ಬೀದರ್: ಜೂ.26:ಇತ್ತಿಚೀಗೆ ಝಿ ಕನ್ನಡ ನ್ಯುಜ್ನ ಸರಿಗಮಪ-21ರ ವಿಜೇತೆ ಕು.ಶಿವಾನಿ ತಂದೆ ಶಿವದಾಸ ಸ್ವಾಮಿ ಅವರ ಅಭಿನಂದನಾ ಸಮಾರಂಭ ಈ ತಿಂಗಳ 29ರಂದು ಭಾನುವಾರ ಸಾಯಂಕಾಲ 7 ಗಂಟೆಗೆ ನಗರದ ಲಾಡಗೇರಿ ಹಿರೇಮಠ ಸಂಸ್ಥಾನದಲ್ಲಿ ಅರ್ಥಪೂರ್ಣ ಆಚರಣೆಗೆ ನಿರ್ಧರಿಸಲಾಯಿತು.
ಬುಧವಾರ ಸಂಜೆ ಶ್ರೀಮಠದಲ್ಲಿ ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.
ಶ್ರೀಮಠದ ಅಧಿಪತಿ ಪೂಜ್ಯ ಷ.ಬ್ರ ಗಂಗಾಧರ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ರ್ಯಕ್ರಮ ರೂಪು, ರೇಷಗಳ ಬಗ್ಗೆ ಚರ್ಚಿಸಲಾಯಿತು.
ಇದೊಂದು ರಾಜಕೀಯ ರಹಿತ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಯಾವುದೇ ರಾಜಕೀಯ ಧೂರಣಿರಿಗಾಗಲಿ ಅಥವಾ ಜನಪ್ರತಿನಿಧಿಗಳಿಗೆ ಅವ್ಹಾನಿಸದೇ ಪೂಜ್ಯರು ಹಾಗೂ ಸಂಗೀತ ದಿಗ್ಗಜರನ್ನು ಕರೆಯಿಸಿ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದೆ ಎಂದು ಸಮಾರಂಭದ ಆಯೋಜಕರಲ್ಲೊಬ್ಬರಾದ ಪತ್ರಕರ್ತ ಶಿವಕುಮಾರ ಸ್ವಾಮಿ ಸಭೆಗೆ ತಿಳಿಸಿದರು.
ಲಾಡಗೇರಿ ಹಿರೇಮಠ ಸಂಸ್ಥಾನದ ಪೂಜ್ಯ ಷ.ಬ್ರ ಗಂಗಧರ ಶಿವಾಚಾರ್ಯರ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಲಬರ್ಗಾ ಶ್ರೀಗಳು, ಚಾಂಬೋಳ ಶ್ರೀಗಳು, ಹೆಡಗಾಪುರ ಶ್ರೀಗಳು, ಯದಲಾಪುರ ಪೂಜ್ಯರನ್ನು ಅವ್ಹಾನಿಸಲು ಸಭೆ ನಿರ್ಧರಿಸಿತು.
ಆರಂಭದಲ್ಲಿ ಕು.ಶಿವಾನಿಗೆ ವೇದಿಕೆ ಒದಗಿಸಿಕೊಡುವಲ್ಲಿ ಪ್ರಮುಖರಲ್ಲೊಬ್ಬರಾದ ಖ್ಯಾತ ಸಂಗೀತಗಾರರಾದ ರಾಜೇಂದ್ರಸಿಂಗ್ ಪವಾರ, ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ಅಧ್ಯಕ್ಷರಾದ ಪೆÇ್ರ.ಎಸ್.ವಿ ಕಲ್ಮಠ ಅವರನ್ನು ಅವ್ಹಾನಿಸಲು ಸಭೆ ಅನುಮೊದಿಸಿತು.
ಜಂಗಮ ಸಮಾಜದ ಎಲ್ಲ ಗಣ್ಯಾತಿ ಗಣ್ಯರನ್ನು ಕುಟುಂಬ ಸಮೇತ ಕರೆಯಿಸಿ, ಇದೊಂದು ಜಾತ್ರೆ ರಿತಿಯಲ್ಲಿ ಜಮಾಯಿಸದೇ ಚಿಂತಕರನ್ನು ಹಾಗೂ ಸಮಾಜದ ಕಲಾವಿದರನ್ನು ಅವ್ಹಾನಿಸಿ ಒಂದು ಐತಿಹಾಸಿಕ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ಶ್ರೀಕಾಂತ ಸ್ವಾಮಿ ಸೋಲಪುರ ತಿಳಿಸಿದರು.
