಪ್ರದೇಶದ ಪಕ್ಕದ ಪ್ರದೇಶಗಳು, ಈಶಾನ್ಯ ಮತ್ತು ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕೆಲವು ಭಾಗಗಳನ್ನು ಹೊರತುಪಡಿಸಿ, ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ.
ಪಂಜಾಬ್, ಹರಿಯಾಣ, ಕೇರಳ ಮತ್ತು ತಮಿಳುನಾಡಿನ ಕೆಲವು ಪ್ರತ್ಯೇಕ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಬಹುದು. ದೇಶದ ಕೃಷಿ ವಲಯಕ್ಕೆ ಮುಂಗಾರು ನಿರ್ಣಾಯಕವಾಗಿದೆ.