ಕಾರ್ಯಕ್ರಮ ವ್ಯವಸ್ಥಿತ ರೀತಿಯಲ್ಲಿ ನಡೆಯುವಂತಾಗಲು ಸಮಿತಿಗಳನ್ನು ನೇಮಿಸಲಾಯಿತು. ರೇವಣಸಿದ್ದಯ್ಯ ಸ್ವಾಮಿ ಹೆಡಗಾಪುರ ಅವರನ್ನು ಹಣಕಾಸು ಸಮಿತಿಗೆ, ಮಹೇಶ್ವರ ಸ್ವಾಮಿ ಅವರಿಗೆ ವೇದಿಕೆ ಜವಾಬ್ದಾರಿ, ಪ್ರಚಾರ ಸಮಿತಿಗೆ ಶಿವಕುಮಾರ ಸ್ವಾಮಿ ಹಾಗೂ ಮಹಾರುದ್ರ ಡಾಕುಳಗಿ ಅವರನ್ನು ಹಾಗೂ ಮಹಾಪ್ರಸಾದ ಜವಾಬ್ದಾರಿಯನ್ನು ವಿಶ್ವನಾಥ ಸ್ವಾಮಿ ಕೊಳ್ಳುರ ಅವರಿಗೆ ನೀಡಲಾಯಿತು. ಅವ್ಹಾನಿತರನ್ನು ಬರಮಾಡಿಕೊಳ್ಳುವ ಜವಾಬ್ದಾರಿಯನ್ನು ಕಾರ್ತಿಕ ಮಠಪತಿಗೆ ವಹಿಸಲಾಯಿತು. ಒಟ್ಟಾರೆ ಇದೊಂದು ಅರ್ಥಗರ್ಭಿತ ಕಾರ್ಯಕ್ರಮ ಮಾಡಲು ಸಭೆ ಒಪ್ಪಿಗೆ ಸೂಚಿಸಿತು.
ಸಮಾಜದ ಹಿರಿಯರಾದ ಪೆÇ್ರ.ಕುಮಾರ ಸ್ವಾಮಿ ಹಿರೇಮಠ ಅವರು ಈ ಸಂದರ್ಭದಲ್ಲಿ ಮಾತನಾಡಿ, ಕು.ಶಿವಾನಿ ಸ್ವಾಮಿ ತನ್ನ ಅದ್ಭುತ ಕಲೆ ಪ್ರದರ್ಶಿಸಿ ನಾಡಿಗಷ್ಟೆ ಅಲ್ಲ, ರಾಷ್ಟ್ರ ಮಟ್ಟದಲ್ಲಿ ಮಿಂಚುವ ಪ್ರತಿಭೆಯಾಗಲಿದ್ದಾಳೆ. ಅಂಥ ಕುಡಿಗಳಿಗೆ ಗೌರವಿಸಿ ಪೆÇ್ರೀತ್ಸಾಹಿಸುವುದು ನಮ್ಮ ಸಮಾಜದ ಜವಾಬ್ದಾರಿ. ಹಾಗಾಗಿ ಅಂದು ನಡೆಯುವ ಕಾರ್ಯಕ್ರಮದಲ್ಲಿ ನಮ್ಮ ಜಂಗಮ ಸಮಾಜ ಬಾಂಧವರು ಕುಟುಂಬ ಸಮೇತ ಆಗಮಿಸಿ ಶಿವಾನಿ ಸ್ವಾಮಿಗೆ ಆಶಿರ್ವದಿಸಬೇಕೆಂದು ಕರೆ ಕೊಟ್ಟರು.
ಸಮಾಜದ ಪ್ರಮುಖರಾದ ಸಂಗಮೇಶ ಸ್ವಾಮಿ, ರಾಜಕುಮಾರ ಸ್ವಾಮಿ, ಸೋಮಶೇಖರ ಸ್ವಾಮಿ ಹಾಗೂ ಇತರರು ಸಭೆಯಲ್ಲಿ ಭಾಗವಹಿಸಿದರು.